* ಬಡತನ ನಿರ್ಮೂಲನೆಗಾಗಿ ನಡೆಸುವ ಪ್ರಯತ್ನಗಳು ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೇ, ವ್ಯಕ್ತಿಗತ ನೆಲೆಯಲ್ಲಿ ಕಾರ್ಯಗತಗೊಳಿಸುವುದು ಅಗತ್ಯ 'ಎಂದು ಪ್ರಧಾನಿ ನರೇಂದ್ರ ಮೋದಿ ಜುಲೈ 27 ರಂದು ನೀತಿ ಆಯೋಗದ ಸಭೆಯಲ್ಲಿ ಪ್ರತಿಪಾದಿಸಿದ್ದಾರೆ.* ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಮೋದಿ ಅವರು, 'ವಿಕಸಿತ ಭಾರತ ನನಸಾಗಬೇಕಾದರೆ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ನಮ್ಮ ಗುರಿಯಾಗಬೇಕು. ಈ ಪ್ರಯತ್ನ ಗ್ರಾಮ ಮಟ್ಟದಿಂದ ಆರಂಭವಾಗಬೇಕು' ಎಂದೂ ಹೇಳಿದ್ದಾರೆ.ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು, ಆಯೋಗದ ಸಿಇಒ ಬಿ.ವಿ.ಆರ್.ಸುಬ್ರಹ್ಮಣ್ಯಂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.* 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಆಯೋಗದ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಇದು ಅವರಿಗಾದ ನಷ್ಟ ಎಂದರು.ರಾಜ್ಯಗಳು ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸಬೇಕು. ಈ ಸಂಬಂಧ 'ಹೂಡಿಕೆ ಸ್ನೇಹಿ ಸನ್ನದು' ಸಿದ್ಧಪಡಿಸುವಂತೆ ಪ್ರಧಾನಿಯವರು ಆಯೋಗಕ್ಕೆ ನಿರ್ದೇಶನ ನೀಡಿದರು' ಎಂದು ಸುಬ್ರಹ್ಮಣ್ಯಂ ತಿಳಿಸಿದರು.ಪ್ರಧಾನಿ ನರೇಂದ್ರ ಮೋದಿ ಸಲಹೆಗಳು* ಹೂಡಿಕೆ ಕರ್ಷಿಸಲು ಉತ್ತೇಜನಕಾರಿ ಕ್ರಮಗಳಿಗಿಂತ ೂನು-ಸುವ್ಯವಸ್ಥೆ, ಉತ್ತಮ ಆಡಳಿತ ಹಾಗೂ ಮೂಲಸೌಕರ್ಯಗಳಿ ಗೆ ಮಹತ್ವ ಇದೆ* ಜಲ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗೆ ರಾಜ್ಯಗಳ ಮಟ್ಟದಲ್ಲಿ 'ನದಿಗಳ ಗ್ರಿಡ್' ಸ್ಥಾಪಿಸಬೇಕು* ಅಭಿವೃದ್ಧಿಗೆ ಪೂರಕವಾದ ನೀತಿ ನಿರೂಪಣೆ ಹಾಗೂ ಆಡಳಿತಾತ್ಮಕ ಸುಧಾರಣೆಗೆ ರಾಜ್ಯಗಳು ಒತ್ತು ನೀಡಬೇಕು* ಯುವ ಜನತೆ ತರಬೇತಿ ಮತ್ತು ಕೌಶಲ್ಯ ವೃದ್ಧಿಗೆ ಗಮನ ಹರಿಸಬೇಕು. ಆ ಮೂಲಕ ಉದ್ಯೋಗ-ಸನ್ನದ್ಧರಾಗಬೇಕು* ಕೃಷಿ ಉತ್ಪಾದನೆ ಹೆಚ್ಚಳ ಹಾಗೂ ವೈವಿಧ್ಯತೆಗೆ ಒತ್ತು ನೀಡಬೇಕು.ಮತ್ತು ರೈತರಿಗೆ ತ್ವರಿತವಾಗಿ ಆದಾಯ ಖಾತ್ರಿಪಡಿಸುವ ನೈಸರ್ಗಿಕ ಕೃಷಿ, ಮಣ್ಣಿನ ಫಲವತ್ತತೆ ಹೆಚ್ಚಳದಂತಹ ಕ್ರಮಗಳಿಗೆ ರಾಜ್ಯಗಳು ಪ್ರೋತ್ಸಾಹ ನೀಡಬೇಕು.