* ರಾಷ್ಟ್ರೀಯ ರಾಜಧಾನಿ ವಲಯ (Delhi-NCR) ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ವಾಯು ಮಾಲಿನ್ಯದ ಸಮಸ್ಯೆಯನ್ನು ಎದುರಿಸಲು ಸ್ಥಾಪಿಸಲಾದ ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಇತ್ತೀಚೆಗೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಹವಾಮಾನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸಿರುವ ಆಯೋಗವು, ನಿಯಮ ಉಲ್ಲಂಘಿಸುವವರಿಗೆ ಭಾರಿ ದಂಡವನ್ನೂ ವಿಧಿಸಿದೆ.ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಎಂದರೆ ಏನು?ಇದು Commission for Air Quality Management in NCR and Adjoining Areas Act – 2021 ಅಡಿಯಲ್ಲಿ ಸ್ಥಾಪಿಸಲಾದ ಒಂದು ಕಾನೂನುಬದ್ಧ (Statutory) ಸಂಸ್ಥೆಯಾಗಿದೆ. ದಿಲ್ಲಿ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳ ನಡುವೆ ಸಮನ್ವಯ ಸಾಧಿಸಿ ಮಾಲಿನ್ಯ ನಿಯಂತ್ರಿಸುವುದು ಇದರ ಮುಖ್ಯ ಗುರಿ.* ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಎಂದರೆ ವಾಯು ಮಾಲಿನ್ಯದ ತೀವ್ರತೆಗೆ ಅನುಗುಣವಾಗಿ ಕೈಗೊಳ್ಳುವ ತುರ್ತು ಕ್ರಮಗಳ ವ್ಯವಸ್ಥೆ. ಇತ್ತೀಚೆಗೆ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) ಸುಧಾರಣೆಗೊಂಡಿರುವುದರಿಂದ, GRAP ಹಂತ–IV (ಅತ್ಯಂತ ಕಠಿಣ) ನಿರ್ಬಂಧಗಳನ್ನು ಹಿಂಪಡೆಯಲಾಗಿದೆ, ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.ಗಮನಿಸಿ: ಮಾಲಿನ್ಯ ಮತ್ತೆ ಮರುಕಳಿಸದಂತೆ ತಡೆಯಲು ಹಂತ-I, II ಮತ್ತು III ಕ್ರಮಗಳು ಇನ್ನೂ ಜಾರಿಯಲ್ಲಿರುತ್ತವೆ.* ಪರಿಸರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ, ದಿಲ್ಲಿ ಸುತ್ತಮುತ್ತಲಿನ ಆರು ಥರ್ಮಲ್ ವಿದ್ಯುತ್ ಘಟಕಗಳಿಗೆ ಆಯೋಗವು ಶೋಕಾಸ್ ನೋಟಿಸ್ ನೀಡಿದ್ದು, ಜೈವಿಕ ಇಂಧನ ಮಿಶ್ರಣ (Biomass Co-firing) ನಿಯಮಗಳನ್ನು ಪಾಲಿಸದಿರುವುದೇ ಪ್ರಮುಖ ಕಾರಣವಾಗಿದೆ. ಇದರ ಪರಿಣಾಮವಾಗಿ, ನಿಯಮ ಉಲ್ಲಂಘಿಸಿದ ಘಟಕಗಳಿಗೆ ಸುಮಾರು ₹61 ಕೋಟಿ ಪರಿಸರ ದಂಡ ವಿಧಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ, ಇದು ಮಾಲಿನ್ಯ ನಿಯಂತ್ರಣದಲ್ಲಿ ಕಠಿಣ ಕ್ರಮವಾಗಿ ಪರಿಗಣಿಸಲಾಗಿದೆ.ಆಯೋಗದ ಪ್ರಮುಖ ಕಾರ್ಯಗಳು:- ಬೆಳೆ ಅವಶೇಷ ಸುಡುವಿಕೆ (Stubborn Burning) ತಡೆಗಟ್ಟುವುದು.- ಕೈಗಾರಿಕೆಗಳಲ್ಲಿ ಶುದ್ಧ ಇಂಧನದ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು.- ವೈಜ್ಞಾನಿಕ ಆಧಾರಿತ ವಾಯು ಗುಣಮಟ್ಟ ನಿರ್ವಹಣಾ ತಂತ್ರಗಳನ್ನು ರೂಪಿಸುವುದು.- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವುದು.CAQM Act – 2021 ಅಡಿಯಲ್ಲಿ ಸ್ಥಾಪಿತವಾದ ಆಯೋಗದ ಕೇಂದ್ರ ಕಚೇರಿ ನವದೆಹಲಿಯಲ್ಲಿ ಇರುವುದರೊಂದಿಗೆ, ಇದರ ವ್ಯಾಪ್ತಿಗೆ ದಿಲ್ಲಿ, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ಒಳಗೊಂಡಿವೆ. ಇಲ್ಲಿ AQI ಎಂದರೆ Air Quality Index (ವಾಯು ಗುಣಮಟ್ಟ ಸೂಚ್ಯಂಕ) ಆಗಿದ್ದು, ವಾಯು ಮಾಲಿನ್ಯದ ಮಟ್ಟವನ್ನು ಅಳೆಯಲು ಬಳಸಲಾಗುತ್ತದೆ. ಇನ್ನು Biomass Co-firing ಎಂದರೆ ಕಲ್ಲಿದ್ದಲಿನ ಜೊತೆಗೆ ಶೇ. 5–10 ರಷ್ಟು ಕೃಷಿ ತ್ಯಾಜ್ಯವನ್ನು ಸುಡುವ ವಿಧಾನ, ಇದು ಮಾಲಿನ್ಯ ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.