* ಭಾರತದ ಕಡುಬಡತನವನ್ನು ಸಂಪೂರ್ಣವಾಗಿ  ತೊಡೆದುಹಾಕಿದೆ ಎಂದು ಅಮೆರಿಕದ ಥಿಂಕ್ ಟ್ಯಾಂಕ್ ಬ್ರೂಕಿಂಗ್ಸ್ ತನ್ನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ . * ಬ್ರೂಕಿಂಗ್ಸ್ ವರದಿಯ ಪ್ರಕಾರ ಹೆಚ್ಚಿನ ಬೆಳವಣಿಗೆ ಮತ್ತು ಅಸಮಾನತೆಯ ದೊಡ್ಡ ಕುಸಿತವು ಭಾರತದಲ್ಲಿ ಕಡುಬಡತನ ನಿರ್ಮೂಲನೆ ಮಾಡಲು ಸಹಾಯ ಮಾಡಿದೆ .* ಬಡತನ ಅನುಪಾತದಲ್ಲಿ ತೀವ್ರ ಕುಸಿತ ಮತ್ತು ಗೃಹಬಳಕೆಯ ವೆಚ್ಚದಲ್ಲಿ ಭಾರಿ ಹೆಚ್ಚಳ ಈ ವರದಿಯ ಪ್ರಕಾರ ತಿಳಿದುಬಂದಿದೆ.  * ಭಾರತದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಹನ್ನೊಂದು ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಲಾಯಿತು.* ಮೊದಲ ಪಂಚವಾರ್ಷಿಕ ಯೋಜನೆ (1951-1956) ಯೂ  ಮುಖ್ಯವಾಗಿ ಕೃಷಿ ಮತ್ತು ನೀರಾವರಿಯ ಮೇಲೆ ಕೇಂದ್ರೀಕರಿಸಿದೆ ಮತ್ತು ಸರ್ವತೋಮುಖ ಸಮತೋಲಿತ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.* ಭಾರತವು 2022-23ಕ್ಕೆ ತನ್ನ ಅಧಿಕೃತ ವೆಚ್ಚದ ಡೇಟಾವನ್ನು ಬಿಡುಗಡೆ ಮಾಡಿದೆ.* ಗ್ರಾಮೀಣ ಬೆಳವಣಿಗೆ ದರವು ಶೇ 3.1ಇದ್ದರೆ ನಗರಗಳ ಬೆಳವಣಿಗೆ ದರ ಶೇ ,2.6 ರಷ್ಟಿದೆ . ಬಡತನ ರೇಖೆಗಿಂತ  ಜನಸಂಖ್ಯೆಯ ಅನುಪಾತವು 2011-12ರಲ್ಲಿ ಶೇ.12.2ರಿಂದ  2022-2023 ರಲ್ಲಿ ಶೇ.2ಕ್ಕೆ ಇಳಿದಿದೆ. * ಈ ಅಂಕಿಅಂಶವು ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಜನರಿಗೆ  ಒದಗಿಸಿದ ಉಚಿತ ಆಹಾರ (ಗೋಧಿ ಮತ್ತು ಅಕ್ಕಿ), ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.