* ಮಂಗಳವಾರ ಒಡಿಶಾದ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅಲ್ಪ ಅಂತರದ ಕ್ಷಿಪಣಿ 'ಪ್ರಳಯ'ಯನ್ನು ಭಾರತವು ಯಶಸ್ವಿಯಾಗಿ ಪರೀಕ್ಷಿಸಿತು. * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆ‌ ಡಿಒ) ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯನ್ನು ಬೆಳಗ್ಗೆ 9.50ಕ್ಕೆ ಯಶಸ್ವಿಯಾಗಿ ಉದಯಿಸಿದ್ದು, ಅತ್ಯಾಧುನಿಕ ಟ್ರ್ಯಾಕಿಂಗ್ ಕರಾವಳಿಯ - ಉದ್ದಕ್ಕೂ ಉಪಕರಣಗಳು ಕ್ಷಿಪಣಿಯ ಪಥವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿ ನಿಖರತೆಯನ್ನು ಖಚಿತಪಡಿಸಿದವು. * ಪ್ರಳಯ ಕ್ಷಿಪಣಿಯು 350ರಿಂದ 500 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 500 ರಿಂದ 1,000 ಕಿಲೋ ಗ್ರಾಂಗಳಷ್ಟು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. * ಈ ಕ್ಷಿಪಣಿಯನ್ನು ಚೀನಾದ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ವಿರುದ್ಧವಾಗಿ ನಿಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಮದ್ದುಗುಂಡುಗಳ ಸಂಗ್ರಹಗಳು, ಪೆಟ್ರೋಲ್, ತೈಲ ಮತ್ತು ಲೂಬ್ರಿಕಂಟ್‌ಗಳ ಡಿಪೋಗಳು, ವಾಯು ನೆಲೆಗಳು ಮುಂತಾದವುಗಳನ್ನು ಹೊಡೆಯಲು ಈ ಕ್ಷಿಪಣಿಗಳನ್ನು ಬಳಸಲಾಗುತ್ತದೆ.