* ಭಾರತದ ಜೀವವೈವಿಧ್ಯ ಸಂರಕ್ಷಣೆ ಮತ್ತು ಪರಿಸರ ರಕ್ಷಣೆಯ ದೀರ್ಘಕಾಲೀನ ಗುರಿಯನ್ನು ಸಾಧಿಸುವುದಕ್ಕಾಗಿ ಸರ್ಕಾರವು ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸುವುದನ್ನು ಮತ್ತು ವಿವಿಧ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ಸುಪ್ರೀಂ ಕೋರ್ಟ್ ಆದೇಶದ ಮೂಲಕ  ನಿಷೇಧಿಸಿದೆ.* ಅಭಯಾರಣ್ಯಗಳು ಅಂದರೆ ಕಾನೂನಿನ ಮೂಲಕ ರಕ್ಷಿಸಲ್ಪಟ್ಟ ಪ್ರದೇಶಗಳು; ಇವುಗಳಲ್ಲಿ ವನ್ಯಜೀವಿಗಳು, ಪಕ್ಷಿಗಳು, ಸಸ್ಯಜಾಲ, ಜಲ ಸಂಪತ್ತು ಮತ್ತು ಅಪರೂಪದ ಜಾತಿಗಳನ್ನು ಉಳಿಸುವುದು ಮುಖ್ಯ ಉದ್ದೇಶ.*  ಮುಖ್ಯ ನ್ಯಾಯಮೂರ್ತಿ ಭೂಷಣ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ ಚಂದ್ರನ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಟಿ.ಎನ್. ಗೋದಾವರ್ಮನ್ ತಿರುಮಲಪಾಡ್ ಪ್ರಕರಣದಲ್ಲಿ  ತೀರ್ಪು ನೀಡಿದೆ. ಈ ಹಿಂದೆ ಇಂತಹ ನಿಯಮವು ಕೇವಲ ಗೋವಾ ರಾಜ್ಯಕ್ಕೆ ಅನ್ವಯವಾಗಿತ್ತು; ಆದರೆ ಈಗ ಅದು ಇಡೀ ದೇಶಕ್ಕೆ ಅನ್ವಯವಾಗಲಿದೆ.* ಇಂತಹ ಪ್ರದೇಶಗಳ ಒಳಗೆ ಗಣಿಗಾರಿಕೆ ನಡೆಯುವುದರಿಂದ ಅರಣ್ಯ ನಾಶ, ಜಲ ಮಾಲಿನ್ಯ, ಭೂ ಕುಸಿತ, ಧ್ವನಿ ಮತ್ತು ವಾಯು ಮಾಲಿನ್ಯ ಸೇರಿದಂತೆ ಅನೇಕ ದೋಷಗಳು ಉಂಟಾಗುತ್ತವೆ. ಇದರಿಂದ ವನ್ಯಜೀವಿಗಳ ವಾಸಸ್ಥಾನಗಳು ಹಾಳಾಗುತ್ತವೆ, ಪರಿಸರದ ಸಮತೋಲನ ಕುಸಿಯುತ್ತದೆ, ಮತ್ತು ಕೆಲವು ಜಾತಿಗಳು ನಾಶವಾಗುವ ಅಪಾಯ ಎದುರಿಸಬಹುದು.* ಅಭಯಾರಣ್ಯಗಳಲ್ಲಿ ಗಣಿಗಾರಿಕೆ ನಿಷೇಧಿಸುವ ಪ್ರಮುಖ ಕಾರಣಗಳಲ್ಲಿ ಒಂದು ಎಂದರೆ ಜೈವಿಕ ವೈವಿಧ್ಯತೆಯ ರಕ್ಷಣೆ. ಗಣಿಗಾರಿಕೆ ಯಂತ್ರೋಪಕರಣಗಳು, ರಾಸಾಯನಿಕಗಳು ಹಾಗೂ ಸ್ಫೋಟಕಗಳ ಬಳಕೆ ವನ್ಯಜೀವಿಗಳ ಜೀವನ ವಲಯವನ್ನು ಗಂಭೀರವಾಗಿ ಅಸ್ತವ್ಯಸ್ತಗೊಳಿಸುತ್ತವೆ.* ಇನ್ನೊಂದು ಪ್ರಮುಖ ಅಂಶವೆಂದರೆ ಪರಿಸರದ ದೀರ್ಘಕಾಲೀನ ಶಾಶ್ವತತೆ. ಗಣಿಗಾರಿಕೆಯಿಂದ ಮಣ್ಣಿನ ಗುಣಮಟ್ಟ ಕುಸಿಯುವುದು, ನದಿಗಳು ಮತ್ತು ಜಲಾಶಯಗಳು ಮಾಲಿನ್ಯಗೊಳ್ಳುವುದು ಸಾಮಾನ್ಯ. ಹೀಗಾಗಿ ಅಲ್ಲಿನ ಸ್ಥಳೀಯ ಜನರಿಗೆ ಕುಡಿಯುವ ನೀರು ಮತ್ತು ಕೃಷಿ ಭೂಮಿಗಳ ಮೇಲೂ ದುಷ್ಪರಿಣಾಮಗಳು ಬೀಳುತ್ತವೆ. ಅರಣ್ಯ ನಾಶವಾದರೆ ಮಳೆಯ ಪ್ರಮಾಣ, ತಾಪಮಾನ, ಗಾಳಿಯ ಗುಣಮಟ್ಟ ಹಾಗೂ ಕಾರ್ಬನ್ ಶೋಷಣೆಯ ಮೇಲೆ ದುಷ್ಪರಿಣಾಮಗಳು  ಉಂಟಾಗುತ್ತದೆ.* ಸರ್ಕಾರ ಮತ್ತು ನ್ಯಾಯಾಲಯಗಳು ಅಭಯಾರಣ್ಯ ಪ್ರದೇಶಗಳನ್ನು ಸಂಪೂರ್ಣ ‘ಇಕೋ ಸೆನ್ಸಿಟಿವ್ ಜೋನ್’ (Eco-Sensitive Zone) ಎಂದು ಘೋಷಿಸಿ, ಯಾವುದೇ ರೀತಿಯ ವಾಣಿಜ್ಯ ಗಣಿಗಾರಿಕೆಗೆ ಅವಕಾಶ ನೀಡದ ನೀತಿಯನ್ನು ಅನುಸರಿಸುತ್ತಿವೆ.* ಅಭಯಾರಣ್ಯಗಳಲ್ಲಿ ಗಣಿಗಾರಿಕೆ ನಿಷೇಧವು ಪರಿಸರ-ಸಾಮಾಜಿಕ ಸಮತೋಲನ ರಕ್ಷಣೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ಪ್ರಕೃತಿ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗಳಿಗೆ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.* ಜೀವ ವೈವಿಧ್ಯತೆ, ಪರಿಸರದ ಆರೋಗ್ಯ, ಗ್ರಾಮೀಣ ಜನರ ಜೀವನೋಪಾಯ ಮತ್ತು ದೇಶದ ಪರಿಸರ ಭದ್ರತೆ— ಇವುಗಳನ್ನು ಕಾಪಾಡಲು ಈ ನಿಷೇಧ ಅತ್ಯಗತ್ಯ. ಹೀಗಾಗಿ, ಸಂರಕ್ಷಿತ ಪ್ರದೇಶಗಳಲ್ಲಿ ಗಣಿಗಾರಿಕೆ ನಿಷೇಧವು ಶಾಶ್ವತ ಅಭಿವೃದ್ಧಿ ಮತ್ತು ಪ್ರಾಕೃತಿಕ ಸಂಪತ್ತಿನ ಸಂರಕ್ಷಣೆಗೆ ಪರಮಾವಶ್ಯಕ ಎಂಬುದು ಸ್ಪಷ್ಟ.