* ಬಾಂಗ್ಲಾ ದೇಶದ ಪ್ರಧಾನಿಯಾದ ಶೇಖ್ ಹಸೀನಾ ಅವರು ಭಾರತಕ್ಕೆ ಭೇಟಿ ನೀಡಿದ್ದು, ರಕ್ಷಣಾ ವಲಯ, ಬಾಹ್ಯಾಕಾಶ,ದೂರ ಸಂಪರ್ಕ, ಕಡಲ ಭದ್ರತೆ ಹಾಗೂ ಸಾಗರ ಆರ್ಥಿಕತೆಯಂತಹ ಕ್ಷೇತ್ರಗಳಲ್ಲಿ ತಮ್ಮ ಸಂಭಂದವನ್ನು ಅಭಿರುದ್ಧಿಪಡಿಸಲು  ಹಲವಾರು ಒಪ್ಪಂದಗಳಿಗೆ ಸಹಿಹಾಕಿದ್ದಾರೆ.* ಭಾರತ ಮತ್ತು ಬಾಂಗ್ಲಾದೇಶವು 1996ರಲ್ಲಿ ಸಹಿ ಮಾಡಿದ್ದ 'ಗಂಗಾ ಜಲ ಒಪ್ಪಂದ'ದ ಬಗ್ಗೆ ಈಗಿನಿಂದಲೇ ಚರ್ಚೆ ಆರಂಭಿಸಲು ಉಭಯನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಏಕೆಂದರೆ ಗಂಗಾ ನದಿ ನೀರಿನ ನ್ಯಾಯಯುತ ಹಂಚಿಕೆಗೆ ಸಂಭಂದಿಸಿದೆ ಎರಡೂ ದೇಶಗಳ ನಡುವಿನ 2026ರಲ್ಲಿ ನವಿಕರಿಸಬೇಕಾಗಿದೆ.* ಡಿಸೆಂಬರ್ 12, 1996 ರಂದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ನಿರ್ಣಾಯಕ ಒಪ್ಪಂದವಾದ ಗಂಗಾ ಜಲ ಒಪ್ಪಂದವು 2026 ರಲ್ಲಿ ನವೀಕರಣಗೊಳ್ಳಲಿದೆ. ಈ ದಿನಾಂಕವು ಸಮೀಪಿಸುತ್ತಿದ್ದಂತೆ, ಅದರ ನವೀಕರಣದ ಸಿದ್ಧತೆಗಳು ನಡೆಯುತ್ತಿವೆ, ಇದರಲ್ಲಿ ಮಹತ್ವದ ಆಂತರಿಕ ವಿಮರ್ಶೆಗಳು ಮತ್ತು ಮಧ್ಯಸ್ಥಗಾರರ ಸಮಾಲೋಚನೆಗಳು ಸೇರಿವೆ.* ಗಂಗಾ ಜಲ ಒಪ್ಪಂದದಂತೆ ಬರ ಸಂಭವಿಸುವ ಸಮಯದಲ್ಲಿ ಬಾಂಗ್ಲಾದೇಶಕ್ಕೆ ನಿರ್ದಿಷ್ಟ ಪ್ರಮಾಣದ ನೀರು ಹರಿಸುವುದನ್ನು ಖಚಿತಪಡಿಸುತ್ತದೆ. ನೀರಿನ ಹಂಚಿಕೆ ಮಾಡಲಾಗುತ್ತಿದೆಯೇ ಎನ್ನುವುದನ್ನು ನೋಡಿಕೊಳ್ಳಲು ಜಂಟಿ ನಿಗಾ ಆಯೋಗ ರಚಿಸಲಾಗಿದೆ.* ಗಂಗಾ ಜಲ ಒಪ್ಪಂದವು ದಕ್ಷಿಣ ಏಷ್ಯಾದಲ್ಲಿ ದೀರ್ಘಾವಧಿಯ ನದಿ ನೀರು ಹಂಚಿಕೆ ಹಾಗೂ ಹರಿವಿನ ಕುರಿತಾದ ಅಪರೂಪದ ಉದಾಹರಣೆಯಾಗಿದೆ.* ಮುಂಬರುವ ಚರ್ಚೆಯಲ್ಲಿ ಪಶ್ಚಿಮ ಬಂಗಾಳ ಸರಕಾರದ ಪಾಲ್ಗೊಳ್ಳುವಿಕೆ ಮಹತ್ವದ್ದಾಗಿದೆ.ಈ ಏಕೆಂದರೆ ನದಿ ನೀರು ಹಂಚಿಕೆಯ ವಿಚಾರದಲ್ಲಿ ರಾಜ್ಯಗಳ ಒಪ್ಪಿಗೆ ಅಗತ್ಯವಾಗಿದೆ.