Job Description: * ಡಾ. ಬಾಬು ಜಗಜೀವನ್ ರಾಮ್ ಅವರು 1908 ರ ಏಪ್ರಿಲ್. 05 ರಂದು ಜನನ ಹಾಗೂ 1986 ರ ಜುಲೈ. 06 ರಂದು ನಿಧನ. ಇವರು ಬಾಬೂಜಿ ಎಂದು ಜನಪ್ರಿಯರಾಗಿದ್ದರು, ಬಾಬು ಅವರು ಬಿಹಾರದ ಭಾರತೀಯ ಸ್ವಾತಂತ್ರ್ಯ ಕಾರ್ಯಕರ್ತ ಹಾಗೂ ರಾಜಕಾರಣಿಯಾಗಿದ್ದರು. ಈ ಹಿಂದೆ 1935 ರಲ್ಲಿ ಅಸ್ಪೃಶ್ಯರಿಗೆ ಸಮಾನತೆಯನ್ನು ಸಾಧಿಸಲು ಮೀಸಲಾದ ಆಲ್ ಇಂಡಿಯಾ ಡಿಪ್ರೆಸ್ಡ್ ಕ್ಲಾಸಸ್ ಲೀಗ್‌ನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ನಂತರ ಇದಾದ ಬಳಿಕ 1937 ರಲ್ಲಿ ಬಿಹಾರ ವಿಧಾನಸಭೆಗೆ ಆಯ್ಕೆಯಾದರು, ನಂತರದ ದಿನಗಳಲ್ಲಿನ ಅವರು ಗ್ರಾಮೀಣ ಕಾರ್ಮಿಕ ಚಳವಳಿಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. * ಇವರು ಈ ಹಿಂದೆ 1946 ರಲ್ಲಿ ಜವಾಹರಲಾಲ್ ನೆಹರು ಅವರ ಮಧ್ಯಂತರ ಸರ್ಕಾರದಲ್ಲಿ ಅತ್ಯಂತ ಕಿರಿಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಾರ್ಮಿಕ ಸಚಿವರಾಗಿ ಭಾರತದ ಮೊದಲ ಕ್ಯಾಬಿನೆಟ್ ಹಾಗೂ ಭಾರತದ ಸಂವಿಧಾನ ಸಭೆಯ ಸದಸ್ಯರಾಗಿದ್ದರು. ತದನಂತರ ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಸದಸ್ಯರಾಗಿ ಮುಂದಿನ 30 ವರ್ಷಗಳ ಕಾಲ ವಿವಿಧ ಖಾತೆಗಳೊಂದಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಬಹಳ ಮುಖ್ಯವಾಗಿ ಇವರು 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತದ ರಕ್ಷಣಾ ಸಚಿವರಾಗಿದ್ದರು, ಆ ಸಂಧರ್ಭವು ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. * ಭಾರತದಲ್ಲಿನ ಹಸಿರು ಕ್ರಾಂತಿಗೆ ಹಾಗೂ ಭಾರತೀಯ ಕೃಷಿಯನ್ನು ಆಧುನೀಕರಿಸುವಲ್ಲಿ ಅವರ ಕೊಡುಗೆ, ಕೇಂದ್ರ ಕೃಷಿ ಸಚಿವರಾಗಿದ್ದ ಅವರ ಎರಡು ಅವಧಿಗಳಲ್ಲಿ ಸ್ಮರಣೀಯವಾಗಿದೆ. * ಈ ಹಿಂದೆ 1975-77 ರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಧಾನಿ ಇಂದಿರಾ ಗಾಂಧಿಅವರಿಗೆ ಬೆಂಬಲವನ್ನು ನೀಡಿದ್ದರು. ತದನಂತರ 1977 ರಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಕಾಂಗ್ರೆಸ್ ಫಾರ್ ಡೆಮಾಕ್ರಸಿ ಜೊತೆಗೆ ಜನತಾ ಪಕ್ಷದ ಮೈತ್ರಿಕೂಟಕ್ಕೆ ಸೇರಿಕೊಂಡರು. ನಂತರದ ದಿನಗಳಲ್ಲಿ 1977–79 ರ ನಡುವೆ ಭಾರತದ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮತ್ತೇ 1981 ರಲ್ಲಿ ಅವರು ಕಾಂಗ್ರೆಸ್ (ಜೆ)ನ್ನು ಸ್ಥಾಪನೆ ಮಾಡಿದ್ದಾರೆ. * ಮರಣದ ಸಮಯದಲ್ಲಿ ಮಧ್ಯಂತರ ಸರ್ಕಾರದ ಕೊನೆಯ ಉಳಿದಿರುವ ಮಂತ್ರಿ ಹಾಗೂ ಸ್ವತಂತ್ರ ಭಾರತದ ಮೊದಲ ಕ್ಯಾಬಿನೆಟ್‌ನ ಕೊನೆಯ ಮೂಲ ಸದಸ್ಯರಾಗಿದ್ದರು. ಈ ಹಿಂದೆ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಅವರ ಸೇವೆಯನ್ನು ಸೇರಿದಂತೆ ಅನೇಕ ಸಚಿವಾಲಯಗಳಲ್ಲಿ ಇವರು ಒಟ್ಟಾರೆಯಾಗಿ 30 ವರ್ಷಗಳ ಅಧಿಕಾರಾವಧಿಯು ಯಾವುದೇ ಭಾರತೀಯ ಫೆಡರಲ್ ಸಚಿವರಿಗಿಂತ ಹೆಚ್ಚು ಉದ್ದವಾಗಿದೆ ಎಂದು ತಿಳಿಸಿದ್ದಾರೆ.