* ಭಾರತದ ಸುಪ್ರೀಂ ಕೋರ್ಟ್ ಮತ್ತು ಭೂತಾನ್‌ನ ಉಚ್ಚ ನ್ಯಾಯಾಲಯದ ನಡುವೆ ಕಾನೂನು ಸಹಾಯಕರ (Law Clerks) ವಿನಿಮಯಕ್ಕಾಗಿ ಮಹತ್ವದ ಒಪ್ಪಂದ ಪತ್ರ (MoU) ಗೆ ಸಹಿ ಮಾಡಲಾಗಿದೆ. ಈ ಒಪ್ಪಂದವು ಎರಡೂ ದೇಶಗಳ ನ್ಯಾಯಾಂಗ ಸಹಕಾರ, ಸಾಮರ್ಥ್ಯ ವೃದ್ಧಿ ಮತ್ತು ಕಾನೂನು ಜ್ಞಾನ ಹಂಚಿಕೆಗೆ ಹೊಸ ಆಯಾಮ ನೀಡಿದೆ. ಈ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರಕಟಣೆ ನೀಡಿ, ಭೂತಾನ್‌ನ ಇಬ್ಬರು ಕಾನೂನು ಸಹಾಯಕರನ್ನು ಭಾರತದ ಸುಪ್ರೀಂ ಕೋರ್ಟ್‌ಗೆ ಸ್ವಾಗತಿಸಿದರು. ಇದು ಭಾರತ–ಭೂತಾನ್ ನಡುವಿನ ನ್ಯಾಯಾಂಗ ಸಂಬಂಧಗಳ ಬಲವರ್ಧನೆಯನ್ನು ಸೂಚಿಸುತ್ತದೆ.* ಭಾರತ ಮತ್ತು ಭೂತಾನ್ ನಡುವಿನ ಈ MoU ಮೂಲಕ ಭೂತಾನ್‌ನ ಯುವ ಕಾನೂನು ವೃತ್ತಿಪರರಿಗೆ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಲಾಗಿದೆ. ನ್ಯಾಯಾಂಗ ತರಬೇತಿ ಮತ್ತು ದೀರ್ಘಕಾಲೀನ ಸಂಸ್ಥಾತ್ಮಕ ಸಹಕಾರವೇ ಇದರ ಪ್ರಮುಖ ಉದ್ದೇಶವಾಗಿದೆ.MoUನ ಪ್ರಮುಖ ಅಂಶಗಳು:=> ಭೂತಾನ್‌ನ ಎರಡು ಕಾನೂನು ಸಹಾಯಕರು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಕೆಲಸ ಮಾಡಲಿದ್ದಾರೆ=> ಕಾರ್ಯಾವಧಿ: ಮೂರು ತಿಂಗಳು=> ಭಾರತೀಯ ಕಾನೂನು ಸಹಾಯಕರಿಗೆ ನೀಡುವಂತೆಯೇ ಮಾನಧನ (Honorarium) ನೀಡಲಾಗುತ್ತದೆ=> ಪ್ರಯಾಣ ವೆಚ್ಚವನ್ನು ಭಾರತದ ಸುಪ್ರೀಂ ಕೋರ್ಟ್ ಭರಿಸಲಿದೆ* ಒಪ್ಪಂದದ ಹಿನ್ನೆಲೆ: 2025ರ ಅಕ್ಟೋಬರ್‌ನಲ್ಲಿ ಭಾರತದ ಆಗಿನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಭೂತಾನ್‌ಗೆ ಅಧಿಕೃತ ಭೇಟಿ ನೀಡಿದ್ದು, ಭಾರತ–ಭೂತಾನ್ ನ್ಯಾಯಾಂಗ ಸಹಕಾರವನ್ನು ಬಲಪಡಿಸುವಲ್ಲಿ ಪ್ರಮುಖವಾಗಿತ್ತು. ಈ ವೇಳೆ ಉಚ್ಚ ಮಟ್ಟದ ಚರ್ಚೆಗಳ ಮೂಲಕ ತಂತ್ರಜ್ಞಾನ ಆಧಾರಿತ ನ್ಯಾಯಾಲಯ ವ್ಯವಸ್ಥೆಗಳು, ಇ-ಕೋರ್ಟ್‌, ಡಿಜಿಟಲ್ ಸೇವೆಗಳ ಅನುಭವ ಹಂಚಿಕೆ ಹಾಗೂ ಯುವ ಕಾನೂನು ವೃತ್ತಿಪರರ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಲಾಯಿತು. ಇದರ ಫಲವಾಗಿ ಕಾನೂನು ಸಹಾಯಕರ ವಿನಿಮಯಕ್ಕಾಗಿ MoU ರೂಪುಗೊಂಡು, ಇಂದಿನ ಒಪ್ಪಂದಕ್ಕೆ ದಾರಿ ಮಾಡಿಕೊಟ್ಟಿತು.* ಈ ಉಪಕ್ರಮದ ಮಹತ್ವ:=> ಭಾರತ–ಭೂತಾನ್ ನಡುವಿನ ನ್ಯಾಯಾಂಗ ರಾಜತಾಂತ್ರಿಕತೆ ಬಲವರ್ಧನೆ=> ಭೂತಾನ್ ನ್ಯಾಯಾಂಗಕ್ಕೆ ಭಾರತದ ಕಾನೂನು ವ್ಯವಸ್ಥೆಯ ಅನುಭವ=> ಭಾರತದ Neighbourhood First Policy ಅಡಿಯಲ್ಲಿ ಪ್ರಾದೇಶಿಕ ಸಹಕಾರಕ್ಕೆ ಉತ್ತೇಜನ