➤ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ದೀನ್ ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (DAY-NRLM) ಅಡಿಯಲ್ಲಿ ಗ್ರಾಮೀಣ ಮಹಿಳೆಯರ ಆದಾಯವನ್ನು ಹೆಚ್ಚಿಸಲು ಮತ್ತು ಅವರನ್ನು ಉದ್ಯಮಿಗಳನ್ನಾಗಿ ರೂಪಿಸಲು ಬೃಹತ್ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸಿದೆ.➤ ಅಭಿಯಾನದ ಘೋಷವಾಕ್ಯ: "ಗ್ರಾಮೀಣ ಮಹಿಳಾ ಉದ್ಯಮಶೀಲತೆ ಉತ್ತೇಜನ - ಹರ್ ಘರ್ ಉದ್ಯಮ್, ಹರ್ ಗಾಂವ್ ಸಮೃದ್ಧ್" (Har Ghar Udyam, Har Gaon Samriddh).➤ ಈ ರಾಷ್ಟ್ರೀಯ ಉದ್ಯಮಶೀಲತಾ ಅಭಿಯಾನವು 50,000 ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ಸಜ್ಜುಗೊಳಿಸುವ ಮೂಲಕ 50 ಲಕ್ಷ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಉದ್ಯಮಶೀಲತಾ ತರಬೇತಿ ನೀಡಿ, ದೇಶದ 3 ಕೋಟಿ ಮಹಿಳೆಯರನ್ನು 'ಲಖ್ಪತಿ ದೀದಿ'ಯರನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ.➤ ಅಭಿಯಾನದ ಉದ್ದೇಶಗಳು:-=> ಕೃಷಿಯೇತರ ಜೀವನೋಪಾಯ: ಗ್ರಾಮೀಣ ಭಾಗದಲ್ಲಿ ಕೃಷಿಯಲ್ಲದೆ ಇತರ ಉದ್ಯಮಗಳನ್ನು (Non-farm enterprises) ಉತ್ತೇಜಿಸಿ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸುವುದು.=> ಮಾರ್ಗದರ್ಶನ ಮತ್ತು ಬೆಂಬಲ: ತರಬೇತಿ ಪಡೆದ ಸಮುದಾಯ ಕೆಡರ್ (Cadre) ಮೂಲಕ ಉದ್ಯಮ ಗುರುತಿಸುವಿಕೆ, ಆರಂಭಿಕ ಬೆಂಬಲ ಮತ್ತು ನಿರಂತರ ಮಾರ್ಗದರ್ಶನ ನೀಡುವುದು.=> ಹಣಕಾಸಿನ ನೆರವು: ತಳಮಟ್ಟದ ಉದ್ಯಮಗಳಿಗೆ ಮತ್ತು ಮಹಿಳಾ ಉದ್ಯಮಿಗಳಿಗೆ ಬ್ಯಾಂಕುಗಳಂತಹ ಔಪಚಾರಿಕ ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯ ದೊರಕಿಸಿಕೊಡುವುದು.=> ಆರ್ಥಿಕ ಸ್ವಾವಲಂಬನೆ: ಗ್ರಾಮೀಣ ಅರ್ಥವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಅಂತರ್ಗತ ಮತ್ತು ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸುವುದು.➤ ಜನವರಿ 12, 2026 ರಂದು ನಡೆದ ಸಮಾರಂಭದಲ್ಲಿ ಈ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಇದರಲ್ಲಿ ನೀತಿ ಆಯೋಗ, ನಬಾರ್ಡ್ (NABARD), ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಮತ್ತು ಐಐಎಂ ಕಲ್ಕತ್ತಾ ಇನ್ನೋವೇಶನ್ ಪಾರ್ಕ್‌ನಂತಹ ಪ್ರಮುಖ ಸಂಸ್ಥೆಗಳು ಭಾಗವಹಿಸಿವೆ.