Job Description: * ಪ್ರಸ್ತುತ ದೇಶದ ಅಭಿವೃದ್ಧಿಗೆ ಅಪಾರವಾದ ಕೊಡುಗೆಗಳನ್ನು ನೀಡಿರುವ ವಿಜ್ಞಾನಿಗಳನ್ನು ಗುರುತಿಸಲು ಪ್ರತಿ ವರ್ಷ ಫೆಬ್ರವರಿ 28ರಂದು ರಾಷ್ಟ್ರೀ ಯ ವಿಜ್ಞಾನ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಹಿಂದೆ ಈ ದಿನದಂದು 1928 ರಲ್ಲಿ ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರದಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಚಂದ್ರಶೇಖರ ವೆಂಕಟ ರಾಮನ್ (C.V.Raman) ಒಂದು ಪ್ರಮುಖ ಆವಿಷ್ಕಾರವನ್ನು ಮಾಡಿರುವ ಹಿನ್ನಲೆಯಿಂದಾಗಿ ಆ ದಿನವನ್ನು ರಾಷ್ಟ್ರೀ ಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತದೆ. ಆಂದಿನಿಂದಲೂ ಆ ಆವಿಷ್ಕಾರವನ್ನು "ರಾಮನ್ ಎಫೆಕ್ಟ್" ಎಂದು ಕರೆಯಲಾಗುತ್ತಿದೆ. * ಸಿ.ವಿ. ರಾಮನ್ ಅವರು ಈ ಹಿಂದೆ ಕೋಲ್ಕತ್ತಾದ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್‌ನ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ರಾಮನ್ ಪರಿಣಾಮವನ್ನು ಕಂಡು ಹಿಡಿದಿದ್ದಾರೆ. ಈ ಕಾರ್ಯಕ್ಕಾಗಿ ಇವರಿಗೆ ಈ ಹಿಂದೆ 1930 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. * ಪ್ರಸ್ತುತ 2022 ರ ರಾಷ್ಟ್ರೀಯ ವಿಜ್ಞಾನ ದಿನದ ವಿಷಯವನ್ನು 'ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಹಾಗೂ ತಂತ್ರಜ್ಞಾನದ ಸಂಯೋಜಿತ ವಿಧಾನ' ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗಿದೆ. * ಈ ಹಿಂದೆ 1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್ (NCSTC) ಫೆಬ್ರವರಿ 28 'ನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಘೋಷಣೆ ಮಾಡಲು ಭಾರತ ಸರ್ಕಾರವನ್ನು ಕೇಳಿಕೊಂಡಿತು. ಈ ಮಾನವೀಯ ಮೇರೆಗೆ ಸರ್ಕಾರವು ಫೆಬ್ರವರಿ 28 ನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಅಂಗೀಕರಿಸಿ ಘೋಷಿಸಿತ್ತು. ಮೊಟ್ಟ ಮೊದಲ ರಾಷ್ಟ್ರೀಯ ವಿಜ್ಞಾನ ದಿನವನ್ನು ಈ ಹಿಂದೆ 1987 ರ ಫೆಬ್ರವರಿ. 28 ರಂದು ಆಚರಣೆ ಮಾಡಲಾಗಿದೆ. * ಪ್ರಸ್ತುತ ಜನರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಹಿನ್ನಲೆಯಿಂದಾಗಿ ಈ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಸಿ.ವಿ. ರಾಮನ್‌ ಅವರು ನೊಬೆಲ್ ಪ್ರಶಸ್ತಿಯನ್ನು ಪಡೆದಿರುವ ಮೊಟ್ಟ ಮೊದಲ ಭಾರತೀಯ ವಿಜ್ಞಾನಿಯಾಗಿದ್ದಾರೆ, ಹಾಗೂ ಇವರು ತಮಿಳುನಾಡು ರಾಜ್ಯದವರಾಗಿದ್ದಾರೆ. * * ರಾಮನ್ ಎಫೆಕ್ಟ್ : ಇದೊಂದು ವಸ್ತುವಿನ ಮೂಲಕ ಫೋಟಾನ್‌ಗಳ ಅಸ್ಥಿರ ಸ್ಕ್ಯಾಟರಿಂಗ್ ಆಗಿದೆ, ಇದರ ಶಕ್ತಿಯ ವಿನಿಮಯ ಹಾಗೂ ಬೆಳಕಿನ ದಿಕ್ಕಿನಲ್ಲಿ ಬದಲಾವಣೆ ಇರಲಿದೆ. ಇದನ್ನು ವಿಶಿಷ್ಟವಾಗಿ ಪರಿಣಾಮವು ಗೋಚರ ಲೇಸರ್‌ನಿಂದ ಘಟನೆಯ ಫೋಟಾನ್‌ಗಳನ್ನು ಕಡಿಮೆ ಶಕ್ತಿಗೆ ವರ್ಗಾವಣೆ ಮಾಡುವದರಿಂದ ಅಣುವಿನಿಂದ ಕಂಪನ ಶಕ್ತಿಯನ್ನು ಪಡೆಯಲಾಗುತ್ತದೆ. ಅಷ್ಟೇ ಅಲ್ಲದೇ ಇದನ್ನು ಸಾಮಾನ್ಯ ಸ್ಟೋಕ್ಸ್ ರಾಮನ್ ಸ್ಕ್ಯಾಟರಿಂಗ್ ಎನ್ನಲಾಗುತ್ತದೆ. * ಬೆಳಕು ವಸ್ತುವಿನಿಂದ ಚದುರಿಹೋಗುವ ಒಂದು ನಿರ್ದಿಷ್ಟ ಸಂಭವನೀಯತೆಯನ್ನು ಹೊಂದಿದೆ. ರಾಮನ್ ಪರಿಣಾಮಕ್ಕೆ ಭಾರತೀಯ ವಿಜ್ಞಾನಿ ಸಿ.ವಿ. ರಾಮನ್ ಅವರ ಹೆಸರನ್ನು ಇಡಲಾಗಿದೆ. ರಾಮನ್ ಅವರು ಈ ಹಿಂದೆ 1934 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್‌ ಆಫ್ ಸೈನ್ಸ್‌ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು, ನಂತರದ ದಿನಗಳಲ್ಲಿ ಅಂದರೆ 1943 ರಲ್ಲಿ ರಾಮನ್ ಸಂಶೋಧನಾ ಕೆಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಿದರು. * ಸಿ.ವಿ ರಾಮನ್ ಅವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಭಾರತ ರತ್ನ ಪ್ರಶಸ್ತಿಯನ್ನು ಈ ಹಿಂದೆ 1954 ರಲ್ಲಿ ಪಡೆದುಕೊಂಡರು. ಇವರಿಗೆ ಈ ಮೊದಲು 1930 ರಲ್ಲಿ 'ನೊಬೆಲ್ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಗಿದೆ.