* ಕರ್ನಾಟಕ ವಿಶ್ವವಿದ್ಯಾಲಯವು ರಾಜ್ಯೋತ್ಸವ ಅಂಗವಾಗಿ ನೀಡುವ 'ಅರಿವೇ ಗುರು' ಪ್ರಶಸ್ತಿಗೆ ಪ್ರೊ. ವೀರಣ್ಣ ರಾಜೂರ (ಸಾಹಿತ್ಯ), ಪ್ರೊ. ಅಜಿತ ಕೇಶವ ಕೆಂಬಾವಿ (ಖಗೋಳ ವಿಜ್ಞಾನ) ಹಾಗೂ ಪ್ರೊ. ಆರ್.ಜಿ. ಅಕ್ಕಿಹಾಳ (ಸಮಾಜ ವಿಜ್ಞಾನ) ಅವರು ಆಯ್ಕೆಯಾಗಿದ್ದಾರೆ.* ಕಲೆ, ಸಮಾಜವಿಜ್ಞಾನ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ವತಿಯಿಂದ ಅರಿವೆ ಗರು ಪ್ರಶಸ್ತಿ ಪ್ರದಾನ ಮಾಡಲಾಗುವುದು.* ಈ ಪ್ರಶಸ್ತಿಯು 25.000 ನಗದು ಮತ್ತು ಫಲಕವನ್ನು ಒಳಗೊಂಡಿದೆ.* ಈ ಪ್ರಶಸ್ತಿಯನ್ನು ವಿಶ್ವವಿದ್ಯಾಲಯದ ಸುವರ್ಣಮಹೋತ್ಸವ ಸಭಾಭವನದಲ್ಲಿ ನವೆಂಬರ್ 29 ರಂದು ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆಯಲಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ತಿಳಿಸಿದೆ.