Job Description: ➤ ಕರ್ನಾಟಕದ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ (KPSC KAS, PSI, FDA, SDA, PDO, Group C) ದೃಷ್ಟಿಯಿಂದ ಈ ಪ್ರಚಲಿತ ವಿದ್ಯಮಾನವು ಅತ್ಯಂತ ಪ್ರಮುಖವಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯು ನಮ್ಮ ಹೆಮ್ಮೆಯ ನಾಡಗೀತೆಯಲ್ಲಿ ಒಂದು ಮಹತ್ವದ ಬದಲಾವಣೆಯನ್ನು ಮಾಡಲು ಶಿಫಾರಸು ಮಾಡಿದೆ. ಬೌದ್ಧ ಧರ್ಮಗುರುಗಳು ಮತ್ತು ವಿವಿಧ ಬೌದ್ಧ ಸಂಘಟನೆಗಳ ಸುದೀರ್ಘ ಬೇಡಿಕೆಯನ್ನು ಪರಿಗಣಿಸಿ, ಈ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರವು ಈ ಸಮಿತಿಯನ್ನು ರಚಿಸಿತ್ತು.➤ ನಾಡಗೀತೆಯಲ್ಲಿ ಆಗಲಿರುವ ಬದಲಾವಣೆ: ಪ್ರಸ್ತುತ ಜಾರಿಯಲ್ಲಿರುವ ನಾಡಗೀತೆಯ ಸಾಲನ್ನು ಪರಿಷ್ಕರಿಸಿ 'ಬೌದ್ಧ' ಪದವನ್ನು ಸೇರಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ: ಪ್ರಸ್ತುತ ಇರುವ ಸಾಲು: "ಜನಕನ ತನಯೆಯ ದೇವೀ ಧಾಮ, ಹಿಮಗಿರಿಯುತ್ತರ ಸೀಮ, ಕಂಪು ಕದಂಬದ ಬನಗಳ ಧಾಮ, ಪಾರಸಿಕ ಜೈನರುದ್ಯಾನ" ಶಿಫಾರಸು ಮಾಡಲಾದ ಹೊಸ ಸಾಲು: "ಜನಕನ ತನಯೆಯ ದೇವೀ ಧಾಮ, ಹಿಮಗಿರಿಯುತ್ತರ ಸೀಮ, ಕಂಪು ಕದಂಬದ ಬನಗಳ ಧಾಮ, ಪಾರಸಿಕ ಜೈನ ಬೌದ್ಧರುದ್ಯಾನ" ಸಮಿತಿಯ ಅಭಿಪ್ರಾಯ: "ಬೌದ್ಧ ಧರ್ಮವೂ ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. 'ಬೌದ್ಧ' ಪದವನ್ನು ಮರು ಸೇರ್ಪಡೆ ಮಾಡುವುದರಿಂದ ನಾಡಗೀತೆಯ ರಾಗ, ಲಯ ಅಥವಾ ಗಾಯನದ ಸಮಯಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ" ಎಂದು ಡಾ. ಪುರುಷೋತ್ತಮ ಬಿಳಿಮಲೆ ಸ್ಪಷ್ಟಪಡಿಸಿದ್ದಾರೆ.ನಿಮ್ಮ ಸರ್ಕಾರಿ ಉದ್ಯೋಗದ ಕನಸನ್ನು ನನಸಾಗಿಸಲು, ತಕ್ಷಣ 'KPSCVaani' ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ.