Job Description: * 2021 ರ ಆಗಸ್ಟ್. 18 ರಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಜನ ಆರೋಗ್ಯ ಯೋಜನೆಗಳ ವ್ಯಾಪ್ತಿಯನ್ನು ಹೆಚ್ಚಿಸಲು ಆರೋಗ್ಯ ಧಾರಾ 2.0 ನ್ನು ಪ್ರಾರಂಭಿಸಿದ್ದಾರೆ. * ಈ ಆರೋಗ್ಯ ಧಾರ 2.0 ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧಿಸಿದೆ, ಹಾಗೂ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ '3' ಉಪಕ್ರಮಗಳನ್ನು ಆರಂಭಿಸಿದ್ದಾರೆ, ಅವುಗಳು ಅಧಿಕಾರ ಪತ್ರ, ಆಯುಷ್ಮಾನ್ ಮಿತ್ರ ಮತ್ತು ಅಭಿನಂದನ್ ಪಾತ್ರ. * ಅಧಿಕಾರ ಪತ್ರ: PM-JAY ಯೋಜನೆಯಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದಾಗ ಫಲಾನುಭವಿಗಳಿಗೆ ಅಧಿಕಾರ ಪತ್ರವನ್ನು ನೀಡಲಾಗುತ್ತದೆ. * ಅಭಿನಂದನ್ ಪಾತ್ರ: ಇದು 'ಧನ್ಯವಾದ ಸೂಚನೆ' ಹಾಗೂ ಇದನ್ನು ಚಿಕಿತ್ಸೆ ಪಡೆದ ನಂತರ ಬಿಡುಗಡೆಯಾದ ಫಲಾನುಭವಿಗಳಿಗೆ ನೀಡಲಾಗುತ್ತದೆ. * ಆಯುಷ್ಮಾನ್ ಮಿತ್ರ: PM-JAY ಯೋಜನೆಯಡಿಯಲ್ಲಿ ಆಯುಷ್ಮಾನ್ ಕಾರ್ಡ್ಗಳನ್ನು ಪಡೆಯಲು ಫಲಾನುಭವಿಗಳಿಗೆ ಸಹಾಯ ಮಾಡುತ್ತದೆ. * ಪ್ರಸ್ತುತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ (AB PM-JAY) ಇತ್ತೀಚೆಗೆ 2 ಕೋಟಿ ಆಸ್ಪತ್ರೆಗಳ ಮೈಲಿಗಲ್ಲು ಸಾಧಿಸಿದೆ.