➤ ಭಾರತದ ಕೃಷಿ ಕ್ಷೇತ್ರದಲ್ಲಿ 'ರೈತ ಉತ್ಪಾದಕ ಸಂಸ್ಥೆಗಳು' (FPO) ಕ್ರಾಂತಿಕಾರಿ ಬದಲಾವಣೆ ತರುತ್ತಿವೆ. ಇತ್ತೀಚೆಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ತಮಿಳುನಾಡಿನ ಎಫ್‌ಪಿಒಗಳ ಕಾರ್ಯವೈಖರಿಯನ್ನು ಸುಧಾರಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದಾರೆ. ಇತ್ತೀಚೆಗೆ ತಮಿಳುನಾಡಿನ ಈರೋಡ್ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ರೈತರು ಎದುರಿಸುತ್ತಿರುವ ಮಾರುಕಟ್ಟೆ ಮತ್ತು ತಾಂತ್ರಿಕ ಸವಾಲುಗಳನ್ನು ಗಮನಿಸಿದ ಸಚಿವರು, ಈ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕಂಡುಕೊಳ್ಳಲು ಈ ಸಮಿತಿಯನ್ನು ರಚಿಸಲು ನಿರ್ದೇಶಿಸಿದ್ದಾರೆ.- ಪರಿಶೀಲನಾ ವ್ಯಾಪ್ತಿ: ಎಫ್‌ಪಿಒಗಳ ಆಡಳಿತ, ವ್ಯಾಪಾರ ಮಾದರಿಗಳು, ತಾಂತ್ರಿಕ ಬೆಂಬಲ ಮತ್ತು ಮಾರುಕಟ್ಟೆ ಸಂಪರ್ಕ.- ಕಾಲಮಿತಿ: ಈ ಸಮಿತಿಯು ತನ್ನ ಸಮಗ್ರ ವರದಿಯನ್ನು 2 ತಿಂಗಳೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಿದೆ.➤ ಸಮಿತಿಯಲ್ಲಿರುವ ಪ್ರಮುಖ ಸಂಸ್ಥೆಗಳು: ಈ ಸಮಿತಿಯು ಕೇವಲ ಸರ್ಕಾರಿ ಅಧಿಕಾರಿಗಳನ್ನಷ್ಟೇ ಒಳಗೊಂಡಿಲ್ಲ, ಬದಲಾಗಿ ಕೃಷಿ ಕ್ಷೇತ್ರದ ವಿವಿಧ ಆಯಾಮಗಳ ತಜ್ಞರನ್ನು ಹೊಂದಿದೆ:1. NABARD: ಹಣಕಾಸು ಮತ್ತು ಸಾಲ ಸೌಲಭ್ಯಗಳ ವಿಶ್ಲೇಷಣೆಗಾಗಿ.2. NAFED & SFAC: ಮಾರುಕಟ್ಟೆ ಜಾಲ ಮತ್ತು ಸಣ್ಣ ರೈತರ ಒಕ್ಕೂಟಗಳ ಸಬಲೀಕರಣಕ್ಕಾಗಿ.3. ICAR-NRCB: ತಾಂತ್ರಿಕ ಮಾರ್ಗದರ್ಶನ ನೀಡಲು.4. NGOಗಳು ಮತ್ತು FPO ಪ್ರತಿನಿಧಿಗಳು: ನೆಲಮಟ್ಟದ ಸಮಸ್ಯೆಗಳನ್ನು ಹಂಚಿಕೊಳ್ಳಲು.➤ ತಮಿಳುನಾಡಿನ ಆಯ್ದ ಬೆಳೆಗಳ ಮೇಲೆ ವಿಶೇಷ ಗಮನ: ಸಮಿತಿಯು ವಿಶೇಷವಾಗಿ ಬಾಳೆಹಣ್ಣು (Banana): ಮೌಲ್ಯವರ್ಧನೆ ಮತ್ತು ರಫ್ತು ಹೆಚ್ಚಳ, ಅರಿಶಿನ (Turmeric): ಈರೋಡ್ ಪ್ರಾಂತ್ಯದ ಪ್ರಮುಖ ಬೆಳೆ, ತೆಂಗು ಮತ್ತು ಮರಗೆಣಸು (Coconut & Tapioca), ಸಾವಯವ ಕೃಷಿ: ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಒದಗಿಸುವುದು. ಈ ಬೆಳೆಗಳನ್ನು ಬೆಳೆಯುವ ರೈತರ ಲಾಭಾಂಶ ಹೆಚ್ಚಿಸಲು ಕಾರ್ಯನಿರ್ವಹಿಸಲಿದೆ:➤ ಹೂಸ್ಟ್ ಇನ್ಸ್ಟಿಟ್ಯೂಷನ್: ICAR-NRCB : ತಿರುಚಿರಾಪಳ್ಳಿಯಲ್ಲಿರುವ ಬಾಳೆಹಣ್ಣಿನ ರಾಷ್ಟ್ರೀಯ ಸಂಶೋಧನಾ ಕೇಂದ್ರ (NRCB) ಈ ಸಮಿತಿಯ ಆತಿಥೇಯ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಇದು ವರದಿ ತಯಾರಿಕೆಗೆ ಅಗತ್ಯವಾದ ಸಚಿವಾಲಯದ ಬೆಂಬಲ ಮತ್ತು ಲಾಜಿಸ್ಟಿಕ್ಸ್ ಒದಗಿಸುತ್ತದೆ.ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ