Job Description: * ಇತ್ತೀಚಿಗೆ ಕೀನ್ಯಾದ ಮಾಜಿ ಪ್ರಧಾನಿಯವರ ಪುತ್ರಿಗೆ, ಭಾರತದ ಕೇರಳದ ಮೂಲದ ನಾಟಿ ವೈದ್ಯ ಚಿಕಿತ್ಸೆಯ ಮೂಲಕ ಚಿಕಿತ್ಸೆಯನ್ನು ನೀಡಲಾಗಿದೆ, ಇದರಿಂದಾಗಿ ಆ ಪುತ್ರಿಗೆ ಕಣ್ಣಿನ ದೃಷ್ಠಿ ಮರಳಿದೆ ಎಂದು ಕೇರಳದ ಮೂಲದ ನಾಟಿ ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಕೀನ್ಯಾ ಮಾಜಿ ಪ್ರಧಾನಿ ಅವರು ಭಾರತದಲ್ಲಿನ ಈ ವ್ಯವಸ್ಥೆಗಾಗಿ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ. * ಕೀನ್ಯಾ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ರೋಸ್ ಮೇರಿಗೆ ಪುತ್ರಿಯು ಬ್ರೈನ್ ಟ್ಯೂಮರ್ ರೋಗದಿಂದ ಬಳಲುತ್ತಿದ್ದರು, ಇವರಿಗೆ ಈ ಹಿಂದೆ 2017 ರಲ್ಲಿ ನೈರೋಬಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಇದರಿಂದಾಗಿ ಈ ಪುತ್ರಿ ಕಣ್ಣಿನ ದೃಷ್ಠಿಯನ್ನು ಕಳೆದುಕೊಂಡಿದ್ದಳು. ಇದಾದ ಬಳಿಕ 2019 ರಲ್ಲಿ ಕೆಲ ಮೂಲಗಳ ಮಾಹಿತಿಯಿಂದ ಕೇರಳದ ಕೂಥಟ್ಟುಕುಲಂನಲ್ಲಿರುವ ಆಯುರ್ವೇದ ಕಣ್ಣಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಇವರನ್ನು ದಾಖಲಿಸಲಾಗಿತ್ತು. ಇದೀಗ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಪುತ್ರಿ ರೋಸ್ ಮೇರಿ ಅವರಿಗೆ ಕೇರಳದ ಆಯುರ್ವೇದ ಚಿಕಿತ್ಸೆಯನ್ನು ಪಡೆದ ನಂತರ ಕಣ್ಣಿನ ದೃಷ್ಠಿ ಮರಳಿದೆ ಎಂದು ತಿಳಿಸಿದ್ದಾರೆ. * ಈ ಮಾಹಿತಿಯನ್ನು ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರು, ಆಯುರ್ವೇದ ಚಿಕಿತ್ಸೆಯಿಂದಾಗಿ ನನ್ನ ಮಗಳ ಕಣ್ಣಿನ ದೃಷ್ಠಿ ಮರಳಿದೆ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಈ ಆಯುರ್ವೇದ ಚಿಕಿತ್ಸೆಯ ವಿಧಾನವನ್ನು ಆಫ್ರೀಕಾದಲ್ಲಿಯು ಪರಿಚಯಿಸುವಂತೆ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇಳಿಕೊಂಡಿದ್ದಾರೆ. ಹಾಗೂ ಮೋದಿ ಅವರಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ. * ಆಯುರ್ವೇದ: ಇದೊಂದು ಭಾರತೀಯ ಉಪಖಂಡದಲ್ಲಿ ಭಾರತೀಯ ಬೇರುಗಳನ್ನು ಹೊಂದಿರುವ ಪರ್ಯಾಯ ಔಷಧ ವ್ಯವಸ್ಥೆಯಾಗಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಆಯುರ್ವೇದ ವೈದ್ಯರು ವೈದ್ಯಕೀಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಈ ಆಯುರ್ವೇದವನ್ನು ಭಾರತ ಹಾಗೂ ನೇಪಾಳದಲ್ಲಿ ಹೆಚ್ಚು ಅಭ್ಯಾಸ ಮಾಡಲಾಗುತ್ತಿದೆ, ಇಲ್ಲಿನ 80% ಜನಸಂಖ್ಯೆಯು ಇದನ್ನು ಬಳಕೆ ಮಾಡುತ್ತದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಆಯುರ್ವೇದ ಚಿಕಿತ್ಸೆಗಳು '2' ಸಹಸ್ರಮಾನಗಳಿಗಿಂತ ಅಧಿಕ ವಿಭಿನ್ನವಾಗಿವೆ ಹಾಗೂ ವಿಕಸನಗೊಂಡಿವೆ. ಚಿಕಿತ್ಸೆಗಳಲ್ಲಿ ಗಿಡಮೂಲಿಕೆ ಔಷಧಿಗಳು, ವಿಶೇಷ ಆಹಾರಗಳು, ಧ್ಯಾನ, ಯೋಗ, ಮಸಾಜ್, ವಿರೇಚಕಗಳು, ಎನಿಮಾಗಳು ಹಾಗೂ ವೈದ್ಯಕೀಯ ತೈಲಗಳು ಒಳಗೊಂಡಿವೆ. ಹೆಚ್ಚಾಗಿ ಆಯುರ್ವೇದದ ಸಿದ್ಧತೆಗಳು ಗಿಡಮೂಲಿಕೆ ಸಂಯುಕ್ತಗಳು, ಖನಿಜಗಳು ಮತ್ತು ಲೋಹದ ಪದಾರ್ಥಗಳನ್ನು ಆಧರಿಸಿವೆ. * ಸುಶ್ರುತ ಸಂಹಿತೆಯಲ್ಲಿ ಆಯುರ್ವೇದದ ಹಿಂದೂ ದೇವರಾದ ಧನ್ವಂತರಿಯು ವಾರಣಾಸಿಯ ರಾಜನಾಗಿ ಹಾಗೂ ಸುಶ್ರುತ ಸೇರಿದಂತೆ ವೈದ್ಯರ ಗುಂಪಿನಂತೆ ಸ್ವತಃ ಅವತರಿಸಿದನೆಂದು ಸುಶ್ರುತ ಬರೆದಿದ್ದಾನೆ. ಇದೀಗ ಆಯುರ್ವೇದವನ್ನು ಪಾಶ್ಚಿಮಾತ್ಯ ಬಳಕೆಗೆ ಅಳವಡಿಸಲಾಗಿದೆ, ಈ ಹಿಂದೆ 1970 ರ ದಶಕದಲ್ಲಿ ಬಾಬಾ ಹರಿದಾಸ್ ಹಾಗೂ 1980 ರ ದಶಕದಲ್ಲಿ ಮಹರ್ಷಿ ಆಯುರ್ವೇದದಿಂದ ಆಯುರ್ವೇದವು ಇತಿಹಾಸಪೂರ್ವ ಕಾಲದಲ್ಲಿ ಹುಟ್ಟಿಕೊಂಡಿದೆ ಎಂದು ಅನೇಕ ವಿದ್ವಾಂಸರು ಪ್ರತಿಪಾದಿಸುತ್ತಾರೆ.