Job Description: ➤ ಜಾಗತಿಕ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ನಡೆ ಮತ್ತೊಂದು ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC - United Nations Security Council) 2028-29ರ ಅವಧಿಗೆ ತಾತ್ಕಾಲಿಕ (ಕಾಯಂ ಅಲ್ಲದ) ಸದಸ್ಯತ್ವಕ್ಕಾಗಿ ಭಾರತ ಅಧಿಕೃತವಾಗಿ ತನ್ನ ಪ್ರಚಾರ ಅಭಿಯಾನವನ್ನು ಜಾಗತಿಕ ಮಟ್ಟದಲ್ಲಿ ಆರಂಭಿಸಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ಭಾರತದ ಈ ಬಾರಿಯ ಕಾರ್ಯಸೂಚಿ ಜಾಗತಿಕ ಗಮನ ಸೆಳೆಯುತ್ತಿದೆ.➤ ಭಾರತದ ಸ್ಪರ್ಧೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಏಷ್ಯಾ-ಪೆಸಿಫಿಕ್ ಗುಂಪಿನ ಏಕೈಕ ಸ್ಥಾನಕ್ಕಾಗಿ ಈ ಚುನಾವಣೆ ನಡೆಯಲಿದ್ದು, ಭಾರತದ ಎದುರಾಳಿಯಾಗಿ ತಾಜಿಕಿಸ್ತಾನ್ ಕಣದಲ್ಲಿದೆ. ಈ ಚುನಾವಣೆ ಮುಂದಿನ ವರ್ಷ (ಜೂನ್ ತಿಂಗಳಲ್ಲಿ) ನಡೆಯಲಿದೆ. ಭಾರತ ಈ ಚುನಾವಣೆಯಲ್ಲಿ ಜಯಗಳಿಸಿದರೆ, ಇದು ಭಾರತಕ್ಕೆ 9ನೇ ಅವಧಿಯ ಸದಸ್ಯತ್ವವಾಗಲಿದೆ.➤ ಭಾರತ ಮುಂದಿಟ್ಟಿರುವ ‘SHANTI’ ಯೋಜನೆ: ಭಾರತವು ಈ ಬಾರಿಯ ಅಭಿಯಾನಕ್ಕಾಗಿ ಜಾಗತಿಕ ವೇದಿಕೆಯಲ್ಲಿ ‘SHANTI’ (ಶಾಂತಿ) ಎಂಬ ಅತ್ಯಂತ ಪ್ರಭಾವಶಾಲಿ ಯೋಜನೆಯನ್ನು ಪ್ರಸ್ತಾಪಿಸಿದೆ. SHANTI ಪೂರ್ಣ ರೂಪ: Securing Holistic Advancement through Norms, Trust, and Integrity (ನಿಯಮಗಳು, ನಂಬಿಕೆ ಮತ್ತು ಸಮಗ್ರತೆಯ ಮೂಲಕ ಸಮಗ್ರ ಪ್ರಗತಿಯನ್ನು ಖಾತರಿಪಡಿಸುವುದು).➤ ಭಾರತದ ಪ್ರಮುಖ ಆದ್ಯತೆಗಳು: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಪ್ರಕಾರ, ಭಾರತವು ಈ ಕೆಳಗಿನ ಜಾಗತಿಕ ಸವಾಲುಗಳ ನಿವಾರಣೆಗೆ ಒತ್ತು ನೀಡಲಿದೆ: ಭಯೋತ್ಪಾದನೆ ತಡೆ: ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವುದನ್ನು ತಡೆಯುವುದು. ನಾವಿಕರ ಭದ್ರತೆ: ಮುಕ್ತ ಸಮುದ್ರಯಾನ ಸ್ವಾತಂತ್ರ್ಯ ಮತ್ತು ಕಡಲಗಳ್ಳರ ಹಾವಳಿ ತಡೆಗೆ ಅಂತರರಾಷ್ಟ್ರೀಯ ಸಮುದ್ರ ಕಾನೂನುಗಳ ಕಟ್ಟುನಿಟ್ಟಿನ ಜಾರಿ. ಗ್ಲೋಬಲ್ ಸೌತ್ ಧ್ವನಿ: ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿ ಕಾಯುವುದು ಹಾಗೂ ತಂತ್ರಜ್ಞಾನ/AI ದುರ್ಬಳಕೆ ತಡೆಯುವುದು. ➤ ಪ್ಯಾಲೆಸ್ತೀನ್ ಕುರಿತು ಭಾರತದ ನಿಲುವು: ಬ್ರಸೆಲ್ಸ್‌ನಲ್ಲಿ ನಡೆದ ಸಭೆಯಲ್ಲಿ ಭಾರತವು ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯತ್ವ ಸಿಗಬೇಕು ಎಂಬ ಬೇಡಿಕೆಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.➤ ಶಾಂತಿಪಾಲನಾ ಪಡೆಯಲ್ಲಿ ಭಾರತದ ಸಾಧನೆ: ವಿಶ್ವಸಂಸ್ಥೆ ಸ್ಥಾಪನೆಯಾದಾಗಿನಿಂದ ಭಾರತವು 50ಕ್ಕೂ ಹೆಚ್ಚು ಶಾಂತಿಪಾಲನಾ ಮಿಷನ್‌ಗಳಲ್ಲಿ ಸುಮಾರು 3,0,000 ಸಿಬ್ಬಂದಿಗಳನ್ನು ನಿಯೋಜಿಸಿದೆ. ಪ್ರಸ್ತುತ ಜಗತ್ತಿನಾದ್ಯಂತ ಸಕ್ರಿಯವಾಗಿರುವ 11 ಮಿಷನ್‌ಗಳ ಪೈಕಿ 10ರಲ್ಲಿ 4,300ಕ್ಕೂ ಹೆಚ್ಚು ಭಾರತೀಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ