Job Description: ➤ ಜೂನ್ 26ರಂದು ಜಾಗತಿಕವಾಗಿ ಆಚರಿಸಲಾಗುವ ವಿಶ್ವಸಂಸ್ಥೆಯ ಚಾರ್ಟರ್ ದಿನಾಚರಣೆ (UN Charter Day) ಮುನ್ನ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿಯಾದ ರಾಯಭಾರಿ ಪರ್ವತನೇನಿ ಹರೀಶ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. "ವಿಶ್ವಸಂಸ್ಥೆಯ ಚಾರ್ಟರ್ (ಸಂವಿಧಾನ) ಕೇವಲ ಒಂದು ದಾಖಲೆಯಲ್ಲ, ಅದು 140 ಕೋಟಿ ಭಾರತೀಯರ ದೊಡ್ಡ ಭರವಸೆಯಾಗಿದೆ" ಎಂದು ಅವರು ಪುನರುಚ್ಚರಿಸಿದ್ದಾರೆ.➤ ಈ ಐತಿಹಾಸಿಕ ದಿನದ ನೆನಪಿಗಾಗಿ ಮತ್ತು ಬಹುಪಕ್ಷೀಯ ಜಾಗತಿಕ ಸಹಕಾರಕ್ಕೆ ಭಾರತದ ಬದ್ಧತೆಯನ್ನು ಸಾರಲು ರಾಯಭಾರಿ ಪರ್ವತನೇನಿ ಹರೀಶ್ ಅವರು ವಿಶ್ವಸಂಸ್ಥೆಯ ಚಾರ್ಟರ್‌ನ ಪೀಠಿಕೆಗೆ ಸಾಂಕೇತಿಕವಾಗಿ ಸಹಿ ಹಾಕಿದರು.➤ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಚಾರ್ಟರ್ ಮಹತ್ವ: ಪ್ರಸ್ತುತ ಜಗತ್ತು ಎದುರಿಸುತ್ತಿರುವ ರಾಜಕೀಯ, ಆರ್ಥಿಕ ಬಿಕ್ಕಟ್ಟುಗಳು ಹಾಗೂ ಪ್ರಾದೇಶಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮಹಾಸಭೆಯ (UNGA) ಅಧ್ಯಕ್ಷರಾದ ಅನ್ನಾಲೇನಾ ಬೆಲರ್ಚಾಕ್ ಅವರು ಕೂಡ ಮಾತನಾಡಿದ್ದಾರೆ. "ವಿಶ್ವಸಂಸ್ಥೆಯು ತೀವ್ರ ಒತ್ತಡಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಚಾರ್ಟರ್ ದಿನಾಚರಣೆಯು ಕೇವಲ ಒಂದು ಔಪಚಾರಿಕ ನೆನಪಲ್ಲ. ಬದಲಿಗೆ ಜಾಗತಿಕ ಶಾಂತಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಲು ಕರೆ ನೀಡುವ ಮಹತ್ವದ ಸಮಯವಾಗಿದೆ" ಎಂದು ಅವರು ಎಚ್ಚರಿಸಿದ್ದಾರೆ.➤ 1945ರ ಜೂನ್ 25ರಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತದ ಪರವಾಗಿ ಸರ್ ಎ.ರಾಮಸ್ವಾಮಿ ಮೊದಲಿಯಾರ್ ಅವರು ಮೂಲ ಚಾರ್ಟರ್ ಆಫ್ ಯುನೈಟೆಡ್ ನೇಷನ್ಸ್‌ಗೆ ಸಹಿ ಮಾಡಿದ್ದರು.➤ 1945ರಲ್ಲಿ ಭಾರತವಿನ್ನೂ ಬ್ರಿಟಿಷರ ಆಡಳಿತದಲ್ಲಿದ್ದರೂ ಸಹ, ಸ್ವಾತಂತ್ರ್ಯದ ಹೊಸ್ತಿಲಲ್ಲಿ ನಿಂತು ವಿಶ್ವಸಂಸ್ಥೆಯನ್ನು ಸ್ಥಾಪಿಸಿದ ಮೂಲ 50 ಸದಸ್ಯ ರಾಷ್ಟ್ರಗಳಲ್ಲಿ (Founding Members) ಒಂದಾಗಿ ಗುರುತಿಸಿಕೊಂಡಿತ್ತು ಎಂಬುದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯ.KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ