➤ ಕರ್ನಾಟಕ ಸರ್ಕಾರವು ಕೊಡಗು ಜಿಲ್ಲೆಯ ವಿಶಿಷ್ಟ ಭೂ ಹಿಡುವಳಿ ಪದ್ಧತಿಯಾದ 'ಜಮ್ಮಾ ಬಾನೆ' (Jamma Bane) ಜಮೀನು ದಾಖಲೆಗಳಲ್ಲಿನ ದೋಷಗಳನ್ನು ಸರಿಪಡಿಸಲು ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಕಾಯ್ದೆ 2025 ಅನ್ನು ಜಾರಿಗೆ ತಂದಿದೆ. ಈ ತಿದ್ದುಪಡಿ ಕಾಯ್ದೆಗೆ ಜನವರಿ 7, 2026 ರಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ.➤ ಜಮ್ಮಾ ಬಾನೆ ಎನ್ನುವುದು ಕೊಡಗು ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಒಂದು ವಿಶಿಷ್ಟ ಅನುವಂಶಿಕ ಭೂ ಹಿಡುವಳಿ ಪದ್ಧತಿಯಾಗಿದೆ. 17 ರಿಂದ 19 ನೇ ಶತಮಾನದ ಅವಧಿಯಲ್ಲಿ ಕೊಡಗಿನ ಅರಸರು ಮತ್ತು ನಂತರ ಬ್ರಿಟಿಷರು, ಸೈನಿಕ ಸೇವೆಯನ್ನು ಪರಿಗಣಿಸಿ ಅಲ್ಲಿನ ನಿವಾಸಿಗಳಿಗೆ ಈ ಜಮೀನುಗಳನ್ನು ನೀಡಿದ್ದರು. ಇದು ಮುಖ್ಯವಾಗಿ ಭತ್ತದ ಗದ್ದೆಗಳು ಮತ್ತು ಕಾಡುಗಳಿಂದ ಕೂಡಿದ ಎತ್ತರದ ಪ್ರದೇಶಗಳನ್ನು ಒಳಗೊಂಡಿದೆ. ಇವುಗಳಲ್ಲಿ ಹೆಚ್ಚಿನವು ಇಂದು ಕಾಫಿ ತೋಟಗಳಾಗಿ ಮಾರ್ಪಟ್ಟಿವೆ.➤ ಈ ತಿದ್ದುಪಡಿಯು ಕೊಡಗು ಜಿಲ್ಲೆಯ ತಹಶೀಲ್ದಾರ್‌ಗಳಿಗೆ 'ಜಮ್ಮಾ ಬಾನೆ' ಜಮೀನಿನ ಹಳೆಯ ದಾಖಲೆಗಳನ್ನು ಸರಿಪಡಿಸಲು ಕಾನೂನುಬದ್ಧ ಅಧಿಕಾರ ನೀಡುವ ಮೂಲಕ ಭೂ ಮಾಲೀಕತ್ವದ ಗೊಂದಲಗಳನ್ನು ನಿವಾರಿಸಿ, ಕಂದಾಯ ವ್ಯವಸ್ಥೆಯನ್ನು ಆಧುನೀಕರಿಸುವ ಗುರಿ ಹೊಂದಿದೆ.➤ ತಿದ್ದುಪಡಿಯ ಅಗತ್ಯ:-=> ದಾಖಲೆಗಳಲ್ಲಿನ ವ್ಯತ್ಯಾಸ: ತಲೆಮಾರುಗಳು ಕಳೆದರೂ ಭೂ ದಾಖಲೆಗಳಲ್ಲಿ (RTC) ಮೂಲ ಮಾಲೀಕರ (ಪಟ್ಟೇದಾರರ) ಹೆಸರೇ ಮುಂದುವರಿಯುತ್ತಿತ್ತು. ಇದು ಉತ್ತರಾಧಿಕಾರ ಮತ್ತು ಮಾಲೀಕತ್ವದ ಹಕ್ಕುಗಳನ್ನು ಸಾಬೀತುಪಡಿಸಲು ಅಡ್ಡಿಯಾಗಿತ್ತು.=> ಆರ್ಥಿಕ ಅಡೆತಡೆಗಳು: ಜಮೀನು ದಾಖಲೆಗಳು ಸರಿಯಾಗಿ ಇಲ್ಲದ ಕಾರಣ ಬ್ಯಾಂಕ್ ಸಾಲ ಪಡೆಯಲು, ಜಮೀನು ಮಾರಾಟ ಮಾಡಲು ಮತ್ತು ನೋಂದಣಿ ಪ್ರಕ್ರಿಯೆಗಳಲ್ಲಿ ರೈತರು ತೊಂದರೆ ಅನುಭವಿಸುತ್ತಿದ್ದರು.=> ಕಾನೂನು ಸಂಘರ್ಷ: 1964 ರ ಕರ್ನಾಟಕ ಭೂ ಕಂದಾಯ ಕಾಯ್ದೆ ಜಾರಿಗೆ ಬಂದಿದ್ದರೂ, ಕೊಡಗಿನ ಹಳೆಯ ಪದ್ಧತಿಯಿಂದಾಗಿ ದಾಖಲೆಗಳಲ್ಲಿ ಗೊಂದಲ ಮುಂದುವರಿದಿತ್ತು.➤ ಕಾಯ್ದೆಯ ಪ್ರಮುಖ ಬದಲಾವಣೆಗಳು ಮತ್ತು ಪ್ರಯೋಜನಗಳು:-=> ತಹಶೀಲ್ದಾರ್‌ಗಳಿಗೆ ಅಧಿಕಾರ: ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಸೆಕ್ಷನ್ 127 ಕ್ಕೆ ಹೊಸ ಉಪ-ವಿಭಾಗವನ್ನು ಸೇರಿಸಲಾಗಿದೆ. ಇದರ ಅನ್ವಯ, ತಹಶೀಲ್ದಾರ್‌ಗಳು ಸೂಕ್ತ ವಿಚಾರಣೆ ನಡೆಸಿ ಹಳೆಯ ದಾಖಲೆಗಳನ್ನು ಸರಿಪಡಿಸಬಹುದು.=> ಬೋಮಿ (Bhoomi) ಯೋಜನೆಗೆ ಪೂರಕ: ಈ ತಿದ್ದುಪಡಿಯು ರಾಜ್ಯದ ಭೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಗೆ ಹೆಚ್ಚಿನ ವೇಗ ನೀಡಲಿದೆ.=> ಅಪೀಲು ಸಲ್ಲಿಸುವ ಅವಕಾಶ: ಕಂದಾಯ ಅಧಿಕಾರಿಗಳ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಇದು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.=> ಸಾಮಾಜಿಕ ಪರಿಣಾಮ: ಕೊಡಗಿನ ಮೂಲ ನಿವಾಸಿಗಳಿಗೆ ತಮ್ಮ ಭೂಮಿಯ ಮೇಲೆ ಕಾನೂನುಬದ್ಧ ಹಕ್ಕು ದೊರೆಯಲಿದ್ದು, ದೀರ್ಘಕಾಲದ ಭೂ ವಿವಾದಗಳು ಇತ್ಯರ್ಥವಾಗಲಿವೆ.➤ ಈ ಐತಿಹಾಸಿಕ ತಿದ್ದುಪಡಿಯು ಕೊಡಗು ಜಿಲ್ಲೆಯ ಭೂ ಆಡಳಿತವನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದು ಕೇವಲ ದಾಖಲೆಗಳ ತಿದ್ದುಪಡಿಯಲ್ಲದೆ, ಅಲ್ಲಿನ ರೈತ ಸಮುದಾಯದ ಆರ್ಥಿಕ ಸಬಲೀಕರಣಕ್ಕೆ ನಾಂದಿ ಹಾಡಲಿದೆ.