Job Description: * ಕನ್ನಡದ ಖ್ಯಾತ ನಿಘಂಟು ತಜ್ಞ, ಪದ್ಮಶ್ರೀ ಪುರಸ್ಕೃತ, ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ತಮ್ಮ 108 ನೇ ವರ್ಷ ವಯಸ್ಸಿನಲ್ಲಿ ಅನಾರೋಗ್ಯ ಕಾರಣದಿಂದಾಗಿ ಸಾವನ್ನಪಿದ್ದಾರೆ. * ಪ್ರೊ.ಜಿ. ವೆಂಕಟಸುಬ್ಬಯ್ಯ, ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಬಹಳ ಸಾಧನೆ ಮಾಡಿದ್ದಾರೆ. * ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಇಗೋ ಕನ್ನಡ ಎಂಬ ಅಂಕಣದ ಮೂಲಕ ಕನ್ನಡಿಗರ ಮನಸ್ಸು ಬಹಳ ಹತ್ತಿರವಾದವರು. * 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಪ್ರೊ.ಜಿ. ವೆಂಕಟಸುಬ್ಬಯ್ಯ ವಹಿಸಿಕೊಂಡಿದ್ದರು. * ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಪಡೆದ ಪ್ರಶಸ್ತಿಗಳು ಇಂತಿವೆ, ಪದ್ಮಶ್ರೀ, ಪಂಪ, ನಾಡೋಜ, ಭಾಷಾಸಮ್ಮಾನ್ ಹೀಗೆ ಹಲವು ಪ್ರಶಸ್ತಿಗಳನ್ನ ಪಡೆದು ಅಪಾರವಾದ ಸಾಧನೆಯನ್ನು ಮಾಡಿದ್ದಾರೆ. ಪ್ರೊ.ಜಿ. ವೆಂಕಟಸುಬ್ಬಯ್ಯ ರವರ ಬಗ್ಗೆ ಮಾಹಿತಿ : * ಜಿ.ವೆಂಕಟಸುಬ್ಬಯ್ಯ ಅಥವಾ ಜಿ. ವಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಗಂಜಾಂ ವೆಂಕಟಸುಬ್ಬಯ್ಯ ಅವರು ಕನ್ನಡ ಬರಹಗಾರ, ವ್ಯಾಕರಣಕಾರ, ಸಂಪಾದಕ, ನಿಘಂಟು, ಮತ್ತು ವಿಮರ್ಶಕರಾಗಿದ್ದರು. * ಅವರು ಎಂಟು ನಿಘಂಟುಗಳನ್ನು ಸಂಗ್ರಹಿಸಿದ್ದಾರೆ, ಕನ್ನಡದಲ್ಲಿ ನಿಘಂಟು ವಿಜ್ಞಾನದ ಬಗ್ಗೆ ನಾಲ್ಕು ಮೂಲ ಕೃತಿಗಳನ್ನು ಬರೆದಿದ್ದಾರೆ, ಅರವತ್ತು ಪುಸ್ತಕಗಳನ್ನು ಸಂಪಾದಿಸಿದ್ದಾರೆ ಮತ್ತು ಹಲವಾರು ಪತ್ರಿಕೆಗಳನ್ನು ಪ್ರಕಟಿಸಿದರು. * ಜನನ: 23 ಆಗಸ್ಟ್ 1913, ಮೈಸೂರು * ನಿಧನ: 19 ಏಪ್ರಿಲ್ 2021 * ಶಿಕ್ಷಣ: ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾಲಯ * ಪ್ರಶಸ್ತಿಗಳು: ಪದ್ಮಶ್ರೀ, ಪಂಪಾ ಪ್ರಶಸ್ತಿ ಹಾಗು ಇತರೆ