* ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರಿಂದ ಅಪಹರಣದ ಅಪಾಯ ಎದುರಿಸಿದ್ದ 18 ಸಿಬ್ಬಂದಿಯುಳ್ಳ ಮಾಲ್ವಾ ದೇಶದ ಹಡಗಿನ ತುರ್ತು ಕರೆಗೆ ತಕ್ಷಣವೇ ಸ್ಪಂದಿಸಿ ಹಡಗನ್ನು ಪಾರು ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆಯು  ಡಿಸೆಂಬರ್ 16 ರಂದು ತಿಳಿಸಿದೆ. * ಅರಬ್ಬಿ ಸಮುದ್ರದಲ್ಲಿರುವ ಮಾಲ್ಟಾದ ಸರಕು ಹಡಗು ಎಮ್ವಿ ರುಯೆನ್ ಕಳುಹಿಸಿದ ತುರ್ತು ಅಪಾಯ ಸಂದೇಶಕ್ಕೆ ಭಾರತೀಯ ನೌಕಾಪಡೆ ತಕ್ಷಣ ಸ್ಪಂದಿಸಿದೆ. ಭಾರತೀಯ ನೌಕಾಪಡೆಯ ಸಾಗರ ತೀರ ಗಸ್ತು ವಿಮಾನ ಮತ್ತು ಕಡಲ್ಗಳ್ಳತನ ನಿಗ್ರಹ ಉದ್ದೇಶದ ಗಸ್ತು ನೌಕೆಯೊಂದನ್ನು ಈ ಕಾರ್ಯಕ್ಕಾಗಿ ನಿಯೋಜಿಸಿದೆ.* ‘‘ಅಪರಹಣಕ್ಕೊಳಗಾಗಿರುವ ಹಡಗಿನಲ್ಲಿ 18 ಸಿಬ್ಬಂದಿ ಇದ್ದಾರೆ. ಆರು ಮಂದಿ ಆಗಂತುಕರು ಹಡಗನ್ನು ಏರಿದ್ದಾರೆ ಎಂದು ಆ ಸಂದೇಶ ತಿಳಿದ ತಕ್ಷಣ ಪ್ರತಿಕ್ರಿಯಿಸಿರುವ ಭಾರತೀಯ ನೌಕಾಪಡೆಯು ತನ್ನ ಸಾಗರತೀರ ಗಸ್ತು ವಿಮಾನ ಮತ್ತು ಏಡನ್ ಕೊಲ್ಲಿಯಲ್ಲಿ ನಿಯೋಜಿಸಲಾಗಿರುವ ಕಡಲ್ಗಳ್ಳತನ ನಿಗ್ರಹ ಹಡಗನ್ನು ಅಪಹರಣಕ್ಕೊಳಗಾಗಿದೆ ಎನ್ನಲಾದ ಹಡಗಿನತ್ತ ಕಳುಹಿಸಿದೆ’’ ಎಂದು ಭಾರತೀಯ ನೌಕಾಪಡೆಯು ತಿಳಿಸಿದೆ.* ಮಾಹಿತಿ ಬಂದ ಕೂಡಲೇ ತ್ವರಿತವಾಗಿ ಪ್ರತಿಕ್ರಿಯಿಸಿದ ಭಾರತೀಯ ನೌಕಾಪಡೆಯು ತನ್ನ ನೌಕಾ ಸಾಗರ ಗಸ್ತು ವಿಮಾನವನ್ನು ಕಣ್ಗಾವಲಿಗೆ ನಿಯೋಜಿಸಿದೆ. ಪ್ರದೇಶ ಮತ್ತು ಅದರ ಯುದ್ಧನೌಕೆ ಗಲ್ಫ್ ಅಡೆನ್‌ನಲ್ಲಿ ಆಂಟಿ ಪೈರಸಿ ಗಸ್ತು ತಿರುಗುತ್ತದೆ ಮತ್ತು ಎಂವಿ ರುಯೆನ್ ಅನ್ನು ಪತ್ತೆಹಚ್ಚಲು ಮತ್ತು ಸಹಾಯ ಮಾಡಲು ಭಾರತೀಯ ನೌಕಾಪಡೆ ನೌಕೆ ರವಾನಿಸಿದೆ.