Job Description: * ನಬಾರ್ಡ್ 2025-26ನೇ ಸಾಲಿಗೆ ಕರ್ನಾಟಕದ ಆದ್ಯತಾ ವಲಯದ ಸಾಲ ಸಾಮರ್ಥ್ಯವನ್ನು 4.47 ಲಕ್ಷ ಕೋಟಿ ರೂ.ಗಂತೆ ನಿಗದಿಪಡಿಸಿದ್ದು, ಇದು ಹಿಂದಿನ ಸಾಲಿಗಿಂತ ಶೇ.12.55 ಹೆಚ್ಚಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ತಿಳಿಸಿದ್ದಾರೆ.* ರಾಜ್ಯ ಸಾಲ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಜೀವನೋಪಾಯ ಮತ್ತು ಕೃಷಿ ಕ್ಷೇತ್ರದ ಬಲವರ್ಧನೆಗೆ ನಬಾರ್ಡ್ ನೀಡುವ ಬೆಂಬಲವನ್ನು ಶ್ಲಾಘಿಸಿದರು. ರಾಜ್ಯವು ಕೃಷಿ ಹಾಗೂ ಕೈಗಾರಿಕಾ ಪ್ರಗತಿಯ ಸಮತೋಲನವನ್ನು ಕಾಯ್ದುಕೊಂಡಿದ್ದು, ತಂತ್ರಜ್ಞಾನ, ಹವಾಮಾನ ಸೂಕ್ಷ್ಮತೆ ಮತ್ತು ಕೃಷಿಯೇತರ ಉದ್ಯೋಗಾವಕಾಶಗಳೊಂದಿಗೆ ಅಭಿವೃದ್ಧಿ ಕಾಣುತ್ತಿದೆ ಎಂದರು.* ನಬಾರ್ಡ್ ಜೀವಾ ಯೋಜನೆ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಮೂಡಿಬರುತ್ತಿದ್ದು, ಗ್ರಾಮೀಣ ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.* ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆರ್‌ಐಡಿಎಫ್ ಮೂಲಕ ನಬಾರ್ಡ್ ನೆರವು ನೀಡುತ್ತಿದೆ.* ನಬಾರ್ಡ್ ಪ್ರಾದೇಶಿಕ ಮುಖ್ಯಸ್ಥ ಕೆ.ವಿ.ಎಸ್.ಎಸ್.ಎಲ್.ವಿ. ಪ್ರಸಾದ್ ರಾವ್ ಅವರು, 4.47 ಲಕ್ಷ ಕೋಟಿ ರೂ. ಸಾಲ ಸಾಮರ್ಥ್ಯದಲ್ಲಿ ಕೃಷಿಗೆ 2.04 ಲಕ್ಷ ಕೋಟಿ, ಎಂಎಸ್‌ಎಂಇಗೆ 1.88 ಲಕ್ಷ ಕೋಟಿ ಮತ್ತು ಇತರ ವಲಯಗಳಿಗೆ 56 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದು ವಿವರಿಸಿದರು.* ಈ ಕಾರ್ಯಕ್ರಮದಲ್ಲಿ ಆರ್‌ಬಿಐ, ಎಸ್‌ಬಿಐ, ಕೆನರಾ ಬ್ಯಾಂಕ್ ಹಾಗೂ ರಾಜ್ಯ ಸರ್ಕಾರದ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.