Job Description: * ಭಾರತದಲ್ಲಿ ಕೊರೊನಾ ಎರಡನೇ ಅತೀ ಹೆಚ್ಚಾಗಿ ಹರಡುತ್ತಿರುವ ಹಿನ್ನಲೆಯಿಂದ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆಗಳಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಬಡವರಿಗೆ 2 ತಿಂಗಳ ಕಾಲ ಉಚಿತ ಅಕ್ಕಿ, ಆಹಾರ ಧಾನ್ಯ ನೀಡಲಾಗುತ್ತದೆ ಎಂದು ತಿಳಿಸಿದೆ. * ಕೇಂದ್ರ ಸರ್ಕಾರವು 80 ಕೋಟಿ ಬಡ ಜನರಿಗೆ ಇದೇ ಮೇ ಹಾಗೂ ಜೂನ್ ತಿಂಗಳಿನಲ್ಲಿ 5 KG ಅಕ್ಕಿ ಹಾಗೂ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದೆ. * ಉಚಿತ ಆಹಾರ ಧಾನ್ಯ ಯೋಜನೆಗೆ ಕೇಂದ್ರ ಸರ್ಕಾರ 26,000 ಕೋಟಿ ರೂ. ಮೀಸಲಿಟ್ಟಿದೆ. * ದೇಶದಲ್ಲಿ ಕಳೆದ ವರ್ಷದಲ್ಲಿ ಕೊರೊನ ವೈರಸ್ ವ್ಯಾಪಕವಾಗಿ ಹರಡಿತ್ತು ಆದ್ದರಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು ಆ ಸಮಯದಲ್ಲಿ ಪ್ರಧಾನಿ ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಆಹಾರ ಧಾನ್ಯವನ್ನು ಬಡವರಿಗೆ ನವೆಂಬರ್ ತಿಂಗಳವರೆಗೆ ನೀಡಲಾಗಿತ್ತು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಬಗ್ಗೆ ಮಾಹಿತಿ : * ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ, 2016 ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವನ್ನು ಡಿಸೆಂಬರ್ 2016 ರಲ್ಲಿ ಪ್ರಾರಂಭಿಸಿದ ಆದಾಯ ಘೋಷಣೆ ಯೋಜನೆಯಾಗಿದೆ. 2016 (ಐಡಿಎಸ್) ಮಾದರಿಯಲ್ಲಿ ಪ್ರಾರಂಭಿಸಲಾಯಿತು. * ಡಿಸೆಂಬರ್ 16, 2016 ರಿಂದ ಮಾರ್ಚ್ 31, 2017 ರವರೆಗೆ ಮಾನ್ಯವಾಗಿರುವ ಈ ಯೋಜನೆಯನ್ನು ಭಾರತೀಯ ಬ್ಯಾಂಕ್ ಖಾತೆಗಳಲ್ಲಿ ನಗದು ಅಥವಾ ಬ್ಯಾಂಕ್ ಠೇವಣಿ ರೂಪದಲ್ಲಿ ಆದಾಯವನ್ನು ಘೋಷಿಸಲು ಮಾತ್ರ ಪಡೆಯಬಹುದು. * ತೆರಿಗೆ ರಿಟರ್ನ್ಗಳಲ್ಲಿ ಆದಾಯವನ್ನು ತೋರಿಸಿದರೆ ಪಿಎಂಜಿಕೆವೈ ಅಡಿಯಲ್ಲಿ ಬಹಿರಂಗಪಡಿಸದ ಆದಾಯವನ್ನು ಘೋಷಿಸದಿರುವುದು 77.25% ದಂಡವನ್ನು ಆಕರ್ಷಿಸುತ್ತದೆ. ತೆರಿಗೆ ರಿಟರ್ನ್ಗಳಲ್ಲಿ ಆದಾಯವನ್ನು ತೋರಿಸದಿದ್ದರೆ, ಅದು ಇನ್ನೂ 10% ದಂಡವನ್ನು ಆಕರ್ಷಿಸುತ್ತದೆ ಮತ್ತು ನಂತರ ಕಾನೂನು ಕ್ರಮ ಜರುಗಿಸುತ್ತದೆ.