750 ಭೂಮಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ: ಬಿ.ಎಸ್.ಸಿ (B.Sc) ಓದಿದವರಿಗೆ KEA ಬಿಗ್ ರಿಲೀಫ್!
Published by: Yallamma G | Date:6 ಆಗಸ್ಟ್ 2026

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಂದಾಯ ಇಲಾಖೆಯ 750 ಭೂಮಾಪಕ ಹುದ್ದೆಗಳ ವಿದ್ಯಾರ್ಹತೆಯಲ್ಲಿ ಬದಲಾವಣೆ ಮಾಡಿದ್ದು, ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ಆಗಸ್ಟ್ 20ಕ್ಕೆ ವಿಸ್ತರಿಸಿದೆ.
ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಹಿಸುದ್ದಿ ನೀಡಿದೆ. ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 750 ಭೂಮಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ದಿಢೀರ್ ವಿಸ್ತರಣೆ ಮಾಡಲಾಗಿದೆ.
ಆಗಸ್ಟ್ 4ರಂದು ಪ್ರಕಟವಾದ ಹೊಸ ತಿದ್ದೋಲೆ ಪ್ರಕಾರ, ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಅವಕಾಶ ವಂಚಿತರಾಗಿದ್ದ ಸಾವಿರಾರು ಬಿಎಸ್ಸಿ ಹಾಗೂ ಡಿಪ್ಲೊಮಾ ಪದವೀಧರರಿಗೆ ಈಗ ಅರ್ಜಿ ಸಲ್ಲಿಸಲು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ.
ಹೊಸ ನಿಯಮಗಳ ಅನ್ವಯ, ಆಗಸ್ಟ್ 20ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಯಾರೆಲ್ಲಾ ಅರ್ಜಿ ಹಾಕಬಹುದು? ವಿದ್ಯಾರ್ಹತೆಯಲ್ಲಿ ಆದ ಹೊಸ ಬದಲಾವಣೆಗಳೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕೆಇಎ ಭೂಮಾಪಕರ ನೇಮಕಾತಿ ಮುಖ್ಯಾಂಶಗಳು
ರಾಜ್ಯ ಸರ್ಕಾರವು ಬಿ.ಎಸ್.ಸಿ. (B.Sc) ಪದವೀಧರರಿಗೆ ಉದ್ಯೋಗ ಪಡೆಯಲು ಹೆಚ್ಚಿನ ಅವಕಾಶಗಳನ್ನು ಒದಗಿಸಿದೆ. ಪರಿಷ್ಕೃತ ಕನಿಷ್ಠ ವಿದ್ಯಾರ್ಹತೆಗಳ ವಿವರ ಹೀಗಿದೆ.
ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ ಪದವಿ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಯಾವುದೇ ಪದವಿ ಪಡೆದಿರುವವರು ಅರ್ಜಿ ಹಾಕಬಹುದು. ಎಎಂಐಇ (AMIE) ಪದವಿ ಹೊಂದಿರುವವರಿಗೂ ಅವಕಾಶವಿದೆ.
ಡಿಪ್ಲೊಮಾ ಅಭ್ಯರ್ಥಿಗಳಿಗೆ ಅವಕಾಶ:
ಎಐಸಿಟಿಇ (AICTE) ಇಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಯಾವುದೇ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ ವಿಭಾಗದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿದವರು ಅರ್ಹರು.
ಬಿ.ಎಸ್.ಸಿ. ಪದವೀಧರರಿಗೆ ವಿಶೇಷ ಆಧ್ಯತೆ:
ಹಿಂದಿನ ಅಧಿಸೂಚನೆಗಿಂತ ಈಗ ಹೆಚ್ಚು ಬಿ.ಎಸ್.ಸಿ ವಿಷಯಗಳಿಗೆ ಅವಕಾಶ ನೀಡಲಾಗಿದೆ. ಗಣಿತ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಇನ್ಸ್ಟ್ರುಮೆಂಟೇಶನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್, ಕೃಷಿ ವಿಷಯಗಳಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಹೊಸದಾಗಿ ಸೇರ್ಪಡೆಯಾದ ವಿಷಯಗಳು:
ತೋಟಗಾರಿಕೆ, ಮೀನುಗಾರಿಕೆ, ಅರಣ್ಯ ವಿಜ್ಞಾನ ಹಾಗೂ ರೇಷ್ಮೆ ಕೃಷಿ ವಿಷಯಗಳನ್ನು ಓದಿದವರಿಗೂ ಈಗ ಭೂಮಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಸಿಕ್ಕಿದೆ.
ಬಿ.ಎಸ್.ಸಿ ಅಭ್ಯರ್ಥಿಗಳಿಗೆ ಬಹುಮುಖ್ಯ ಸೂಚನೆ:
ಗಣಿತ ಅಥವಾ ಭೌತಶಾಸ್ತ್ರವನ್ನು ಕನಿಷ್ಠ ಒಂದು ವಿಷಯವನ್ನಾಗಿ ಅಭ್ಯಸಿಸಿ ಬಿ.ಎಸ್.ಸಿ ಪದವಿ ಪಡೆದವರು ಹಾಗೂ ಬಿ.ಎಸ್.ಸಿ ಆನರ್ಸ್ ಮುಗಿಸಿದ ಎಲ್ಲಾ ಅಭ್ಯರ್ಥಿಗಳಿಗೂ ನೇರ ನೇಮಕಾತಿಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ವಿಸ್ತರಿಸಲಾದ ಪ್ರಮುಖ ದಿನಾಂಕಗಳು (Extended Dates)
ಹೊಸ ವಿದ್ಯಾರ್ಹತೆಗಳ ಸೇರ್ಪಡೆಯಿಂದಾಗಿ ಸಾವಿರಾರು ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಹೀಗಾಗಿ ಕೆಇಎ ಅರ್ಜಿ ಸಲ್ಲಿಕೆ ದಿನಾಂಕವನ್ನು ಪರಿಷ್ಕರಿಸಿದೆ.
ಕೆಇಎ ಭೂಮಾಪಕ ಹುದ್ದೆಗಳು ರಾಜ್ಯದ ಪ್ರತಿಷ್ಠಿತ ಸರ್ಕಾರಿ ಹುದ್ದೆಗಳಲ್ಲಿ ಒಂದಾಗಿದೆ. ಇದೀಗ ವಿದ್ಯಾರ್ಹತೆಯ ನಿಯಮ ಸಡಿಲಿಸಿರುವುದರಿಂದ ಗ್ರಾಮೀಣ ಭಾಗದ ಕೃಷಿ, ತೋಟಗಾರಿಕೆ ಹಾಗೂ ವಿಜ್ಞಾನ ಪದವೀಧರರಿಗೆ ದೊಡ್ಡ ಮಟ್ಟದ ಅನುಕೂಲವಾಗಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಕೆಇಎ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ಈ ವಿದ್ಯಾರ್ಹತೆ ಹೊಂದಿದ್ದರೆ ಅವರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ನೆರವಾಗಿ.
ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಹಿಸುದ್ದಿ ನೀಡಿದೆ. ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 750 ಭೂಮಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ದಿಢೀರ್ ವಿಸ್ತರಣೆ ಮಾಡಲಾಗಿದೆ.
ಆಗಸ್ಟ್ 4ರಂದು ಪ್ರಕಟವಾದ ಹೊಸ ತಿದ್ದೋಲೆ ಪ್ರಕಾರ, ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಅವಕಾಶ ವಂಚಿತರಾಗಿದ್ದ ಸಾವಿರಾರು ಬಿಎಸ್ಸಿ ಹಾಗೂ ಡಿಪ್ಲೊಮಾ ಪದವೀಧರರಿಗೆ ಈಗ ಅರ್ಜಿ ಸಲ್ಲಿಸಲು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ.
ಹೊಸ ನಿಯಮಗಳ ಅನ್ವಯ, ಆಗಸ್ಟ್ 20ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಯಾರೆಲ್ಲಾ ಅರ್ಜಿ ಹಾಕಬಹುದು? ವಿದ್ಯಾರ್ಹತೆಯಲ್ಲಿ ಆದ ಹೊಸ ಬದಲಾವಣೆಗಳೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕೆಇಎ ಭೂಮಾಪಕರ ನೇಮಕಾತಿ ಮುಖ್ಯಾಂಶಗಳು
- ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
- ಇಲಾಖೆ: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
- ಹುದ್ದೆಯ ಹೆಸರು: ಭೂಮಾಪಕರು (Land Surveyor)
- ಒಟ್ಟು ಹುದ್ದೆಗಳು: 750 ಹುದ್ದೆಗಳು (560 ಉಳಿಕೆ ಮೂಲ ವೃಂದ ಮತ್ತು 190 ಕಲ್ಯಾಣ-ಕರ್ನಾಟಕ)
- ಅರ್ಜಿ ಸಲ್ಲಿಕೆಗೆ ವಿಸ್ತರಿಸಲಾದ ಕೊನೆಯ ದಿನಾಂಕ: 20 ಆಗಸ್ಟ್ 2026
- ಶುಲ್ಕ ಪಾವತಿಸಲು ಕೊನೆಯ ದಿನಾಂಕ: 21 ಆಗಸ್ಟ್ 2026
- ಅಧಿಕೃತ ವೆಬ್ಸೈಟ್: kea.kar.nic.in
ರಾಜ್ಯ ಸರ್ಕಾರವು ಬಿ.ಎಸ್.ಸಿ. (B.Sc) ಪದವೀಧರರಿಗೆ ಉದ್ಯೋಗ ಪಡೆಯಲು ಹೆಚ್ಚಿನ ಅವಕಾಶಗಳನ್ನು ಒದಗಿಸಿದೆ. ಪರಿಷ್ಕೃತ ಕನಿಷ್ಠ ವಿದ್ಯಾರ್ಹತೆಗಳ ವಿವರ ಹೀಗಿದೆ.
ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ ಪದವಿ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಯಾವುದೇ ಪದವಿ ಪಡೆದಿರುವವರು ಅರ್ಜಿ ಹಾಕಬಹುದು. ಎಎಂಐಇ (AMIE) ಪದವಿ ಹೊಂದಿರುವವರಿಗೂ ಅವಕಾಶವಿದೆ.
ಡಿಪ್ಲೊಮಾ ಅಭ್ಯರ್ಥಿಗಳಿಗೆ ಅವಕಾಶ:
ಎಐಸಿಟಿಇ (AICTE) ಇಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಯಾವುದೇ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ ವಿಭಾಗದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿದವರು ಅರ್ಹರು.
ಬಿ.ಎಸ್.ಸಿ. ಪದವೀಧರರಿಗೆ ವಿಶೇಷ ಆಧ್ಯತೆ:
ಹಿಂದಿನ ಅಧಿಸೂಚನೆಗಿಂತ ಈಗ ಹೆಚ್ಚು ಬಿ.ಎಸ್.ಸಿ ವಿಷಯಗಳಿಗೆ ಅವಕಾಶ ನೀಡಲಾಗಿದೆ. ಗಣಿತ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಇನ್ಸ್ಟ್ರುಮೆಂಟೇಶನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್, ಕೃಷಿ ವಿಷಯಗಳಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಹೊಸದಾಗಿ ಸೇರ್ಪಡೆಯಾದ ವಿಷಯಗಳು:
ತೋಟಗಾರಿಕೆ, ಮೀನುಗಾರಿಕೆ, ಅರಣ್ಯ ವಿಜ್ಞಾನ ಹಾಗೂ ರೇಷ್ಮೆ ಕೃಷಿ ವಿಷಯಗಳನ್ನು ಓದಿದವರಿಗೂ ಈಗ ಭೂಮಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಸಿಕ್ಕಿದೆ.
ಬಿ.ಎಸ್.ಸಿ ಅಭ್ಯರ್ಥಿಗಳಿಗೆ ಬಹುಮುಖ್ಯ ಸೂಚನೆ:
ಗಣಿತ ಅಥವಾ ಭೌತಶಾಸ್ತ್ರವನ್ನು ಕನಿಷ್ಠ ಒಂದು ವಿಷಯವನ್ನಾಗಿ ಅಭ್ಯಸಿಸಿ ಬಿ.ಎಸ್.ಸಿ ಪದವಿ ಪಡೆದವರು ಹಾಗೂ ಬಿ.ಎಸ್.ಸಿ ಆನರ್ಸ್ ಮುಗಿಸಿದ ಎಲ್ಲಾ ಅಭ್ಯರ್ಥಿಗಳಿಗೂ ನೇರ ನೇಮಕಾತಿಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ವಿಸ್ತರಿಸಲಾದ ಪ್ರಮುಖ ದಿನಾಂಕಗಳು (Extended Dates)
ಹೊಸ ವಿದ್ಯಾರ್ಹತೆಗಳ ಸೇರ್ಪಡೆಯಿಂದಾಗಿ ಸಾವಿರಾರು ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಹೀಗಾಗಿ ಕೆಇಎ ಅರ್ಜಿ ಸಲ್ಲಿಕೆ ದಿನಾಂಕವನ್ನು ಪರಿಷ್ಕರಿಸಿದೆ.
- ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 20.08.2026
- ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನ: 21.08.2026
- ಸೂಚನೆ: ಜುಲೈ 11, 2026ರಂದು ಹೊರಡಿಸಲಾದ ಮೂಲ ಅಧಿಸೂಚನೆಯಲ್ಲಿದ್ದ ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಇತರೆ ಯಾವುದೇ ಷರತ್ತುಗಳಲ್ಲಿ ಬದಲಾವಣೆ ಇರುವುದಿಲ್ಲ.
ಕೆಇಎ ಭೂಮಾಪಕ ಹುದ್ದೆಗಳು ರಾಜ್ಯದ ಪ್ರತಿಷ್ಠಿತ ಸರ್ಕಾರಿ ಹುದ್ದೆಗಳಲ್ಲಿ ಒಂದಾಗಿದೆ. ಇದೀಗ ವಿದ್ಯಾರ್ಹತೆಯ ನಿಯಮ ಸಡಿಲಿಸಿರುವುದರಿಂದ ಗ್ರಾಮೀಣ ಭಾಗದ ಕೃಷಿ, ತೋಟಗಾರಿಕೆ ಹಾಗೂ ವಿಜ್ಞಾನ ಪದವೀಧರರಿಗೆ ದೊಡ್ಡ ಮಟ್ಟದ ಅನುಕೂಲವಾಗಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಕೆಇಎ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ಈ ವಿದ್ಯಾರ್ಹತೆ ಹೊಂದಿದ್ದರೆ ಅವರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ನೆರವಾಗಿ.






Comments