Job Description: * ವಿಶ್ವದ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ವ್ಯಕ್ತಿಯಾಗಿದ್ದ ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತದ 11ನೇ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮ ದಿನವಾದ ಅಕ್ಟೋಬರ್ 15 ಅನ್ನು ಪ್ರತಿವರ್ಷ “ವಿಶ್ವ ವಿದ್ಯಾರ್ಥಿಗಳ ದಿನ”ವೆಂದು ಆಚರಿಸಲಾಗುತ್ತದೆ.* ಶಿಕ್ಷಣ, ಸಂಶೋಧನೆ ಹಾಗೂ ಯುವಕರ ಶಕ್ತೀಕರಣದ ಕ್ಷೇತ್ರದಲ್ಲಿ ಕಲಾಂ ಅವರ ಮಹತ್ವದ ಕೊಡುಗೆಯನ್ನು ಸ್ಮರಿಸಿ ಈ ದಿನವನ್ನು ಗೌರವಿಸಲಾಗುತ್ತದೆ.* ಕಲಾಂ ಅವರು ತಮ್ಮ ಜೀವನವನ್ನೆಲ್ಲಾ ವಿದ್ಯಾರ್ಥಿಗಳ ಕಲ್ಯಾಣ, ಶಿಕ್ಷಣದ ಪ್ರೋತ್ಸಾಹ ಹಾಗೂ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿಗೆ ಮುಡಿಪಾಗಿಟ್ಟಿದ್ದರು. ಅವರ “ನಾನು ಶಿಕ್ಷಕನಾಗಿ ನೆನಪಿನಲ್ಲಿರಲು ಬಯಸುತ್ತೇನೆ” ಎಂಬ ಮಾತು ಅವರ ಶಿಕ್ಷಣ ಪ್ರೇಮವನ್ನು ತೋರಿಸುತ್ತದೆ.* 2010ರಲ್ಲಿ ಮೊದಲ ಬಾರಿಗೆ ಅವರ 79ನೇ ಜನ್ಮದಿನದಂದು ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಯಿತು. * ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳ ಧ್ವನಿಯನ್ನು ಗೌರವಿಸಲು ಪ್ರಥಮ ವಿಶ್ವ ವಿದ್ಯಾರ್ಥಿಗಳ ದಿನವನ್ನು ನವೆಂಬರ್ 17 ರಂದು ಆಚರಿಸಲಾಗುತ್ತಿತ್ತು. ಭಾರತದಲ್ಲಿ ಕಲಾಂ ಅವರ ಜನ್ಮ ದಿನದ ಗೌರವಾರ್ಥ ಅಕ್ಟೋಬರ್ 15 ರಂದು ವಿಶೇಷವಾಗಿ ಆಚರಿಸಲಾಗುತ್ತದೆ.* ವಿದ್ಯಾರ್ಥಿಗಳ ಪ್ರೇರಣಾ ದೀಪವಾಗಿದ್ದ ಕಲಾಂ ಅವರನ್ನು “ಮಿಸೈಲ್ ಮ್ಯಾನ್ ಆಫ್ ಇಂಡಿಯಾ” ಎಂದು ಕರೆಯಲಾಗುತ್ತದೆ.* ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಅವರು 2005ರ ಮೇ 23ರಂದು ಸ್ವಿಟ್ಜರ್‌ಲ್ಯಾಂಡ್ ಭೇಟಿ ನೀಡಿದ್ದರು. ಅವರ ಗೌರವಾರ್ಥವಾಗಿ, ಆ ದಿನವನ್ನು ಅಲ್ಲಿ ರಾಷ್ಟ್ರೀಯ ವಿಜ್ಞಾನ ದಿನವೆಂದು ಆಚರಿಸಲಾಗುತ್ತಿದೆ.👉 ಕಲಾಂ ಅವರ ಕನಸು – “ಯುವಕರಲ್ಲಿ ಶಕ್ತಿಯಿದ್ದರೆ, ರಾಷ್ಟ್ರ ಬದಲಾಗುತ್ತದೆ” ಎಂಬ ಸಂದೇಶವು ಇಂದಿಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಗದೀಪವಾಗಿದೆ.🌿 ಡಾ. ಎ.ಪಿ.ಜೆ. ಅಬ್ದುಲ್ ಕಲಾಂ – ಸಂಕ್ಷಿಪ್ತ ಜೀವನಚರಿತ್ರೆ : * ಜನನ: ಅಕ್ಟೋಬರ್ 15, 1931 – ರಾಮೇಶ್ವರಂ, ತಮಿಳುನಾಡು* ಮರಣ: ಜುಲೈ 27, 2015 – ಶಿಲ್ಲಾಂಗ್* ಹುದ್ದೆ: ಭಾರತದ 11ನೇ ರಾಷ್ಟ್ರಪತಿ (2002 – 2007)ಪ್ರಶಸ್ತಿಗಳು:# ಪದ್ಮಭೂಷಣ – 1981# ಪದ್ಮವಿಭೂಷಣ – 1990 # ಭಾರತ ರತ್ನ – 1997# ಮಾನ್ಯ ಡಾಕ್ಟರೇಟ್ ಪದವಿ: 48 ವಿಶ್ವವಿದ್ಯಾಲಯಗಳಿಂದ # ಪ್ರಶಸ್ತಿ – ಪುರಸ್ಕಾರಗಳು: 22📘 ಪ್ರಮುಖ ಕೃತಿಗಳು * Wings of Fire (ಆತ್ಮಕತೆ – 13 ಭಾಷೆಗಳಿಗೆ ಭಾಷಾಂತರ)* Ignited Minds* The Luminous Sparks* Inspiring Thoughts* You Are Born to Blossom