➤ 2026ರ ಗಣರಾಜ್ಯೋತ್ಸವದ ಅದ್ಧೂರಿ ಪರೇಡ್‌ನಲ್ಲಿ ಭಾಗವಹಿಸಿದ ಅತ್ಯುತ್ತಮ ಸ್ತಬ್ಧಚಿತ್ರಗಳು ಮತ್ತು ಪಥಸಂಚಲನ ತಂಡಗಳ ಫಲಿತಾಂಶವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಬಾರಿ ತೀರ್ಪುಗಾರರ ಆಯ್ಕೆ (Judges' Choice) ಮತ್ತು ಸಾರ್ವಜನಿಕರ ಆಯ್ಕೆ (Popular Choice) ಎಂದು ಎರಡು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ.➤ ತೀರ್ಪುಗಾರರ ಆಯ್ಕೆ (Judges' Choice Selection):ತಜ್ಞರ ಸಮಿತಿಯು ನೀಡಿದ ಅಂಕಗಳ ಆಧಾರದ ಮೇಲೆ ಘೋಷಿಸಲಾದ ಅಧಿಕೃತ ಪ್ರಶಸ್ತಿಗಳು ಇಲ್ಲಿವೆ:=> ಅತ್ಯುತ್ತಮ ಸ್ತಬ್ಧಚಿತ್ರಗಳು (ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ):1. ಪ್ರಥಮ ಸ್ಥಾನ: ಮಹಾರಾಷ್ಟ್ರ: ವಸ್ತು ವಿಷಯ: "ಗಣೇಶೋತ್ಸವ: ಆತ್ಮನಿರ್ಭರತೆಯ ಸಂಕೇತ". ಇಲ್ಲಿ ಸಾಂಪ್ರದಾಯಿಕ ಕಲೆ ಮತ್ತು ಆಧುನಿಕತೆಯ ಸಮ್ಮಿಲನವನ್ನು ಪ್ರದರ್ಶಿಸಲಾಯಿತು.2. ದ್ವಿತೀಯ ಸ್ಥಾನ: ಜಮ್ಮು ಮತ್ತು ಕಾಶ್ಮೀರ : ವಸ್ತು ವಿಷಯ: "ಹಸ್ತಕಲೆ ಮತ್ತು ಜಾನಪದ ನೃತ್ಯಗಳು". ಕೇಂದ್ರಾಡಳಿತ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಇದು ಬಿಂಬಿಸಿತು.3. ತೃತೀಯ ಸ್ಥಾನ: ಕೇರಳ: ವಸ್ತು ವಿಷಯ: "ವಾಟರ್ ಮೆಟ್ರೋ ಮತ್ತು 100% ಡಿಜಿಟಲ್ ಸಾಕ್ಷರತೆ". ನವ ಭಾರತದ ತಾಂತ್ರಿಕ ಪ್ರಗತಿಯನ್ನು ಕೇರಳ ಸುಂದರವಾಗಿ ಪ್ರದರ್ಶಿಸಿತು.=> ಅತ್ಯುತ್ತಮ ಪಥಸಂಚಲನ ತಂಡಗಳು:- ಮೂರು ಸೇನಾ ಪಡೆಗಳಲ್ಲಿ:ಭಾರತೀಯ ನೌಕಾಪಡೆ (Indian Navy) ತನ್ನ ಅಪ್ರತಿಮ ಶಿಸ್ತು ಮತ್ತು ಸಮನ್ವಯಕ್ಕಾಗಿ ಅಗ್ರಸ್ಥಾನ ಪಡೆದಿದೆ.- ಅರೆಸೇನಾ ಪಡೆಗಳಲ್ಲಿ: ದೆಹಲಿ ಪೊಲೀಸ್ ಅತ್ಯುತ್ತಮ ಪಥಸಂಚಲನ ನೀಡಿದ ತಂಡವಾಗಿ ಹೊರಹೊಮ್ಮಿದೆ.=> ಸಚಿವಾಲಯಗಳ ವಿಭಾಗ:- ಸಂಸ್ಕೃತಿ ಸಚಿವಾಲಯ: "ವಂದೇ ಮಾತರಂ - ರಾಷ್ಟ್ರದ ಆತ್ಮದ ಕೂಗು" ಎಂಬ ವಿಷಯದಡಿ ಸ್ತಬ್ಧಚಿತ್ರ ಪ್ರದರ್ಶಿಸಿ ಮೊದಲ ಬಹುಮಾನ ಪಡೆದಿದೆ. ಇದು ವಂದೇ ಮಾತರಂ ಗೀತೆಯ 150 ವರ್ಷಗಳ ಇತಿಹಾಸವನ್ನು ಸಾರಿತು.- ವಿಶೇಷ ಪ್ರಶಸ್ತಿ: ಕೇಂದ್ರ ಸಾರ್ವಜನಿಕ ಕಾಮಗಾರಿ ಇಲಾಖೆ (CPWD) ಮತ್ತು ‘ವಂದೇ ಮಾತರಂ’ ನೃತ್ಯ ತಂಡಕ್ಕೆ ವಿಶೇಷ ಗೌರವ ನೀಡಲಾಗಿದೆ.➤ ಸಾರ್ವಜನಿಕರ ಆಯ್ಕೆ (Popular Choice - MyGov Poll): ಸಾರ್ವಜನಿಕರು MyGov ಪೋರ್ಟಲ್ ಮೂಲಕ ಮತ ಚಲಾಯಿಸಿ ಆಯ್ಕೆ ಮಾಡಿದ ವಿಜೇತರು:=> ಅತ್ಯುತ್ತಮ ಸ್ತಬ್ಧಚಿತ್ರ (ರಾಜ್ಯಗಳು):1. ಗುಜರಾತ್: (ವಿಷಯ: ವಂದೇ ಮಾತರಂ - ಸ್ವದೇಶಿ ಮಂತ್ರ)2. ಉತ್ತರ ಪ್ರದೇಶ: (ವಿಷಯ: ಬುಂದೇಲ್‌ಖಂಡ್ ಸಂಸ್ಕೃತಿ)3. ರಾಜಸ್ಥಾನ: (ವಿಷಯ: ಬಿಕಾನೆರ್ ಗೋಲ್ಡ್ ಆರ್ಟ್ - ಉಸ್ತಾ ಕಲೆ)=> ಅತ್ಯುತ್ತಮ ಪಥಸಂಚಲನ (ಸೇನಾ ಪಡೆ): ಅಸ್ಸಾಂ ರೆಜಿಮೆಂಟ್=> ಅತ್ಯುತ್ತಮ ಪಥಸಂಚಲನ (ಅರೆಸೇನಾ ಪಡೆ): CRPF