* ಕೇಂದ್ರದ ಮಾಜಿ ಮಂತ್ರಿ, ಬುಡಕಟ್ಟು ಜನಾಂಗದ ನಾಯಕ ದೇವ್ ಸಾಯಿ (ವಿಷ್ಣು ದೇವ ಸಾಯಿ) ಅವರು ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ.* ಬಿಜೆಪಿ ವೀಕ್ಷಕರ ಸಮ್ಮುಖದಲ್ಲಿ ನಡೆದ ಶಾಸಕರ ಸಭೆಯಲ್ಲಿ ಸಿಎಂ ಹುದ್ದೆಗೆ ವಿಷ್ಣುದೇವ್ ಸಾಯಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಶಾಸಕಾಂಗ ಸಭೆಯಲ್ಲಿ ಬಿಜೆಪಿ ಹೈಕಮಾಂಡ್ ಕಳಿಸಿದ್ದ ವೀಕ್ಷಕರ ತಂಡ ವಿಷ್ಣುದೇವ್ ಸಾಯಿ ಅವರ ಹೆಸರನ್ನು ಸೂಚಿಸಿದ್ದು, ಶಾಸಕರು ಅದನ್ನು ಅನುಮೋದಿಸಿದ್ದಾರೆ. ಛತ್ತೀಸ್ ಗಢದ ರಾಯ್ಸರ್‌ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವಿಷ್ಣುದೇವ್ ಸಾಯಿ, ಪ್ರಧಾನಿ ಮೋದಿ ಅವರ ಮೊದಲ ಅವಧಿಯಲ್ಲಿ ಉಕ್ಕು ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.* ಬಿಜೆಪಿಯ ದಿಲೀಪ್ ಸಿಂಗ್ ಜುದೇವ್ (ದಿವಂಗತ) 1990 ರಲ್ಲಿ ವಿಷ್ಣು ದೇವ್ ಸಾಯಿ ಅವರನ್ನು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲು ಪ್ರೋತ್ಸಾಹಿಸಿದರು. ಅದೇ ವರ್ಷದಲ್ಲಿ, ಸಾಯಿ ಅವರು ಅವಿಭಜಿತ ಮಧ್ಯಪ್ರದೇಶದ ತಪ್ಕರಾದಿಂದ (ಜಶ್ಪುರ್ ಜಿಲ್ಲೆಯಲ್ಲಿ) ಬಿಜೆಪಿ ಟಿಕೆಟ್‌ನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.* “...ಎಲ್ಲಾ ಪ್ರಾಮಾಣಿಕತೆಯಿಂದ ನಾನು ‘ಸಬ್ಕಾ ವಿಶ್ವಾಸ’ಕ್ಕಾಗಿ ಕೆಲಸ ಮಾಡುತ್ತೇನೆ ಮತ್ತು ‘ಮೋದಿ ಕಿ ಗ್ಯಾರಂಟಿ’ ಅಡಿಯಲ್ಲಿ ಛತ್ತೀಸ್‌ಗಢದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು. ರಾಜ್ಯದ ಮುಖ್ಯಮಂತ್ರಿಯಾಗಿ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ. ಜನರಿಗೆ 18 ಲಕ್ಷ ‘ಆವಾಸ್’ ನೀಡುವುದು ಮೊದಲ ಕೆಲಸ” ಎಂದು ವಿಷ್ಣು ದೇವು ಸಾಯಿ ಹೇಳಿದರು.*ನಿರ್ಗಮಿತ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ವಿಷ್ಣು ದೇವ ಸಾಯಿ ಅವರನ್ನು ಅಭಿನಂದಿಸಿದರು ಮತ್ತು ಅವರು ಛತ್ತೀಸ್‌ಗಢದ ನ್ಯಾಯ ಮತ್ತು ಪ್ರಗತಿಯ ಪ್ರಯಾಣವನ್ನು ಮುನ್ನಡೆಸಲಿ ಎಂದು ಹಾರೈಸಿದರು.