Job Description: * ಪ್ರತಿ ವರ್ಷವು ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತಿ ರಾಜ್ ದಿನವನ್ನು ಆಚರಣೆ ಮಾಡಲಾಗುತ್ತದೆ. * 2010ರ ಏಪ್ರಿಲ್ 24ರಂದು ಮೊದಲ ರಾಷ್ಟ್ರೀಯ ಪಂಚಾಯತಿ ರಾಜ್ ದಿನವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಘೋಷಿಸಿದರು. * 73ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ 1993ರ ಏಪ್ರಿಲ್ 24 ಭಾರತದ ಪಂಚಾಯತಿ ರಾಜ್ ವ್ಯವಸ್ಥೆ ಜಾರಿಗೆ ತರಲಾಗಿದೆ. * 2020ರ ರಾಷ್ಟ್ರೀಯ ಪಂಚಾಯತಿ ರಾಜ್ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿತ್ವಾ ಯೋಜನೆಯನ್ನು ಆರಂಭಿಸಿದರು. * ಪ್ರಸ್ತುತ 2021ರ ರಾಷ್ಟ್ರೀಯ ಪಂಚಾಯತಿ ರಾಜ್ ಪ್ರಶಸ್ತಿಗಳಲ್ಲಿ 74,000ಕ್ಕೂ ಅಧಿಕ ಪಂಚಾಯಿತಿಗಳು ಭಾಗವಹಿಸಲಿವೆ. * ಪ್ರಸ್ತುತ ದೇಶದಲ್ಲಿ 2.6 ಲಕ್ಷಕ್ಕೂ ಅಧಿಕ ಪಂಚಾಯಿತಿಗಳಿವೆ. * ಬಲ್ವಂತ್ ರೈ ಸಮಿತಿಯು ಪಂಚಾಯತಿ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲು ಶಿಫಾರಸು ಮಾಡಿದೆ ಎಂದು ತಿಳಿಸಲಾಗಿದೆ. ಮನಮೋಹನ್ ಸಿಂಗ್ ರವರ ಬಗ್ಗೆ ಮಾಹಿತಿ : * ಮನಮೋಹನ್ ಸಿಂಗ್ ಅವರು ಭಾರತೀಯ ಅರ್ಥಶಾಸ್ತ್ರಜ್ಞ, ಶೈಕ್ಷಣಿಕ ಮತ್ತು ರಾಜಕಾರಣಿಯಾಗಿದ್ದು, ಅವರು 2004 ರಿಂದ 2014 ರವರೆಗೆ ಭಾರತದ 13ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. * ಅಧಿಕಾರದಲ್ಲಿದ್ದ ಮೊದಲ ಸಿಖ್, ಜವಾಹರಲಾಲ್ ನೆಹರು ನಂತರ ಮೊದಲ ಅವಧಿ ಪೂರ್ಣಗೊಂಡ ಬಳಿಕ ಪುನರಾಯ್ಕೆಯಾದ ಪ್ರಧಾನ ಮಂತ್ರಿಯೂ ಆಗಿದ್ದಾರೆ. * ಜನನ: 26 ಸೆಪ್ಟೆಂಬರ್ 1932 (ವಯಸ್ಸು 88 ವರ್ಷ), * ಶಿಕ್ಷಣ: ಸೇಂಟ್ ಜಾನ್ಸ್ ಕಾಲೇಜು (1956-1957) * ಹಿಂದಿನ ಕಚೇರಿಗಳು: ಭಾರತದ ಹಣಕಾಸು ಸಚಿವರು (2012–2012),