Job Description: ನವದೆಹಲಿ: ರಾಜ್ಯಸಭೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೂರೂವರೆ ತಾಸುಗಳ ಅವಧಿಯಲ್ಲಿ ಒಟ್ಟು ಏಳು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಯಿತು. ಅಂಗೀಕಾರಗೊಂಡ ಮಸೂದೆಗಳು : * ಸಹಕಾರ ಕ್ಷೇತ್ರದ ಬ್ಯಾಂಕ್ಗಳನ್ನು ಆರ್ಬಿಐ ನಿಯಂತ್ರಣಕ್ಕೆ ಒಳಪಡಿಸುವ ಬ್ಯಾಂಕಿಂಗ್ ನಿಯಂತ್ರಣ ಮಸೂದೆ * ಅಗತ್ಯ ವಸ್ತುಗಳ ಕಾಯ್ದೆ ವ್ಯಾಪ್ತಿಯಿಂದ ಬೇಳೆ-ಕಾಳುಗಳು, ಅಡುಗೆ ಎಣ್ಣೆ, ಈರುಳ್ಳಿ, ಬಟಾಟೆಯನ್ನು ಕೈಬಿಡುವ ತಿದ್ದುಪಡಿ ಮಸೂದೆ * ರಾಷ್ಟ್ರೀಯ ವಿಧಿ ವಿಜ್ಞಾನ ವಿ.ವಿ. ಮಸೂದೆ, * ಕಂಪೆನಿಗಳ (ತಿದ್ದುಪಡಿ) ಮಸೂದೆ, * ತೆರಿಗೆ ಮತ್ತು ಇತರ ಕಾಯ್ದೆಗಳು (ರಿಯಾಯಿತಿ ಮತ್ತು ಕೆಲವು ನಿಯಮಗಳಿಗೆ ತಿದ್ದುಪಡಿ) ಮಸೂದೆ ಸೇರಿ ವಿವಿಧ ಮಸೂದೆಗಳಿಗೆ ಅಂಗೀಕಾರ ನೀಡಲಾಯಿತು.