Job Description: ಕೇರಳ ಸರಕಾರದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಹರಿವರಾಸನಂ ಪ್ರಶಸ್ತಿ-2020 ಪ್ರಶಸ್ತಿಯನ್ನು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಜ.15ರಂದು ಶಬರಿಮಲೆ ಸ್ವಾಮಿ ಅಯ್ಯಪ್ಪ ಸನ್ನಿಧಾನದಲ್ಲಿ ಪ್ರಧಾನ ಮಾಡಲಾಯಿತು. ಪ್ರತೀವರ್ಷ ಧಾರ್ಮಿಕ, ಸಾಮರಸ್ಯ ಹಾಗೂ ರಾಷ್ಟ್ರೀಯ ಐಕ್ಯತೆಗೆ ಕಾರಣರಾದವರಿಗೆ ಈ ಪ್ರಶಸ್ತಿಯನ್ನು ಕೇರಳ ಸರಕಾರ ನೀಡುತ್ತಿದೆ. ಪ್ರಶಸ್ತಿಯು 1 ಲಕ್ಷ ನಗದು,ಪ್ರಮಾಣ ಪತ್ರ ಹಾಗೂ ಫಲಕ ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಇಳಯರಾಜ ಅವರಿಗೆ ಪೂಜಾ ಸಂಗೀತಗಾರ ಎಂಬ ಬಿರುದು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಈವರೆಗೆ ಡಾ.ಕೆ.ಜೆ.ಯೇಸುದಾಸ್,ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಎಸ್.ಚಿತ್ರಾ ,ಪಿ.ಸುಶೀಲಾಎಂ.ಜಿ.ಶ್ರೀ ಕುಮಾರ್, ಗಂಗೈ ಅಮರನ್ ಅವರಿಗೆ ನೀಡಲಾಗಿದೆ.