ಗದಗ ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಅನುದಾನಿತ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Rukmini Krushna Ganiger | Date:2 ಸೆಪ್ಟೆಂಬರ್ 2021

- ಶ್ರೀ ಬಾಲಲೀಲಾ ಮಹಾಂತ ಶಿವಯೋಗಿ ಶಿಕ್ಷಣ ಸಮಿತಿ ಮುಳಗುಂದ (ರಿ) ತಾ/ಜಿ : ಗದಗ ಇದರ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಎಸ್ ಜೆ ಜೆ ಎಂ (SJJM) ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಮುಳಗುಂದದಲ್ಲಿ ಖಾಲಿಯಾದ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆ ತುಂಬಿಕೊಳ್ಳಲು ಮಾನ್ಯ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರ ಆದೇಶದ ಮೇರೆಗೆ ದಿನಾಂಕ : 26/11/2019 ರ ಪ್ರಕಾರ ದೈಹಿಕ ಶಿಕ್ಷಣ ಬೋಧಕ ಹುದ್ದೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಈ ಕೆಳಗೆ ಕಾಣಿಸಿದಂತೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
-ಹುದ್ದೆಗಳ ವಿವರ
* ಎಸ್ ಜೆ ಜೆ ಎಂ (SJJM) ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಮುಳಗುಂದ ತಾ/ಜಿ : ಗದಗ - ದೈಹಿಕ ಶಿಕ್ಷಣ ಶಿಕ್ಷಕರು - 01.
No. of posts: 1
Application Start Date: 28 ಆಗಸ್ಟ್ 2021
Application End Date: 17 ಸೆಪ್ಟೆಂಬರ್ 2021
Selection Procedure: - ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ದೈಹಿಕ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ತೇರ್ಗಡೆ ಹೊಂದಿರುವ ಮತ್ತು 5 ವರ್ಷದ ಸೇವಾನುಭವವನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
Fee: -ಅರ್ಹ ಅಭ್ಯರ್ಥಿಗಳು ವಿದ್ಯಾರ್ಹತೆಯ ಅಂಕಪಟ್ಟಿ ಇತ್ತೀಚಿನ ಭಾವಚಿತ್ರ ಲಗತ್ತಿಸಿ . ಅಭ್ಯರ್ಥಿಗಳು ₹500 ಡಿಡಿಯನ್ನು ಚೇರಮನ್ರು , ಶ್ರೀ ಬಾಲಲೀಲಾ ಮಹಾಂತ ಶಿವಯೋಗಿ ಶಿಕ್ಷಣ ಸಮಿತಿ ಮುಳಗುಂದ (ರಿ) ತಾ/ಜಿ : ಗದಗ ಇವರ ಹೆಸರಿನಲ್ಲಿ ಪಡೆದು ಪ್ರಕಟಣೆಗೊಂಡ ಇಪ್ಪತ್ತು ದಿನಗಳೊಳಗಾಗಿ ಸಂಸ್ಥೆಯ ವಿಳಾಸಕ್ಕೆ ಸಲ್ಲಿಸತಕ್ಕದ್ದು.ಅರ್ಜಿಯ 01 ಪ್ರತಿಯನ್ನು ಮಾನ್ಯ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಗದಗ ಇವರುಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು.
Employment Type: FULL_TIME
Hiring Organization: KPSC Vaani https://www.kpscvaani.com
To Download the News Paper Notification
Related Tags: Degree





Comments