* ಕೇಂದ್ರೀಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಸಿಎಂಇಆರ್‌ಐ) ಪಿಎಸ್‌ಐಆರ್ ಪ್ರೈಮಾ ಇಟಿ11 ಟ್ರ್ಯಾಕ್ಟರ್ ಅನ್ನು ಅನಾವರಣಗೊಳಿಸಿದೆ.* ಇದು ಭಾರತದ ಪ್ರಪ್ರಥಮ ಸ್ವದೇಶಿ ಇ-ಟ್ರ್ಯಾಕ್ಟರ್ ಆಗಿದ್ದು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಅನಾವರಣಗೊಳಿಸಿದರು.* ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನಗಳನ್ನು ಕೃಷಿ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚಾಗಿ ಅಳವಡಿಸುವಂತೆ ಅವರು ಕರೆ ನೀಡಿದರು.* ಇ-ಟ್ರ್ಯಾಕ್ಟರ್, ಹನಿ ನೀರಾವರಿ, ಜಿನೋಮ್ ಸೀಕ್ವೆನ್ಸ್ ಬೇಸಾಯದಲ್ಲಿ ಸ್ಟಾರ್ಟಪ್‌ಗಳು ಆಸಕ್ತಿ ಪ್ರಮಾಣ ಹೆಚ್ಚುತ್ತಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು  ತಿಳಿಸಿದರು.* ಭಾರತದ ಕೃಷಿ ಕ್ಷೇತ್ರದಲ್ಲಿ ಅವುಗಳ ಸೂಕ್ತ ಬಳಕೆಗಾಗಿ ಐದು 'ಎಸ್' ಮಂತ್ರಗಳ ಹೋಲ್ಡರ್ಸ್, ಸ್ಟಾರ್ಟಪ್, ಸಿನರ್ಜೈಸಿಂಗ್ ಮತ್ತು ಸೈಟಜೈಸಿಂಗ್ -ಇವೇ ಆ ಪಂಚ ಎಸ್‌ಗಳು ಮಂತ್ರಗಳಿವೆ ಎಂದು ಸಚಿವ  ಜಿತೇಂದ್ರ ಸಿಂಗ್ ಅವರು ಎತ್ತಿ ತೋರಿಸಿದರು.