Loading..!

ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯಲ್ಲಿ ಗ್ರೂಪ್- ಸಿ, ಡಿ ಹುದ್ದೆಗಳ ಭರ್ತಿ 2026
Published by: Yallamma G | Date:5 ಫೆಬ್ರುವರಿ 2026
not found
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯ (Muzrai Department) ಅಡಿಯಲ್ಲಿ ಬರುವ ಬೆಂಗಳೂರು ದಕ್ಷಿಣ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ನಾಗೇಶ್ವರಸ್ವಾಮಿ ದೇವಾಲಯದಲ್ಲಿ (ಬೇಗೂರು) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ, ನಿಗದಿತ ದಿನಾಂಕದೊಳಗೆ ಆಫ್‌ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಅದರಲ್ಲೂ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯ (ಮುಜರಾಯಿ ಇಲಾಖೆ) ವ್ಯಾಪ್ತಿಗೆ ಬರುವ ಬೆಂಗಳೂರಿನ ಇತಿಹಾಸ ಪ್ರಸಿದ್ಧ ದೇವಾಲಯದಲ್ಲಿ ಖಾಲಿ ಇರುವ ಪಾರುಪತ್ತೇದಾರರು, ರಾತ್ರಿ ಕಾವಲುಗಾರರು  ಮತ್ತು ಹಗಲು ಕಾವಲುಗಾರರು ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ದಿನಾಂಕ 21.02.2026 ರ ಸಂಜೆ 5.30ರ ಒಳಗೆ ಖುದ್ದಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. 

ನೇಮಕಾತಿ ವಿಧಾನ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಾವಳಿಗಳು 2002ರ ನಿಯಮ-12(1)ರ ಅನ್ವಯ ಮೀಸಲಾತಿಯನ್ನು ಅನುಸರಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ನೇಮಕಾತಿಯ ಕುರಿತಾದ ಹುದ್ದೆಯ ವಿವರ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ.

ನೇಮಕಾತಿ ಸಂಕ್ಷಿಪ್ತ ವಿವರ (Recruitment Overview)
ಇಲಾಖೆ : ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ

ಕೆಲಸದ ಸ್ಥಳ : ಶ್ರೀ ನಾಗೇಶ್ವರಸ್ವಾಮಿ ದೇವಾಲಯ, ಬೇಗೂರು, ಬೆಂಗಳೂರು

ಹುದ್ದೆಯ ಹೆಸರು : ಪಾರುಪತ್ತೇದಾರರು ಮತ್ತು ಕಾವಲುಗಾರರು

ಒಟ್ಟು ಹುದ್ದೆಗಳು : 03

ಅರ್ಜಿ ಸಲ್ಲಿಸುವ ಬಗೆ : ನೇರ ಭೇಟಿ (Offline)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-02-2026 (ಸಂಜೆ 5:30 ರೊಳಗೆ)


ಅಧಿಸೂಚನೆಯ ಪ್ರಕಾರ, ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ:


=> ಪಾರುಪತ್ತೇದಾರರು (ಹೊರಾಂಗಣ) - Parupathyedararu

ವೃಂದ: ಗ್ರೂಪ್ 'ಸಿ' (Group C)

ಹುದ್ದೆಗಳ ಸಂಖ್ಯೆ: 01

=> ಹಗಲು ಕಾವಲುಗಾರರು (ಹೊರಾಂಗಣ) - Day Watchman

ವೃಂದ: ಗ್ರೂಪ್ 'ಡಿ' (Group D)

ಹುದ್ದೆಗಳ ಸಂಖ್ಯೆ: 01


=> ರಾತ್ರಿ ಕಾವಲುಗಾರರು (ಹೊರಾಂಗಣ) - Night Watchman

ವೃಂದ: ಗ್ರೂಪ್ 'ಡಿ' (Group D)

ಹುದ್ದೆಗಳ ಸಂಖ್ಯೆ: 01 


ಅರ್ಜಿ ಸಲ್ಲಿಸುವುದು ಹೇಗೆ? (Application Process)
ಇದು ಆಫ್‌ಲೈನ್ ನೇಮಕಾತಿ ಆಗಿರುವುದರಿಂದ, ಅಭ್ಯರ್ಥಿಗಳು ಖುದ್ದಾಗಿ ಕಚೇರಿಗೆ ಭೇಟಿ ನೀಡಿ ಅರ್ಜಿ ಪಡೆಯಬೇಕು.

- ಅರ್ಜಿ ಪಡೆಯುವ ಸ್ಥಳ:
ಆಸಕ್ತ ಅಭ್ಯರ್ಥಿಗಳು "ಶ್ರೀ ವಸಂತವಲ್ಲಭರಾಯ ಸ್ವಾಮಿ ದೇವಾಲಯದ ಕಚೇರಿ, ವಸಂತಪುರ, ಬೆಂಗಳೂರು ದಕ್ಷಿಣ" ಇಲ್ಲಿಗೆ ಭೇಟಿ ನೀಡಬೇಕು.

- ದಾಖಲೆ: ಅರ್ಜಿ ನಮೂನೆಯನ್ನು ಪಡೆಯಲು ನಿಮ್ಮ ಆಧಾರ್ ಕಾರ್ಡ್ (Aadhaar Card) ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

- ಸಲ್ಲಿಕೆ: ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 21.02.2026 ರ ಸಂಜೆ 5.30ರ ಒಳಗೆ ಇದೆ ಕಚೇರಿಯಲ್ಲಿ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು (Important Dates)
ಅರ್ಜಿ ವಿತರಣೆ ಪ್ರಾರಂಭ ದಿನಾಂಕ: 30-01-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-02-2026


ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಯಾವ ದೇವಸ್ಥಾನದಲ್ಲಿ ನೇಮಕಾತಿ? ಬೆಂಗಳೂರು ನಗರ ಜಿಲ್ಲೆ, ದಕ್ಷಿಣ ತಾಲೂಕು, ಬೇಗೂರು ಗ್ರಾಮದ ಶ್ರೀ ನಾಗೇಶ್ವರಸ್ವಾಮಿ ದೇವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ಸಂಪರ್ಕ ವಿಳಾಸ (Address for Application)
ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ, ಶ್ರೀ ವಸಂತವಲ್ಲಭರಾಯ ಸ್ವಾಮಿ ಮತ್ತು ಸಮೂಹ ದೇವಾಲಯಗಳು, ವಸಂತಪುರ ಗ್ರಾಮ, ಉತ್ತರಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು.

ಗಮನಿಸಿ: ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Application End Date:  21 ಫೆಬ್ರುವರಿ 2026
To Download Official Notification

Comments