* ಭಾರತದ ಮೊದಲ ಹಿಮಾಲಯನ್ ಏರ್ ಸಫಾರಿ ಪ್ರಾರಂಭಿಸುವ ಮೂಲಕ ಉತ್ತರಾಖಂಡ ಸರ್ಕಾರ ಪ್ರವಾಸೋದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ. ಗೈರೋಕಾಪ್ಟರ್ಸ್ ಎಂದು ಕರೆಯಲ್ಪಡುವ ಚಿಕ್ಕ ಗಾತ್ರದ ಚುರುಕಾಗಿ ಹಾರಾಡುವ ವಿಮಾನದ ಮೊದಲ ಪ್ರಾಯೋಗಿಕ ಹಾರಾಟವು ಹರಿದ್ವಾರದ ಬೈರಾಗಿ ಶಿಬಿರದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ.* ರಾಜಾಸ್ ಏರೋಸ್ಪೋರ್ಟ್ಸ್ ಮತ್ತು ಅಡ್ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಗೈರೋಕಾಪ್ಟರ್  ಸಫಾರಿಯನ್ನು ಆರಂಭಿಸಿದೆ. ಡಿಎಂ ಧೀರಜ್ ಸಿಂಗ್ ಗಾರ್ಬ್ಯಾಲ್ ಪ್ರಾಯೋಗಿಕ ರನ್‌ನಲ್ಲಿ ಪೈಲಟ್‌ನೊಂದಿಗೆ ಗೈರೊಕಾಪ್ಟರ್‌ಗಳಲ್ಲಿ ಹಾರಿದರು.* ಈ ಪ್ರಾಯೋಗಿಕ ಹಾರಾಟದ ಭಾಗವಾಗಿದ್ದ ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರ್ನಲ್ ಅಶ್ವಿನಿ ಪುಂಡೀರ್ ಮಾತನಾಡಿ, ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳ ಹಿಮಾಲಯನ್ ಏರ್ ಸಫಾರಿ ಯೋಜನೆಯನ್ನು ಗೈರೋಕಾಪ್ಟರ್ ಮೂಲಕ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಈ ಯೋಜನೆಯಲ್ಲಿ ಪ್ರವಾಸಿಗರು ಗೈರೊಕಾಪ್ಟರ್‌ನಲ್ಲಿ ಒಂದು ಸ್ಥಳದಿಂದ ಹಾರುತ್ತಾರೆ, ಹಿಮಾಲಯದ ಶಿಖರಗಳು ಮತ್ತು ನದಿಗಳ ನೈಸರ್ಗಿಕ ಸೌಂದರ್ಯವನ್ನು ಆನಂದಿಸುತ್ತಾರೆ, ಮತ್ತೊಂದು ತಾಣವನ್ನು ತಲುಪುತ್ತಾರೆ ಮತ್ತು ಗಮ್ಯಸ್ಥಾನದಲ್ಲಿ ಸ್ವಲ್ಪ