* ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ 'ರಾಮಚರಿತಮಾನಸ' ಗ್ರಂಥವನ್ನು ಆಧರಿಸಿದ 'ರಾಮಕಥೆ' ನಡೆಯಲಿದೆ. ಅಧ್ಯಾತ್ಮ ಗುರು ಗುಜರಾತನ ಮೊರಾರಿ ಬಾಪು ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಒಂಬತ್ತು ದಿನಗಳವರೆಗೆ ಈ ಕಾರ್ಯಕ್ರಮ ನಡೆಯಲಿದೆ.* ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಐತಿಹಾಸಿಕ ರಾಮ ಕಥಾವು ಒಂದು ಮೈಲಿಗಲ್ಲು ಘಟನೆಯಾಗಲಿದೆ, ಶಾಂತಿ ಮತ್ತು ಏಕತೆಯ ಜಾಗತಿಕ ಆಕಾಂಕ್ಷೆಗಳೊಂದಿಗೆ ಆಧ್ಯಾತ್ಮಿಕ ಬೋಧನೆಗಳನ್ನು ಸೇತುವೆ ಮಾಡುತ್ತದೆ. ಸಮಕಾಲೀನ ಜಾಗತಿಕ ಸವಾಲುಗಳನ್ನು ಪರಿಹರಿಸುವಲ್ಲಿ ಮತ್ತು ಸಾಮರಸ್ಯದ ಜಗತ್ತನ್ನು ಉತ್ತೇಜಿಸುವಲ್ಲಿ ರಾಮಚರಿತಮಾನಗಳ ಕಾಲಾತೀತ ಪ್ರಸ್ತುತತೆಯನ್ನು ಕಾರ್ಯಕ್ರಮ ಒತ್ತಿಹೇಳುತ್ತದೆ.* 77 ವರ್ಷದ ಮೊರಾರಿ ಬಾಪು ಅವರು ಸುಮಾರು 65ಕ್ಕೂ ಅಧಿಕ ವರ್ಷಗಳಿಂದ 'ರಾಮಕಥೆ' ಕಾರ್ಯಕ್ರಮ ನೀಡಿದ್ದು, ಅಮೆರಿಕ, ಬ್ರಿಟನ್, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.* ಇದೊಂದು ರೀತಿ ಕನಸು ನನಸಾದ ಕ್ಷಣ ಮತ್ತು ದೇವರ ಅನುಗ್ರಹ, ವಿಶ್ವಸಂಸ್ಥೆಯಲ್ಲಿ 'ರಾಮಕಥೆ' ನಡೆಸಿಕೊಡುವುದು ಎಂದರೆ, ಜಾಗತಿಕ ಸಾಮರಸ್ಯ ಸಾಧಿಸುವುದಕ್ಕೆ ಇಡುವ ಹೆಜ್ಜೆಯಾಗಿದೆ' ಎಂದು ಮೊರಾರಿ ಬಾಪು ಅವರು ಅಭಿಪ್ರಾಯಪಡುತ್ತಾರೆ. 'ರಾಮಚರಿತಮಾನಸವು ಸತ್ಯ, ಪ್ರೇಮ ಹಾಗೂ ಸಹಾನುಭೂತಿಯಂಥ ಜಾಗತಿಕ ಮೌಲ್ಯಗಳ ಕುರಿತು ಮಾತನಾಡುತ್ತದೆ. ಈ ಮೌಲ್ಯಗಳು ಇಂದಿನ ಜಗತ್ತಿಗೆ ಅಗತ್ಯವಾಗಿದೆ' ಎಂದರು.