ರಾಜ್ಯದಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (AB-ArK) ಯೋಜನೆಯಡಿ, ಬೆನ್ನುಮೂಳೆ ವಿರೂಪ (ಸ್ಪೈನಲ್ ಡಿಫಾರ್ಮಿಟೀಸ್) ಸಮಸ್ಯೆಯಿಂದ ಬಳಲುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.🔹 ₹1.5 ಲಕ್ಷ ನೆರವು: ಶಸ್ತ್ರಚಿಕಿತ್ಸೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಪ್ರತಿ ಪೇಷಂಟ್‌ಗೆ 1.5 ಲಕ್ಷ ರೂ. ಪ್ಯಾಕೇಜ್ ಲಭ್ಯವಿದೆ. ಇದಕ್ಕಾಗಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಅಗತ್ಯ.🔹 ಚಿಕಿತ್ಸೆಗೆ ಒಳಪಡುವ ಕಾಯಿಲೆಗಳು:✔ ಸ್ಕೊಲಿಯಾಸಿಸ್✔ ಕಿಫೋಸಿಸ್✔ ಲಾರ್ಡೋಸಿಸ್ಈ ಸಮಸ್ಯೆಗಳ ಪೈಕಿ ಕೆಲವು ಷರತ್ತುಗಳೊಂದಿಗೆ ಉಚಿತ ಚಿಕಿತ್ಸಾ ಪಟ್ಟಿಗೆ ಸೇರಿಸಲಾಗಿದೆ.🔹 ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ನೆರವು:ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಾಗಿ 75% ಪಾವತಿಸಲು ಸೂಚನೆ ನೀಡಲಾಗಿದೆ. ಹೊಸ ಚಿಕಿತ್ಸೆ ಸೇರಿಸುವ ಅಥವಾ ಕೈಬಿಡುವ ಅವಶ್ಯಕತೆ ಕಂಡುಬಂದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.🔹 ದಂತ ಆರೋಗ್ಯಾಧಿಕಾರಿ ಹುದ್ದೆಗಳ ನೇಮಕ:8 ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಲಾಗಿದ್ದು, ಬಾಗಲಕೋಟೆಯ ಮುಧೋಳ ತಾಲೂಕು ಆಸ್ಪತ್ರೆ, ಗುಳೇದಗುಡ್ಡ, ಬೆಳಗಾವಿಯ ಮೂಡಲಗಿ, ಬೀದರ್‌ನ ಹುಲಸೂರು, ತುಮಕೂರಿನ ತಿರುಮಣಿ, ವಿಜಯಪುರದ ತಾಳಿಕೋಟೆ ಹಾಗೂ ಅಲ್ಮೇಲ್‌, ಯಾದಗಿರಿಯ ಕೊಡೈಕಲ್‌ ಆಸ್ಪತ್ರೆಗಳಿಗೆ ದಂತ ಆರೋಗ್ಯಾಧಿಕಾರಿ ನೇಮಿಸಲಾಗಿದೆ ಎಂದು ತಿಳಿಸಲಾಗಿದೆ.ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಹೊಸ ನೇಮಕಾತಿ ಮಾಡಲಾಗಿದೆ.ಈ ಯೋಜನೆಯಡಿ ಅಗತ್ಯವಿರುವ ಕುಟುಂಬಗಳು ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದ್ದಾರೆ.