Job Description: * ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ 94 ವರ್ಷದ ಎಸ್.ಕೆ.ಭಗವಾನ್ ರವರು ಫೆ. 20 ರಂದು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.* ವರನಟ ಡಾ.ರಾಜ್‌ಕುಮಾರ್ ಅವರು ನಟಿಸಿದ್ದ 30ಕ್ಕೂ ಹೆಚ್ಚು ಸಿನಿಮಾಗಳನ್ನು ಅವರು ದೊರೆರಾಜ್ ಜೊತೆಗೂಡಿ ನಿರ್ದೇಶಿಸಿದ್ದರು ಹಾಗಾಗಿ ಇವರುಗಳನ್ನು ದೊರೆ-ಭಗವಾನ್' ಎಂದು ಕರೆಯಲಾಗುತಿತ್ತು.* ಸುಮಾರು 25 ವರ್ಷಗಳಿಂದ ಹೃದಯದ ಸಮಸ್ಯೆಯಿಂದ ಭಗವಾನ್ ರವರು ಬಳಲುತ್ತಿದ್ದರು. ಡಿಸೆಂಬರ್‌ನಲ್ಲಿ ಅವರಿಗೆ ಶ್ವಾಸಕೋಶದ ಸೋಂಕು ಕೂಡಾ ಕಾಣಿಸಿಕೊಂಡಿತ್ತು.* ಎಸ್ ಕೆ ಭಗವಾನ್ ರವರು 5 ಜುಲೈ 1933 ರಂದು ಜನಿಸಿದ್ದರು. ಅವರು ತಮ್ಮ ಶಿಕ್ಷಣವನ್ನು ಬೆಂಗಳೂರು ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದ್ದು, ಇವರು ಚಿಕ್ಕವಯಸ್ಸಿನಲ್ಲಿ ಹಿರಣ್ಣಯ್ಯ ಮಿತ್ರ ಮಂಡಳಿಯವರೊಂದಿಗೆ ರಂಗ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. * 1956 ರಲ್ಲಿ ಭಾಗ್ಯೋದಯ ಚಿತ್ರದ ಮೂಲಕ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಸಹಾಯಕರಾಗಿ ತಮ್ಮ ಚಲನಚಿತ್ರ ಜೀವನವನ್ನು ಪ್ರಾರಂಭಿಸಿದರು.* ಕಸ್ತೂರಿ ನಿವಾಸ, ಎರಡು ಕನಸು, ಬಯಲುದಾರಿ, ಗಾಳಿಮಾತು, ಚಂದನದ ಗೊಂಬೆ, ಹೊಸ ಬೆಳಕು, ಬೆಂಕಿಯ ಬಾಲೆ, ಜೀವನ ಚೈತ್ರ ಮತ್ತು ಗೋವಾದಲ್ಲಿ C.I.D 999, ಆಪರೇಷನ್ ಜಾಕ್‌ಪಾಟ್ ನಲ್ಲಿ C.9 9 ನೇ ಆವೃತ್ತಿಯಂತಹ ಬಾಂಡ್ ಶೈಲಿಯ ಚಲನಚಿತ್ರಗಳನ್ನು ನಿರ್ದೇಶಿಸಿದರು.