Job Description: * ಪ್ರಸ್ತುತ ಕರ್ನಾಟಕ ಸರ್ಕಾರವು ಕರ್ನಾಟಕದಲ್ಲಿ ಫಿನ್ಟೆಕ್ ಅಥವಾ ಹಣಕಾಸು ತಂತ್ರಜ್ಞಾನಕ್ಕಾಗಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಲಿದೆ, ಎಂದು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾಗಿರುವ ಸಿ.ಎನ್. ಅಶ್ವಥ್ ನಾರಾಯಣ್ ಅವರು ತಿಳಿಸಿದ್ದಾರೆ. * ಸಚಿವ ಸಿ.ಎನ್. ಅಶ್ವಥ್ ನಾರಾಯಣ್ ಅವರು ಮಂಗಳೂರು ಟೆಕ್ನೋವಾಂಜಾ ಉದ್ಘಾಟನಾ ಸಮಾರಂಭದಲ್ಲಿ ಈ ಕ್ರಮವನ್ನು ಘೋಷಣೆ ಮಾಡಿದರು, ಅಷ್ಟೇ ಅಲ್ಲದೇ 2022-23 ರ ರಾಜ್ಯ ಬಜೆಟ್ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲು ಸರ್ಕಾರ 12 ಕೋಟಿ ರೂ ಹಣವನ್ನು ಕಾಯ್ದಿರಿಸಲಾಗುತ್ತದೆ ಎಂದು ತಿಳಿಸಿದರು. * ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಲಿಮಿಟೆಡ್ (KEONICS) ಸಹಾಯದಿಂದ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಲು ಸರ್ಕಾರ ಯೋಜಿಸಿದೆ, ಇದೀಗ ಇದಕ್ಕೆ ರಾಜ್ಯ KEONICS ಮಂಡಳಿಯು ಪ್ರಸ್ತಾವನೆಯನ್ನು ನೀಡಿದೆ. * ಟೆಲಿಕಾಂ ನೀತಿಯ ಅಡಿಯಲ್ಲಿ ಯೋಜನೆಗಳಿಗೆ ಏಕ ವಿಂಡೋ ಕ್ಲಿಯರೆನ್ಸ್ ವಿಂಡೋವನ್ನು ಒದಗಿಸಲಾಗುತ್ತದೆ.