➤ ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ನೂತನ ಕಚೇರಿ ಸಂಕೀರ್ಣವಾದ 'ಸೇವಾ ತೀರ್ಥ' (Seva Teerth) ದಿಂದ ಅಧಿಕಾರ ಆರಂಭಿಸುತ್ತಿದ್ದಂತೆಯೇ, ದೇಶದ ಸಾಮಾನ್ಯ ನಾಗರಿಕರ ಜೀವ ರಕ್ಷಣೆಗಾಗಿ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಸ್ತೆ ಅಪಘಾತಕ್ಕೀಡಾದವರಿಗೆ ತುರ್ತು ಸಮಯದಲ್ಲಿ ಹಣದ ಕೊರತೆಯಿಂದ ಚಿಕಿತ್ಸೆ ನಿಲ್ಲಬಾರದು ಎಂಬ ಉದ್ದೇಶದಿಂದ PM RAHAT (Road Accident Victim Hospitalization and Assured Treatment) ಯೋಜನೆಯನ್ನು ಫೆಬ್ರವರಿ 14, 2026 ರಂದು ಅಧಿಕೃತವಾಗಿ ಘೋಷಿಸಲಾಗಿದೆ.➤ PM RAHAT ಯೋಜನೆ: ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಅಪಘಾತ ನಡೆದ ಮೊದಲ ಒಂದು ಗಂಟೆಯಲ್ಲಿ (Golden Hour) ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಾರೆ. ಇದನ್ನು ತಡೆಯಲು ಕೇಂದ್ರ ಸರ್ಕಾರವು ಈ ಕೆಳಗಿನ ಸೌಲಭ್ಯಗಳನ್ನು ನೀಡುತ್ತಿದೆ:- ಪ್ರತಿ ಅಪಘಾತ ಸಂತ್ರಸ್ತರಿಗೆ ₹1,50,000 ವರೆಗೆ ಉಚಿತ (Cashless) ಚಿಕಿತ್ಸೆ ಲಭ್ಯ.- ಅಪಘಾತ ಸಂಭವಿಸಿದ ದಿನದಿಂದ ಮೊದಲ 7 ದಿನಗಳ ಕಾಲ ಆಸ್ಪತ್ರೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.- ಇದು ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲದೆ, ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳಲ್ಲಿ ನಡೆಯುವ ಅಪಘಾತಗಳಿಗೂ ಅನ್ವಯಿಸುತ್ತದೆ.➤ ಈ ಯೋಜನೆಯನ್ನು ಅತ್ಯಂತ ವೇಗವಾಗಿ ಅನುಷ್ಠಾನಗೊಳಿಸಲು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಲಾಗಿದೆ:- ಅಪಘಾತ ಸಂಭವಿಸಿದ ತಕ್ಷಣ 112 ಸಂಖ್ಯೆಗೆ ಕರೆ ಮಾಡುವ ಮೂಲಕ ಹತ್ತಿರದ ಆಸ್ಪತ್ರೆ ಮತ್ತು ಆಂಬ್ಯುಲೆನ್ಸ್ ನೆರವು ಪಡೆಯಬಹುದು.- eDAR ಪೋರ್ಟಲ್: ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ಸ್‌ಪೋರ್ಟ್‌ನ ಈ ಡಿಜಿಟಲ್ ವರದಿ ವ್ಯವಸ್ಥೆಯು ಆಸ್ಪತ್ರೆ ಮತ್ತು ಪೊಲೀಸರ ನಡುವೆ ಸಮನ್ವಯ ಸಾಧಿಸುತ್ತದೆ.- TMS 2.0: ನ್ಯಾಷನಲ್ ಹೆಲ್ತ್ ಅಥಾರಿಟಿಯ ತಂತ್ರಜ್ಞಾನದ ಮೂಲಕ ಆಸ್ಪತ್ರೆಗಳಿಗೆ ಬಿಲ್ ಪಾವತಿ ನೇರವಾಗಿ ತಲುಪುತ್ತದೆ.➤ ಹಣಕಾಸಿನ ನೆರವು: ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ಮೋಟಾರು ವಾಹನ ಅಪಘಾತ ನಿಧಿ (Motor Vehicle Accident Fund - MVAF) ಮೂಲಕ ಮರುಪಾವತಿ ಮಾಡಲಾಗುತ್ತದೆ.ಅಪಘಾತಕ್ಕೆ ಕಾರಣವಾದ ವಾಹನಕ್ಕೆ ವಿಮೆ ಇದ್ದರೆ, ವಿಮಾ ಕಂಪನಿಗಳು ಹಣ ಪಾವತಿಸುತ್ತವೆ, ವಿಮೆ ಇಲ್ಲದ ಅಥವಾ ಹಿಟ್ ಅಂಡ್ ರನ್ ಕೇಸ್: ಅಂತಹ ಸಂದರ್ಭಗಳಲ್ಲಿ ಭಾರತ ಸರ್ಕಾರವೇ ತನ್ನ ಬಜೆಟ್‌ನಿಂದ ಹಣವನ್ನು ಭರಿಸಲಿದೆ. ➤ ಈ ಯೋಜನೆಯಡಿ ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ದೂರು ನೀಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯನ್ನು ರಚಿಸಲಾಗಿದೆ.