Job Description: * ಇದೀಗ ದೇಶದಲ್ಲಿ ವೃದ್ಧಾಪ್ಯ ಹಾಗೂ ಇನ್ನು ಅನೇಕ ಕಾರಣಗಳಿಂದಾಗಿ ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿಂದೆ 2021 ರಲ್ಲಿ 127 ಹುಲಿಗಳು, 2019 ರಲ್ಲಿ 96 ಹುಲಿಗಳು, ಹಾಗೂ 2020 ರಲ್ಲಿ 106 ಹುಲಿಗಳು ಸಾವನ್ನಪ್ಪಿವೆ ಎಂದು ಕೇಂದ್ರ ಸರ್ಕಾರವು ವರದಿ ಮಾಡಿದೆ. * ಪ್ರಸ್ತುತ ದೇಶದಲ್ಲಿ ವೃದ್ಧಾಪ್ಯ, ಹುಲಿಗಳ ನಡುವಿನ ಕಾದಾಟ, ವಿದ್ಯುತ್‌ ಸ್ಪರ್ಶ, ಬೇಟೆ ಹಾಗೂ ಇನ್ನು ಅನೇಕ ಕಾರಣಗಳಿಂದಾಗಿ ಹುಲಿಗಳ ಸಾವು ಹೆಚ್ಚುತ್ತಿದೆ ಎಂದು ಪರಿಸರ ಹಾಗೂ ಅರಣ್ಯ ಸಚಿವ ಭೂಪೇಂದರ್‌ ಯಾದವ್‌ ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. * ಬೇರೆ ಬೇರೆ ರಾಜ್ಯಗಳಿಂದ ಲಭಿಸಿರುವ ಮಾಹಿತಿಯ ಪ್ರಕಾರ 2021 ನೇ ಸಾಲಿನಲ್ಲಿ ದೇಶದಲ್ಲಿ 127 ಹುಲಿಗಳು ಮೃತಪಟ್ಟಿವೆ. ಅದರಲ್ಲಿಯೂ ಮಧ್ಯ ಪ್ರದೇಶದಲ್ಲಿ ಅತ್ಯಧಿಕವಾಗಿ ಅಂದರೆ 42 ಹುಲಿಗಳು ಸಾವನ್ನಪ್ಪಿವೆ, ಮಹಾರಾಷ್ಟ್ರ ರಾಜ್ಯದಲ್ಲಿ 27, ಕರ್ನಾಟಕ ರಾಜ್ಯದಲ್ಲಿ 15, ಉತ್ತರ ಪ್ರದೇಶ ರಾಜ್ಯದಲ್ಲಿ 9 ಹುಲಿಗಳು ಮೃತಪಟ್ಟಿವೆ ಎಂದು ತಿಳಿಸಿದೆ. * ಪ್ರಸ್ತುತ ಹುಲಿಗಳ ಜೀವಿತಾವಧಿ ಸಾಮಾನ್ಯವಾಗಿ 10 ರಿಂದ 12 ವರ್ಷಗಳು ಎಂದಿದ್ದಾರೆ, ಮಾನವ ಹಾಗೂ ಪ್ರಾಣಿ ಸಂಘರ್ಷವನ್ನು ತಡೆಯಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದ ಅಲ್ಲದೇ ಬೇಟೆಯಾಡುವವರ ವಿರುದ್ಧ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. * ಇದೀಗ ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ಹಿಂದೆ 2014 ರಲ್ಲಿ 2,226 ಹುಲಿಗಳಿದ್ದವು, 2018 ರ ಗಣತಿ ಪ್ರಕಾರ ದೇಶದಲ್ಲಿನ ಹುಲಿಗಳ ಸಂಖ್ಯೆ 2,967 ಆಗಿತ್ತು. ಪ್ರಸ್ತುತ ಭಾರತವು ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶವಾಗಿದೆ, ಜಾಗತಿಕವಾಗಿ ಶೇ.75ಕ್ಕೂ ಅಧಿಕ ಸಂಖ್ಯೆಯ ಹುಲಿಗಳೂ ಭಾರತದಲ್ಲಿವೆ ಎಂದು ವರದಿಯಾಗಿದೆ. * ಒಡಿಶಾದ ಅರಣ್ಯ ಅಧಿಕಾರಿ ಸರೋಜ್ ರಾಜ್ ಚೌಧರಿ ಅವರು 1970 ರಲ್ಲಿ ಹುಲಿಗಳನ್ನು ಎಣಿಸುವ ವಿಧಾನವನ್ನು ಮಾರ್ಪಡಿಸಿದರ. ಹಲವಾರು ಅರಣ್ಯ ಅಧಿಕಾರಿಗಳು ಹುಲಿ ಗಣತಿಗಾಗಿ ಪಗ್‌ಮಾರ್ಕ್ ವಿಧಾನವನ್ನು ಪ್ರತಿಪಾದಿಸಿದರು ಹಾಗೂ ಅದನ್ನು ಸುಧಾರಿಸಿದರು. 2003 ರಲ್ಲಿ ಪ್ರಾಣಿಗಳ ಸಮೃದ್ಧಿಯ ಅಂದಾಜಿನೊಂದಿಗೆ ವ್ಯವಹರಿಸುವ ಆಧುನಿಕ ವಿಜ್ಞಾನದ ಬೆಳಕಿನಲ್ಲಿ ಪಗ್‌ಮಾರ್ಕ್ ಜನಗಣತಿಯ ಹಲವಾರು ನ್ಯೂನತೆಗಳನ್ನು ಹೊರತಂದಿದೆ ಎಂದಿದ್ದಾರೆ. * ಭಾರತದಲ್ಲಿ ಹುಲಿ ಸಂರಕ್ಷಣೆಗಾಗಿ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ಆದೇಶದ ಜೊತೆಗೆ ಟೈಗರ್ ಟಾಸ್ಕ್ ಫೋರ್ಸ್ (TTF)ನ್ನು ನೇಮಿಸಲು ಭಾರತದ ಪ್ರಧಾನಿಯನ್ನು ಪ್ರೇರೇಪಿಸಿದ್ದರು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ರಚನೆ ಹಾಗೂ ವನ್ಯಜೀವಿ ರಕ್ಷಣೆ ಕಾಯಿದೆ 1972 ರ ತಿದ್ದುಪಡಿಯನ್ನು ಶಿಫಾರಸು ಮಾಡುವುದರ ಜೊತೆಗೆ, TTF ಭಾರತದ ವನ್ಯಜೀವಿ ಸಂಸ್ಥೆ ಅಭಿವೃದ್ಧಿಪಡಿಸಿದ ಆಧುನಿಕ ವೈಜ್ಞಾನಿಕ ಪ್ರೋಟೋಕಾಲ್‌ಗಳ ಆಧಾರದ ಮೇಲೆ ದೇಶದಾದ್ಯಂತ ಹುಲಿಗಳು ಮತ್ತು ಅವುಗಳ ಪರಿಸರ ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ಸೂಚಿಸಿದೆ. 2005 ರಲ್ಲಿ ಪ್ರಾಜೆಕ್ಟ್ ಟೈಗರ್ ಡೈರೆಕ್ಟರೇಟ್ ಹಾಗೂ ಮಧ್ಯಪ್ರದೇಶ ಅರಣ್ಯ ಇಲಾಖೆಯ ಸಹಯೋಗದ ಜೊತೆಗೆ ಆರಂಭಿಸಿದೆ.