Job Description: * ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಕೃಷಿಯು ಯಾವಾಗಲೂ ಭಾರತೀಯರ ಹೆಗ್ಗುರುತು ಮತ್ತು ನಮ್ಮ ಕೃಷಿ ಕ್ಷೇತ್ರವು ಬೆಳೆದರೆ ಮಾತ್ರ ರಾಷ್ಟ್ರವಾಗಿ ನಾವು ಏಳಿಗೆ ಹೊಂದಲು ಸಾಧ್ಯ ಎಂದು ಹೇಳಿದರು.* ಇಂದು ಚಂಡೀಗಢದಲ್ಲಿ ಸಿಐಐ ಆಗ್ರೋ ಟೆಕ್ -2022 ಉದ್ಘಾಟನೆಯ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ಸುಸ್ಥಿರತೆ ಮತ್ತು ಆಹಾರ ಭದ್ರತೆಯು ಜೊತೆಜೊತೆಯಲ್ಲಿ ಸಾಗುತ್ತದೆ ಎಂದು ಹೇಳಿದರು. "ಸುಸ್ಥಿರ ಕೃಷಿ ಪದ್ಧತಿಗಳಿಲ್ಲದೆ ದೀರ್ಘಾವಧಿಯ ಆಹಾರ ಭದ್ರತೆ ಸಾಧ್ಯವಿಲ್ಲ" ಎಂದು ಅವರು ಒತ್ತಿ ಹೇಳಿದರು.* ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಚಂಡೀಗಢಕ್ಕೆ ಚೊಚ್ಚಲ ಪ್ರವಾಸದ ಮೇಲೆ ಇಂದು ಆಗಮಿಸಿದ ಶ್ರೀ ಧನಕರ್ ಅವರು, ಕೃಷಿಯನ್ನು ಭಾರತದ ಸಂಪ್ರದಾಯ ಮತ್ತು ಜೀವನ ವಿಧಾನವಾಗಿದೆ.* ಕೃಷಿ ಕ್ಷೇತ್ರದಲ್ಲಿ ಕಳೆದ 75 ವರ್ಷಗಳಲ್ಲಿ ಮಾಡಿರುವ ಪ್ರಗತಿಯನ್ನು ಉಲ್ಲೇಖಿಸಿದ ಅವರು, ಮುಂಬರುವ ವರ್ಷಗಳಲ್ಲಿ ನಮ್ಮ ಕೃಷಿಯನ್ನು ಹೊಸ ಅವಶ್ಯಕತೆಗಳು ಮತ್ತು ಹೊಸ ಸವಾಲುಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳುವ ಅಗತ್ಯವನ್ನು ರೂಢಿಸಿಕೊಳ್ಳುವದಾಗಿದೆ, "ನಾವೀನ್ಯವು ಕೃಷಿ ಬೆಳವಣಿಗೆಯ ಪ್ರಮುಖ ಚಾಲಕವಾಗಬೇಕು ಮತ್ತು ನಮ್ಮ ರೈತರು ಹವಾಮಾನ ಬದಲಾವಣೆ ಮತ್ತು ಬೆಲೆ ಏರಿಳಿತಗಳ ವಿರುದ್ಧ ರಕ್ಷಣೆ ಹೊಂದಿರಬೇಕು" ಎಂದು ಅವರು ಹೇಳಿದರು.* ನಮ್ಮ ರೈತರಿಗೆ ಸುಸ್ಥಿರ ಆದಾಯವನ್ನು ಸೃಷ್ಟಿಸುವ ಅಗತ್ಯವನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯತ್ತ ಹೆಚ್ಚಿನ ಗಮನ ಹರಿಸಲು ಕರೆ ನೀಡಿದರು.* ವಿಶ್ವಸಂಸ್ಥೆಯು 2023 ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸುವ ಭಾರತದ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಪ್ರಸ್ತಾಪಿಸಿದ ಶ್ರೀ ಧನಕರ್, ಆಹಾರದ ಕೊರತೆ, ನೀರಿನ ಕೊರತೆ ಮತ್ತು ಹಿಂದೆಂದೂ ಕಂಡಿಲ್ಲದ ಹವಾಮಾನ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ, ಸಿರಿಧಾನ್ಯಗಳ ಕೃಷಿಯತ್ತ ಗಮನ ಹರಿಸುವುದು ಉತ್ತಮ ಪರಿಹಾರವಾಗಿದೆ ಎಂದು ಹೇಳಿದರು.* ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಮಣ್ಣಿನ ಆರೋಗ್ಯ ಕಾರ್ಡ್ಗಳು, ಫಸಲ್ ಬಿಮಾ ಯೋಜನೆ ಮತ್ತು ಕುಸುಮ್ ಯೋಜನೆಗಳಂತಹ ರೈತರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ವಿವಿಧ ಉತ್ತೇಜಕ ಕ್ರಮಗಳ ಬಗ್ಗೆ ಹೇಳಿದ ಉಪಾಧ್ಯಕ್ಷರು, ರೈತರು ಭಾರತದ ಬೆಳವಣಿಗೆಯ ಬೆನ್ನೆಲುಬು; ಅವರ ಕಾಳಜಿಯನ್ನು ಸಹ ಪರಿಹರಿಸಲು ಕಾಳಜಿ ವಹಿಸಬೇಕು.* ಕೃಷಿ ವಲಯವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ವಿನೂತನ ಪರಿಹಾರಕ್ಕಾಗಿ ಕರೆ ನೀಡಿದ ಅವರು, ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಹೊಂದಿಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.