➤ ಮಧ್ಯಪ್ರದೇಶದ ಪ್ರಸಿದ್ಧ ಶ್ರೀ ಮಹಾಕಾಲೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ‘ವಿಐಪಿ(VIP) ದರ್ಶನ’ ಹಾಗೂ ಗರ್ಭಗೃಹ ಪ್ರವೇಶವನ್ನು ಆಯ್ದವರಿಗೆ ಮಾತ್ರ ಸೀಮಿತಗೊಳಿಸಿರುವ ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ. ಗರ್ಭಗೃಹದಲ್ಲಿ ಪೂಜೆ ಸಲ್ಲಿಸುವುದು ಹಾಗೂ ಜಲಾಭಿಷೇಕ ಮಾಡುವ ಅವಕಾಶವನ್ನು ವಿಐಪಿಗಳಿಗೆ ಮಾತ್ರ ನೀಡಲಾಗುತ್ತಿದೆ ಎಂಬುದು ಸಾಮಾನ್ಯ ಭಕ್ತರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.➤ ನ್ಯಾಯಾಲಯದ ಪ್ರಮುಖ ಅವಲೋಕನಗಳು:=> ನ್ಯಾಯಾಂಗದ ಹಸ್ತಕ್ಷೇಪವಿಲ್ಲ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು, "ಯಾರಿಗೆ ದರ್ಶನ ನೀಡಬೇಕು ಅಥವಾ ನೀಡಬಾರದು ಎಂಬುದು ನ್ಯಾಯಾಲಯದ ನಿರ್ಧಾರವಲ್ಲ. ಇದು ಆಡಳಿತ ಮಂಡಳಿಗೆ ಬಿಟ್ಟ ವಿಚಾರ," ಎಂದು ಸ್ಪಷ್ಟಪಡಿಸಿದೆ.=> ಸಂವಿಧಾನದ 14ನೇ ವಿಧಿ: ಗರ್ಭಗೃಹದ ಒಳಗೆ ಸಂವಿಧಾನದ 14ನೇ ವಿಧಿಯನ್ನು (ಸಮಾನತೆಯ ಹಕ್ಕು) ಅನ್ವಯಿಸಲು ಪ್ರಾರಂಭಿಸಿದರೆ, ಅದು ನ್ಯಾಯಾಂಗ ವ್ಯಾಪ್ತಿಯನ್ನು ಮೀರಿದಂತಾಗುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ.=> VIP ಎಂದರೆ ಯಾರು?: ಮಧ್ಯಪ್ರದೇಶ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪಿನಲ್ಲಿ, "ಯಾರು VIP ಎಂಬುದನ್ನು ಜಿಲ್ಲಾಧಿಕಾರಿ ಮತ್ತು ದೇವಸ್ಥಾನ ಸಮಿತಿ ನಿರ್ಧರಿಸುತ್ತದೆ. VIP ಎಂಬ ಪದಕ್ಕೆ ಯಾವುದೇ ಕಾನೂನುಬದ್ಧ ವ್ಯಾಖ್ಯಾನವಿಲ್ಲ," ಎಂದು ಹೇಳಿತ್ತು.➤ ಶ್ರೀ ಮಹಾಕಾಲೇಶ್ವರ ದೇವಸ್ಥಾನ: ಈ ದೇವಸ್ಥಾನವು ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿದೆ. ಇದು ಪವಿತ್ರ ಕ್ಷಿಪ್ರ (Shipra) ನದಿಯ ದಂಡೆಯ ಮೇಲಿದೆ. ಭಾರತದಲ್ಲಿರುವ 12 ಪ್ರಸಿದ್ಧ ಜ್ಯೋತಿರ್ಲಿಂಗಗಳಲ್ಲಿ ಇದು ಅತ್ಯಂತ ಪ್ರಮುಖವಾದುದು.ಸಾಮಾನ್ಯವಾಗಿ ಶಿವಲಿಂಗಗಳು ಪೂರ್ವಕ್ಕೆ ಮುಖ ಮಾಡಿರುತ್ತವೆ. ಆದರೆ, ಇಲ್ಲಿನ ವಿಶೇಷತೆಯೆಂದರೆ ಮಹಾಕಾಲೇಶ್ವರ ಲಿಂಗವು ದಕ್ಷಿಣಾಭಿಮುಖವಾಗಿದೆ. ಆದ್ದರಿಂದ ಇದನ್ನು 'ದಕ್ಷಿಣಾಮೂರ್ತಿ' ಎಂದೂ ಕರೆಯುತ್ತಾರೆ.ಈ ದೇವಸ್ಥಾನದ ಅತ್ಯಂತ ವಿಶಿಷ್ಟವಾದ ಸಂಪ್ರದಾಯವೆಂದರೆ ಪ್ರತಿದಿನ ಮುಂಜಾನೆ ನಡೆಯುವ 'ಭಸ್ಮ ಆರತಿ'. ಇದು ವಿಶ್ವದಲ್ಲೇ ಬೇರೆಲ್ಲೂ ನಡೆಯದ ಅಪರೂಪದ ಆಚರಣೆಯಾಗಿದೆ. ಇಲ್ಲಿನ ಶಿವಲಿಂಗವು 'ಸ್ವಯಂಭೂ' (ತಾನಾಗಿಯೇ ಉದ್ಭವಿಸಿದ್ದು) ಎಂದು ನಂಬಲಾಗಿದೆ.➤ ಇತ್ತೀಚೆಗೆ ಪ್ರಧಾನಮಂತ್ರಿಗಳು ಇಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ 'ಮಹಾಕಾಲ ಲೋಕ' ಕಾರಿಡಾರ್ ಅನ್ನು ಉದ್ಘಾಟಿಸಿದ್ದಾರೆ, ಇದು ಪ್ರವಾಸೋದ್ಯಮದ ದೃಷ್ಟಿಯಿಂದ ಬಹಳ ಪ್ರಮುಖವಾಗಿದೆ.