* ಭಾರತ ಮತ್ತು ಕೆನಡಾ ನಡುವೆ ಬಿಗುವಿನ ಸಂಬಂಧದ  ಮದ್ಯೆ ಭಾರತದಲ್ಲಿದ್ದ ಕೆನಡಾದ 41 ರಾಜತಾಂತ್ರಿಕರು ಹಾಗೂ ಅವರ ಕುಟುಂಬ ಸದಸ್ಯರನ್ನು ಕೆನಡಾ ವಾಪಸ್ ಕರೆಸಿಕೊಂಡಿದೆ. * ಭಾರತದಲ್ಲಿ ಇದರ ವಿಭಾಗವಾಗಿ ಬೆಂಗಳೂರು, ಚಂಡೀಗಢ ಹಾಗೂ ಮುಂಬಯಿಯಲ್ಲಿರುವ ರಾಯಭಾರ ಕಚೇರಿಗಳನ್ನು ಮುಚ್ಚಿದೆ. ಇದರಿಂದ ವೀಸಾ ಪ್ರಕ್ರಿಯೆಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. * ಪ್ರಸ್ತುತ ವೀಸಾ ಸೇವೆಗಾಗಿ ನೇರ ಸಮಾಲೋಚನೆ ಸೌಲಭ್ಯವು ದಿಲ್ಲಿಯಲ್ಲಿರುವ ಕೆನಡಾ ಹೈ ಕಮಿಷನ್' ಕಚೇರಿಯಲ್ಲಿ ಮಾತ್ರ ಲಭ್ಯವಿರಲಿದೆ ಎಂದು ಕೆನಡಾ ಹೇಳಿದೆ.