Job Description: * ಭಾರತದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA) ಅಡಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಮತ್ತು ಉತ್ತಾನ್ ಮಹಾಭಿಯಾನ್ (ಪಿ.ಎಂ.–ಕುಸುಮ) ಯೋಜನೆಗೆ ಈಗ ಜಾಗತಿಕ ಮಟ್ಟದಲ್ಲಿ ವಿಸ್ತರಣೆ ದೊರಕಲಿದೆ. ಈ ಯೋಜನೆಯನ್ನು 2019ರಲ್ಲಿ ಭಾರತದಲ್ಲಿ ಅಧಿಕೃತವಾಗಿ ಪರಿಚಯಿಸಲಾಯಿತು, ಆದರೆ ಭಾರತವು ಈ ಯೋಜನೆಯ ಸದಸ್ಯತ್ವವನ್ನು 2015ರಲ್ಲೇ ಪಡೆದಿತ್ತು.* ಕೇಂದ್ರ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಕಾರ, ಈ ಯೋಜನೆಯನ್ನು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ವಿಶೇಷವಾಗಿ ಆಫ್ರಿಕಾ ಮತ್ತು ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಜಾರಿಗೆ ತರುವ ಯೋಜನೆ ಇದೆ. ಪ್ರಸ್ತುತ 124 ರಾಷ್ಟ್ರಗಳು ಈ ಒಕ್ಕೂಟದ ಸದಸ್ಯರಾಗಿವೆ.💧 ಯೋಜನೆಯ ಉದ್ದೇಶ * ಲಕ್ಷಾಂತರ ಜನರಿಗೆ ನೀರಾವರಿ, ಇಂಧನ ಭದ್ರತೆ ಮತ್ತು ಶುದ್ಧ ಇಂಧನ ತಲುಪಿಸುವುದು. * ರೈತರಿಗೆ ಶಾಶ್ವತ ನೀರಾವರಿ ಮೂಲ ಒದಗಿಸಿ ಅವರ ಆದಾಯವನ್ನು ಹೆಚ್ಚಿಸುವುದು. * ಕೃಷಿ ಕ್ಷೇತ್ರವನ್ನು ಡೀಸೆಲ್‌ನ ಅವಲಂಬನೆಗಳಿಂದ ಮುಕ್ತಗೊಳಿಸುವುದು. * ಪರಿಸರ ಸ್ನೇಹಿ ಕೃಷಿಯನ್ನು ಉತ್ತೇಜಿಸುವುದು.* ಪಂಪ್‌ಗಳ ಗಾತ್ರವನ್ನು ಎಲ್ಲಾ ಪ್ರದೇಶಗಳಿಗೆ ಒಂದೇ ರೀತಿ ಇರಿಸುವ ಬದಲು ಸ್ಥಳೀಯ ಭೂಮಿ ಮತ್ತು ನೀರಿನ ಅವಶ್ಯಕತೆ ಆಧರಿಸಿ ನಿಗದಿಪಡಿಸಲಾಗುತ್ತದೆ.* ಆಫ್ರಿಕಾದಲ್ಲಿ ಕೃಷಿಯೋಗ್ಯ ಭೂಮಿಯ ಕೇವಲ 4% ಮಾತ್ರ ನೀರಾವರಿ ಸೌಲಭ್ಯ ಹೊಂದಿದೆ.* ವಿಶಾಲ ಕೃಷಿಯೋಗ್ಯ ಭೂಮಿಯಿದ್ದರೂ ನೀರಾವರಿ ವ್ಯವಸ್ಥೆ ಕೊರತೆಯಿರುವುದರಿಂದ ಆಫ್ರಿಕಾ ರಾಷ್ಟ್ರಗಳು ಭಾರತದ ಕುಸುಮ ಮಾದರಿಯ ಸೌರ ಪಂಪ್ ಯೋಜನೆಗೆ ಆಸಕ್ತಿ ತೋರಿಸುತ್ತಿವೆ.* ಸೌರ ಮಾದ್ಯುಲ್ ಉತ್ಪಾದನೆಯಲ್ಲಿ ಭಾರತವು ಜಗತ್ತಿನಲ್ಲಿ 2ನೇ ಸ್ಥಾನದಲ್ಲಿದೆ.* 2031ರೊಳಗೆ ಭಾರತ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ ಹೊಂದಿದೆ.* ಈ ಸಾಧನೆಯಿಂದ ಭಾರತವು ಆಫ್ರಿಕಾ ರಾಷ್ಟ್ರಗಳಿಗೆ ಶುದ್ಧ ಇಂಧನ ತಂತ್ರಜ್ಞಾನ ಹಂಚಿಕೊಳ್ಳುವ ಉದ್ದೇಶ ಹೊಂದಿದೆ.