Job Description: * ಇದೀಗ ಸುಪ್ರೀಂ ಕೋರ್ಟ್ ಮಹಾರಾಷ್ಟ್ರದ ಸಾಂಪ್ರದಾಯಿಕ ಎತ್ತಿನಗಾಡಿಯ ಓಟದ ಸ್ಪರ್ಧೆಯನ್ನು ನಡೆಸಲು ಅನುಮತಿಯನ್ನು ನೀಡಿದೆ, ಅಷ್ಟೇ ಅಲ್ಲದೇ ದೇಶದಾದ್ಯಂತ ಬೇರೆ ಬೇರೆ ರಾಜ್ಯಗಳಲ್ಲಿ ಅಂದರೆ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಇದೇ ರೀತಿಯ ಕ್ರೀಡೆಗಳು ನಡೆಯುತ್ತಿವೆ, ಆದರೆ ಮಹಾರಾಷ್ಟ್ರ ರಾಜ್ಯದಲ್ಲಿ ಈ ಎತ್ತಿನಗಾಡಿ ಓಟಕ್ಕೆ ನಿಷೇಧ ಹೇರಲು ಯಾವುದೇ ಕಾರಣವಿಲ್ಲ ಎಂದು ಸುಪ್ರೀಂ ತಿಳಿಸಿದೆ. * ಸುಪ್ರೀಂ ಕೋರ್ಟ್‍ನ 2014 ರ ತೀರ್ಪುನ್ನು ಎ ನಾಗರಾಜ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ಮೇರೆಗೆ ಉಲ್ಲೇಖಿಸಲಾಗಿದೆ, ಈ ತೀರ್ಪುನ ಪ್ರಕಾರ ಇದರಲ್ಲಿ ಜಲ್ಲಿಕಟ್ಟು ಸ್ಫರ್ಧೆಗೆ ನಿಷೇಧಿಸಲಾಗಿದೆ, ಈ ಸ್ಫರ್ಧೆಯು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (PCA) ಕಾಯ್ದೆ ಅಡಿಯಲ್ಲಿ ಗೂಳಿಗಳ ಮೇಲಿನ ಕ್ರೌರ್ಯಕ್ಕೆ ಸಮನಾಗಿದೆ ಎಂದು ತಿಳಿಸಲಾಗಿದೆ. * ಸುಪ್ರೀಂ ಕೋರ್ಟ್ ನ 2014 ರ ಎಸ್‍ಸಿ ತೀರ್ಪಿನ ನಂತರ ತಮಿಳುನಾಡು, ಹಾಗೂ ಕರ್ನಾಟಕ ರಾಜ್ಯಗಳು PCA ಕಾಯ್ದೆಗೆ ತಿದ್ದುಪಡಿಯನ್ನು ತಂದಿವೆ, ಇದರಲ್ಲಿ ಜಲ್ಲಿಕಟ್ಟು, ಹಾಗೂ ಎತ್ತಿನ ಬಂಡಿ ಸ್ಪರ್ಧೆಗೆ ಅವಕಾಶವನ್ನು ಒದಗಿಸಿಕೊಡಲಾಗಿದೆ. ಇದೇ ರೀತಿ ಮಹಾರಾಷ್ಟ್ರ ರಾಜ್ಯವು 2017 ರಲ್ಲಿ PCA ಕಾಯ್ದೆಗೆ ತಿದ್ದುಪಡಿಯನ್ನು ತಂದಿತು ಆದರೂ ಬಾಂಬೆ ಹೈಕೋರ್ಟ್ ಇದಕ್ಕೆ ಒಪ್ಪದೆ ಮನವಿಯನ್ನು ತಡೆಹಿಡಿದಿತ್ತು, ಆದರೆ ಇದೀಗ ಸುಪ್ರೀಂ ಕೋರ್ಟ್ ಅನುಮತಿಯನ್ನು ನೀಡಿದೆ. * ಸುಪ್ರೀಂ ಕೋರ್ಟ್: ಭಾರತದ ಸರ್ವೋಚ್ಚ ನ್ಯಾಯಾಲಯವು ಭಾರತದ ಸರ್ವೋಚ್ಚ ನ್ಯಾಯಾಂಗದ ಸಂಸ್ಥೆಯಾಗಿದೆ, ಹಾಗೂ ಇದು ಸಂವಿಧಾನದ ಅಡಿಯಲ್ಲಿ ಭಾರತ ಗಣರಾಜ್ಯದ ಅತ್ಯುನ್ನತ ನ್ಯಾಯಾಲಯವಾಗಿದೆ. ಅಷ್ಟೇ ಅಲ್ಲದೇ ಇದೊಂದು ಅತ್ಯಂತ ಹಿರಿಯ ಸಾಂವಿಧಾನಿಕ ನ್ಯಾಯಾಲಯವಾಗಿದೆ ಹಾಗೂ ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಹೊಂದಿದೆ. * ಇದೀಗ ಸುಪ್ರೀಂ ಕೋರ್ಟ್ ತಿಲಕ್ ಮಾರ್ಗ, ಮಂಡಿ ಹೌಸ್, ನವದೆಹಲಿ, ದೆಹಲಿಯಲ್ಲಿದೆ, ಇದನ್ನು 1950 ರ ಜನೇವರಿ 26 ರಂದು ಸ್ಥಾಪಿಸಲಾಗಿದೆ, ಎನ್.ವಿ. ರಮಣ ಅವರು ಪ್ರಸ್ತುತ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. * ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಅವಧಿಯ ಅವಧಿ: 65 ವರ್ಷ ವಯಸ್ಸಿನಲ್ಲಿ ಕಡ್ಡಾಯ ನಿವೃತ್ತಿಯನ್ನು ಹೊಂದಬೇಕು. * ಎನ್.ವಿ. ರಮಣ: ನೂತಲಪತಿ ವೆಂಕಟ ರಮಣ ಅವರು ಭಾರತದ 48 ನೇ ಮತ್ತು ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ನ್ಯಾಯಾಧೀಶರಾಗಿದ್ದಾರೆ. ಈ ಹಿಂದೆ ಅವರು ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು, ಇದೀಗ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಹಾಗೂ ಆಂಧ್ರಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು.