Loading..!

ಬಹುಜನ ವಿದ್ಯಾರ್ಥಿ ಸಂಘ(BVS)ದಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ವಿದ್ಯಾರ್ಥಿಗಳಿಗೆ ಒಂದು ಲಕ್ಷದವರೆಗೂ ಬಹುಮಾನ..!
| Date:2 ಜನವರಿ 2020
Image not found
ಬಹುಜನ ವಿದ್ಯಾರ್ಥಿ ಸಂಘ ಕರ್ನಾಟಕವು ನವೆಂಬರ್ 26 ರಿಂದ ಜನವರಿ 26 ರವರೆಗೆ ಸಂವಿಧಾನ ಜಾಗೃತಿ ಅಭಿಯಾನದ ಅಂಗವಾಗಿ ರಾಜ್ಯದ ಪ್ರೌಢಶಾಲಾ, ಪದವಿ ಪೂರ್ವ/ತತ್ಸಮಾನ ಮತ್ತು ಪದವಿ/ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.

ವಿಭಾಗವಾರು ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ಇಪ್ಪತ್ತೈದು ಸಾವಿರ ದಿಂದ 1 ಲಕ್ಷ ರೂಪಾಯಿವರೆಗೂ ನಿಗದಿಪಡಿಸಲಾಗಿದೆ.

ಪ್ರಬಂಧದ ವಿಷಯಗಳು ಈ ಕೆಳಗಿನಂತೆ ಇರುತ್ತದೆ:
* ಪ್ರೌಢಶಾಲಾ ವಿಭಾಗದ ಪ್ರಬಂಧದ ವಿಷಯ - "ಭಾರತದ ಸಂವಿಧಾನದ ರಚನೆಯಲ್ಲಿ ಭಾರತ ಸಂವಿಧಾನ ಪಿತಾಮಹರಾಗಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪಾತ್ರ"
* ಪದವಿ ಪೂರ್ವ ಅಥವಾ ತತ್ಸಮಾನ ಕೋರ್ಸಗಳ ಪ್ರಬಂಧದ ವಿಷಯ- "ಭಾರತ ಸಂವಿಧಾನದ ಪ್ರಸ್ತಾವನೆಯ ಮಹತ್ವ"
* ಪದವಿ ಮತ್ತು ಸ್ನಾತಕೋತ್ತರ ವಿಭಾಗದ ಪ್ರಬಂಧದ ವಿಷಯ - "ಭಾರತೀಯ ಸಮಾಜ ಪರಿವರ್ತನೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳ ಪಾತ್ರ"

ಸೂಚನೆಗಳು:
- ಪ್ರಬಂಧದ ಮೊದಲ ಪುಟದಲ್ಲಿ ಹೆಸರು, ತರಗತಿ, ಕಾಲೇಜು, ವಿಳಾಸ, ಮೊಬೈಲ್ ನಂಬರನ್ನು ಸ್ಪಷ್ಟವಾಗಿ ಬರೆದಿರಬೇಕು
- ಪ್ರಬಂಧವು ವಿದ್ಯಾರ್ಥಿಯ ಸ್ವಹಸ್ತಾಕ್ಷರದಲ್ಲಿರಬೇಕು
- A4 ಹಾಳೆಯಲ್ಲಿ ನೀಲಿ ಅಥವಾ ಕಪ್ಪು ಶಾಹಿಯಿಂದ ಬರೆದಿರಬೇಕು
- ಪ್ರಬಂಧವು 2500 ಪದಗಳಿಗೆ ಮೀರದಂತೆ ಬರೆದಿರಬೇಕು(ಪ್ರೌಢ ಶಾಲಾ ವಿಭಾಗಕ್ಕೆ 1000 ಪದಗಳು)
- ಪ್ರಬಂಧವನ್ನು ಕಾಲೇಜು/ಸಂಸ್ಥೆಯ ಪ್ರಾಂಶುಪಾಲರು / ಮುಖ್ಯಸ್ಥರ ಸಹಿ ಮತ್ತು ಮೊಹರನ್ನು ಪಡೆದು ಕೊನೆಯ ದಿನವಾದ 10 ಜನವರಿ 2020 ಸಂಜೆ 05:00 ಗಂಟೆಯೊಳಗಾಗಿ ಕಳುಹಿಸಿಕೊಡಬೇಕು.
ಪ್ರಬಂಧವನ್ನು ಕಲಿಸಿಕೊಡಬೇಕಾದ ವಿಳಾಸ:
ನಂಬರ್ 01, 16ನೇ ಅಡ್ಡರಸ್ತೆ, ಗಣಪತಿ ದೇವಾಲಯದ ಎದುರು, ಒಂದನೇ ಮಹಡಿ, ಲಕ್ಕಸಂದ್ರ, ಬೆಂಗಳೂರು-560030
ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ
9060486094
8660621596
9986839074
8105041538

ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಪ್ರಕಟನೆಯನ್ನು ಡೌನ್ಲೋಡ್ ಮಾಡಿಕೊಂಡು ಇನ್ನು ಹೆಚ್ಚಿನ ವಿವರಗಳನ್ನು ಪಡೆಯಿರಿ
KAS ಕನಸು ಹೊತ್ತ ಅಭ್ಯರ್ಥಿಗಳಿಗಾಗಿ ವಿವಿಧ ಪುಸ್ತಕಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ, ಇವುಗಳನ್ನು ಉತ್ತಮ ರಿಯಾಯಿತಿಯೊಂದಿಗೆ Amazon ನಿಂದ ಖರೀದಿಸಿ ಉತ್ತಮ ತಯಾರಿ ನಡೆಸಿ

Comments