* ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಸಮಗ್ರ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆ (IADWS) ಪರೀಕ್ಷೆಯನ್ನು ಒಡಿಶಾದ ಚಾಂದಿಪುರದಲ್ಲಿ ಯಶಸ್ವಿಯಾಗಿ ನೆರವೇರಿಸಿದೆ.* ಈ ಪ್ರಯೋಗವು ವಾಯುಪ್ರದೇಶ ರಕ್ಷಣೆಯಲ್ಲಿ ಭಾರತದ ಸಾಮರ್ಥ್ಯವನ್ನು ತೋರಿಸಿದ್ದು, ಪ್ರಾದೇಶಿಕ ಭದ್ರತೆ ಸವಾಲುಗಳನ್ನು ಎದುರಿಸಲು ಸೇನೆಯ ಶಕ್ತಿವರ್ಧನೆ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿದೆ.* ಈ ಪರೀಕ್ಷೆ ‘ಆಪರೇಷನ್‌ ಸಿಂಧೂರ’ ನಡೆದ ಮೂರು ತಿಂಗಳ ನಂತರ ನಡೆದಿದ್ದು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ಡಿಆರ್‌ಡಿಒ, ಸಶಸ್ತ್ರ ಪಡೆಗಳು ಹಾಗೂ ಕೈಜೋಡಿಸಿದ ಉದ್ಯಮಗಳನ್ನು ಅಭಿನಂದಿಸಿದ್ದಾರೆ.* ಐಎಡಬ್ಲುಎಸ್‌ ಬಹು ಹಂತದ ರಕ್ಷಣಾ ವ್ಯವಸ್ಥೆಯಾಗಿದ್ದು, ದೇಶೀಯ ಕ್ಷಿಪಣಿಗಳನ್ನು ಒಳಗೊಂಡಿದೆ. ಇದರಲ್ಲಿ ನೆಲದಿಂದ ಆಗಸಕ್ಕೆ ಗುರಿ ಹೊಡೆಯುವ ಕ್ಯೂಆರ್‌ಎಸ್‌ಎಎಂ ಕ್ಷಿಪಣಿ, ಕಡಿಮೆ ವ್ಯಾಪ್ತಿಯ ಗುರಿ ನಾಶ ಮಾಡುವ ‘ವಿಶಾರ್ಡ್ಸ್‌’ ವ್ಯವಸ್ಥೆ ಮತ್ತು ಲೇಸರ್ ಆಧಾರಿತ ಅಧಿಕ ಶಕ್ತಿ ಶಸ್ತ್ರಾಸ್ತ್ರಗಳು (DEW) ಸೇರಿವೆ.* ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕೇಂದ್ರೀಕೃತ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ. ಕಮಾಂಡ್‌ ವ್ಯವಸ್ಥೆಯನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದು, ‘ವಿಶಾರ್ಡ್ಸ್‌’ ಅನ್ನು ರಿಸರ್ಚ್‌ ಸೆಂಟರ್‌ ಇಮಾರತ್ ಮತ್ತು ಡಿಇಡಬ್ಲುಗಳನ್ನು ಸೆಂಟರ್‌ ಫಾರ್‌ ಹೈ ಎನರ್ಜಿ ಸಿಸ್ಟಮ್ಸ್‌ ಅಂಡ್‌ ಸೈನ್ಸಸ್‌ ಅಭಿವೃದ್ಧಿಪಡಿಸಿದೆ.