* ಅಜರ್‌ಬೈಜಾನ್‌ನ ಬಾಕುವಿನಲ್ಲಿ ವಿಶ್ವಸಂಸ್ಥೆ ನೇತೃತ್ವದ 2024 ರ ವಿಶ್ವ ಹವಾಮಾನ ಸಮ್ಮೇಳನ ನವೆಂಬರ್ 12 ರಂದು (ಮಂಗಳವಾರ) ಪ್ರಾರಂಭವಾಗಿದೆ. * ವಿಶ್ವ ನಾಯಕರ ಹವಾಮಾನ ಆಕ್ಷನ್ ಶೃಂಗಸಭೆ (ಡಬ್ಲ್ಯುಎಲ್‌ಸಿಎಎಸ್)ಯಿಂದ ಭಾರತ ಹೊರಗುಳಿದಿದ್ದು, ವಿಶ್ವ ಹವಾಮಾನ ಶೃಂಗಸಭೆ (COP29)ಯಲ್ಲಿ ಭಾಗವಹಿಸಲಿದೆ.* ಅಜರ್ ಬೈಜಾನ್‌ ಅಧ್ಯಕ್ಷ ಇಲ್ವಾಮ್ ಅಲಿಯವ್ ಅವರು ಡಬ್ಲ್ಯುಎಲ್‌ಸಿಎಎಸ್ ಉನ್ನತ ಮಟ್ಟದ ವಿಭಾಗದ ಮೊದಲ ಭಾಗದಲ್ಲಿ ಭಾಗವಹಿಸುವಂತೆ ವಿವಿಧ ಸರಕಾರಗಳ ಮುಖ್ಯಸ್ಥರಿಗೆ ಆಹ್ವಾನಿಸಿದ್ದಾರೆ. * ನವೆಂಬರ್ 12. 13 ರಂದು (ಮಂಗಳವಾರ, ಬುಧವಾರ) ಎರಡು ದಿನಗಳ ಕಾಲ ನಡೆಯುವ ಮೊದಲ ಹಂತದಲ್ಲಿ 82 ರಾಷ್ಟ್ರಗಳ ಮುಖ್ಯಸ್ಥರು, ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.* ಈ ವರ್ಷದ ಶೃಂಗಸಭೆಯ ಮೊದಲ ಹಂತವು ಹಲವು ಪ್ರಮುಖ ಚರ್ಚೆ ಮತ್ತು ಮಂಡನಗಳನ್ನು ಒಳಗೊಂಡಿದೆ, ಅಲ್ಲಿ ದೇಶಗಳು ತಮ್ಮ ಹವಾಮಾನ ನೀತಿಗಳನ್ನು ಹಂಚಿಕೊಳ್ಳುತ್ತವೆ, ಗ್ರೀನ್ ಹೌಸ್ ಅನುವಂಶಗಳನ್ನು ಕಡಿಮೆ ಮಾಡುವುದರ ಅಗತ್ಯತೆಯು, ಮತ್ತು ಹವಾಮಾನ ಬದಲಾವಣೆಗೆ ಪ್ರತಿಕ್ರಿಯೆ ನೀಡಲು ಆದಾಯ ಮೂಲಗಳನ್ನು ಹೇಗೆ ಹಂಚಿಕೊಳ್ಳುವುದು ಎಂಬುದರ ಮೇಲೆ ಗಮನಹರಿಸಲಾಗುತ್ತದೆ.* ನವೆಂಬರ್.19.20ರಂದು 2ನೇ ಹಂತದ ಉನ್ನತ ಮಟ್ಟದ ರಂದು ನಡೆಯಲಿದ್ದು, ಇದರಲ್ಲಿ ಭಾರತದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು 19 ಸದಸ್ಯರ ನಿಯೋಗವನ್ನು ಮುನ್ನಡೆಸಲಿದ್ದಾರೆ.