Job Description: * ಗುಜರಾತಿನಲ್ಲಿ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರವಾದ ವಂತಾರಾವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಫೆ.04) ಉದ್ಘಾಟಿಸಿದರು.* ವಂತಾರ ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರವಾಗಿದ್ದು, 2,000 ಕ್ಕೂ ಹೆಚ್ಚು ಜಾತಿಗಳ ಮತ್ತು 1.5 ಲಕ್ಷಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಲ್ಪಟ್ಟ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ.* ಪ್ರಧಾನಿ ಮೋದಿ ವಂತಾರ ವನ್ಯಜೀವಿ ಕೇಂದ್ರದಲ್ಲಿ ಪುನರ್ವಸತಿ ಪ್ರಾಣಿಗಳೊಂದಿಗೆ ಸಂವಹನ ನಡೆಸಿ, ವನ್ಯಜೀವಿ ಆಸ್ಪತ್ರೆಯ ಎಂಆರ್‌ಐ, ಸಿಟಿ ಸ್ಕ್ಯಾನ್‌ಗಳು, ಐಸಿಯುಗಳು ಸೇರಿದಂತೆ ಹಲವಾರು ಪಶುವೈದ್ಯಕೀಯ ಸೌಲಭ್ಯಗಳನ್ನು ಪರಿಶೀಲಿಸಿದರು.* ಪ್ರಧಾನಿ ಮೋದಿ ಅವರು ಏಷ್ಯಾಟಿಕ್ ಸಿಂಹ, ಬಿಳಿ ಸಿಂಹ, ಮೋಡದ ಚಿರತೆ, ಕ್ಯಾರಕಲ್ ಸೇರಿದಂತೆ ಅಪರೂಪದ ಜೀವಿಗಳ ಮರಿಗಳಿಗೆ ಆಹಾರ ನೀಡಿ ಆಟವಾಡಿದರು.ಮೋದಿ ಅವರು ಆಹಾರ ನೀಡಿದ ಬಿಳಿ ಸಿಂಹದ ಮರಿಯು ಅದರ ತಾಯಿಯನ್ನು ರಕ್ಷಿಸಿ ಆರೈಕೆಗಾಗಿ ವಂತಾರಕ್ಕೆ ಕರೆತಂದ ನಂತರ ಕೇಂದ್ರದಲ್ಲಿ ಜನಿಸಿದ್ದಾಗಿದೆ.