* ಪ್ರವಾಸೋದ್ಯಮ ಇಲಾಖೆಯು ಕರ್ನಾಟಕ ರಾಜ್ಯದಲ್ಲೇ ಮೊದಲ ಬಾರಿಗೆ ಪಶ್ಚಿಮ ಘಟ್ಟದಲ್ಲಿರುವ (ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ) ರಾಣಿ ಝರಿ ವ್ಯುವ್ ಪಾಯಿಂಟ್ ವೀಕ್ಷಿಸಲು ಗಾಜಿನ ಸೇತುವೆ ನಿರ್ಮಿಸಲು ಯೋಜನೆ ರೂಪಿಸಿದೆ.* ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಅಂಚಿನಲ್ಲಿರುವ ಈ ಅದ್ಭುತ ಪ್ರವಾಸಿ ತಾಣಕ್ಕೆ 'ರಾಣಿಝರಿ ಕೊನೆ ಅಂಚು' ಎಂದು ಕರೆಯುತ್ತಾರೆ, ಇದು ಚಿಕ್ಕಮಗಳೂರು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸೇರುತ್ತದೆ.* ಕರಾವಳಿ ಕಡೆಯಿಂದ ಬರುವ ಮೋಡಗಳನ್ನು ತಡೆಯುವ ಮೊದಲ ಶಿಖರ ಇದಾಗಿದ್ದು, ಪಶ್ಚಿಮಘಟ್ಟ ಆರಂಭದ ಘಟ್ಟವೂ ಆಗಿದೆ. * ರಾಣಿ ಝರಿ ವ್ಯೂವ್ ಪಾಯಿಂಟ್ ನ ಸೊಬಗನ್ನು ಇನ್ನಷ್ಟು ಹೆಚ್ಚಿಸಲು ಪ್ರವಾಸೋದ್ಯಮ ಇಲಾಖೆಯು ಗಾಜಿನ ಸೇತುವೆ ನಿರ್ಮಿಸಲು ಮುಂದಾಗಿದೆ.