* ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆಗೆ ಭೇಟಿ ನೀಡುವ ಭಕ್ತರು ಮತ್ತು ಪ್ರವಾಸಿಗರಿಗೆ ನೌಕಾಯಾನ ಅನುಭವವನ್ನು ಹೆಚ್ಚಿಸಲು "ದಿವ್ಯ ಅಯೋಧ್ಯೆ"ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದೆ.* ಭವ್ಯ ರಾಮಮಂದಿರ ಜನವರಿ 22ರಂದು ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇದರಿಂದಾಗಿ ಅಯೋಧ್ಯೆಗೆ ಭೇಟಿ ನೀಡುವವರ ಮುಂದೆ ನೀಡಲಿರುವ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಲಿದೆ. * ದೇಶ-ವಿದೇಶಗಳ ಕೋಟ್ಯಂತರ ಜನ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಆಗಮಿಸಲಿದ್ದಾರೆ. ಇದನ್ನು ಮನಗಂಡ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ‘ದಿವ್ಯ ಅಯೋಧ್ಯಾ’ (Divya Ayodhya) ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ.* ಇಡೀ ಅಯೋಧ್ಯೆ ನಗರವನ್ನು ವೀಕ್ಷಿಸಲು ಬೇಕಾದ ಎಲ್ಲ ಮಾಹಿತಿಯನ್ನು ದಿವ್ಯ ಅಯೋಧ್ಯಾ ಆ್ಯಪ್ ಒಳಗೊಂಡಿದೆ. ರಾಮಮಂದಿರ ಸೇರಿ ಅಯೋಧ್ಯೆ ನಗರದಲ್ಲಿರುವ ದೇವಾಲಯಗಳು, ಸರಯೂ ನದಿ, ಅಯೋಧ್ಯೆಯ ಐತಿಹಾಸಿಕ ಹಿನ್ನೆಲೆ, ರಾಮಮಂದಿರದ ಇತಿಹಾಸ, ದೇವಾಲಯಗಳಿಗೆ ತೆರಳಲು ಮಾರ್ಗ, ಸ್ಮಾರಕಗಳು, ಅವುಗಳ ಕಾಲಘಟ್ಟ ಸೇರಿ ನೂರಾರು ಮಾಹಿತಿಯು ಆ್ಯಪ್‌ನಲ್ಲಿದೆ.* 'ದಿವ್ಯ ಅಯೋಧ್ಯಾ' ಆ್ಯಪ್ ಮೂಲಕ ಐತಿಹಾಸಿಕ ಸ್ಥಳಗಳ ಮಾಹಿತಿ, ಇತಿಹಾಸ, ಲೊಕೇಷನ್‌ ಜತೆಗೆ ಇ-ಕಾರ್‌ಗಳು, ಇ-ಕ್ಯಾಬ್‌ಗಳನ್ನುಮತ್ತು ಅಯೋಧ್ಯೆ ಸುತ್ತಮುತ್ತ ಇರುವ ಹೋಮ್‌ಸ್ಟೇಗಳು, ಐಷಾರಾಮಿ ಹೋಟೆಲ್‌ಗಳು, ಟೂರಿಸ್ಟ್‌ ಗೈಡ್‌ಗಳು, ವ್ಹೀಲ್‌ ಚೇರ್‌ಗಳು, ಸೈಟ್‌ ಸೀಯಿಂಗ್‌ ಗಾಲ್ಫ್‌ ಕಾರ್ಟ್‌ಗಳನ್ನು ಕೂಡ ಬುಕ್‌ ಮಾಡಿಕೊಳ್ಳಬಹುದಾಗಿದೆ.* ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಸರ್ಕಾರವು ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.